ಬೆಂಗಳೂರಿನಲ್ಲಿ 368 ಮರಗಳ ನೆಲಸಮ ಸಾಧ್ಯತೆ: ಕಂಟೋನ್ಮೆಂಟ್ ವಾಣಿಜ್ಯ ಯೋಜನೆಗೆ ವ್ಯಾಪಕ ಆಕ್ರೋಶ

ಈ ಬೆಳವಣಿಗೆಯ ಮಧ್ಯೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಅರಣ್ಯ ವಿಭಾಗವು ಯೋಜನೆಗೆ ಅನುಮೋದನೆ ನೀಡುವ ಮೊದಲು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿದೆ.
Peepal tree
ಆಲದ ಮರ
Updated on

ಬೆಂಗಳೂರು: ಕಂಟೋನ್ಮೆಂಟ್‌ನಲ್ಲಿ ರೈಲ್ವೆ ಇಲಾಖೆಯಿಂದ ಜಾರಿಗೆ ತಂದಿರುವ ವಾಣಿಜ್ಯ ಅಭಿವೃದ್ಧಿ ಯೋಜನೆಯು ವಿವಾದಕ್ಕೆ ಕಾರಣವಾಗಿದೆ. ಇದಕ್ಕಾಗಿ ನೂರಾರು ವರ್ಷಗಳು ಹಳೆಯದಾದ ಆಲದ ಮರ, ರಬ್ಬರ್ ಮತ್ತು ಕ್ರಿಸ್‌ಮಸ್ ಮರಗಳು ಸೇರಿದಂತೆ 368 ಮರಗಳನ್ನು ಕಡಿಯಬೇಕಾಗುತ್ತದೆ.

ಈ ಬೆಳವಣಿಗೆಯ ಮಧ್ಯೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಅರಣ್ಯ ವಿಭಾಗವು ಯೋಜನೆಗೆ ಅನುಮೋದನೆ ನೀಡುವ ಮೊದಲು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿದೆ. ಈ ಪ್ರಸ್ತಾವನೆಯಿಂದ ಪರಿಸರ ಕಾರ್ಯಕರ್ತರು, ಮರಗಳನ್ನು ಕಡಿಯುವ ಯೋಜನೆಯನ್ನು ಸ್ಥಗಿತಗೊಳಿಸಬೇಕೆಂದು ಕರೆ ನೀಡಿದ್ದಾರೆ.

ಬಿಬಿಎಂಪಿ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ನೀಡಿದ ಆಕ್ಷೇಪಣಾ ಸೂಚನೆಯ ಪ್ರಕಾರ, ರೈಲ್ವೆ ಸಚಿವಾಲಯದ ರೈಲ್ವೆ ಭೂ ಅಭಿವೃದ್ಧಿ ಪ್ರಾಧಿಕಾರದ ಜಂಟಿ ಜನರಲ್ ಮ್ಯಾನೇಜರ್ (ಯೋಜನೆಗಳು/ತಜ್ಞ) ವಸಂತ ನಗರದ ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ಕಾಲೋನಿ ಆವರಣದಲ್ಲಿರುವ ಮರಗಳನ್ನು 'ವಾಣಿಜ್ಯ ಅಭಿವೃದ್ಧಿ ಯೋಜನೆ'ಗಾಗಿ ತೆಗೆಯಲು ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ಹೇಳಿದ್ದಾರೆ.

Peepal tree
ಬೆಂಗಳೂರು: ಕಂಟೋನ್ಮೆಂಟ್ ರೈಲು ನಿಲ್ದಾಣ ನವೀಕರಣ ವಿಳಂಬ; ಅವ್ಯವಸ್ಥೆಯ ಆಗರ

ಬಿಬಿಎಂಪಿ ಅರಣ್ಯ ವಿಭಾಗದ ಡಿಸಿಎಫ್ ಬಿಎಲ್‌ಜಿ ಸ್ವಾಮಿ, ಕಳೆದ ಶುಕ್ರವಾರ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ ಎಂದು ಹೇಳಿದರು. ಅಧಿಸೂಚನೆಯ ಪ್ರಕಾರ, ಯೋಜನೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಆಕ್ಷೇಪಣೆಗಳು, ಸಲಹೆ ಸೂಚನೆಗಳನ್ನು ಸಲ್ಲಿಸಲು 10 ದಿನಗಳ ಕಾಲಾವಕಾಶವಿದೆ.

ಯೋಜನೆಗೆ ಸಾರ್ವಜನಿಕ ಆಕ್ಷೇಪಣೆಗಳ ಆಧಾರದ ಮೇಲೆ, ರೈಲ್ವೆ ಇಲಾಖೆಯೊಂದಿಗೆ ಸಂವಹನ ನಡೆಸಲಾಗುವುದು. ಸಾರ್ವಜನಿಕರು ಮರಗಳನ್ನು ಕಡಿಯಲು ಒಲವು ತೋರದಿದ್ದರೆ, ಬಿಬಿಎಂಪಿ ಅರಣ್ಯ ಇಲಾಖೆಯು ಮರಗಳನ್ನು ಕಡಿಯಲು ಅನುಮತಿ ನೀಡುವುದಿಲ್ಲ ಎಂದು ಹೇಳಿದರು.

"'ಕಂಟೋನ್ಮೆಂಟ್ ಪಾರಂಪರಿಕ ಮರಗಳನ್ನು ಉಳಿಸಿ' ಎಂಬ ಶೀರ್ಷಿಕೆಯಡಿಯಲ್ಲಿ ಅಭಿಯಾನವನ್ನು ಪ್ರಾರಂಭಿಸಲಾಗುವುದು. ಬಿಬಿಎಂಪಿ ಅರಣ್ಯ ವಿಭಾಗದ ಮುಖ್ಯಸ್ಥರ ಇಮೇಲ್ ಖಾತೆ dcfbbmp12@gmail.com ಮತ್ತು ರೈಲ್ವೆ ಇಲಾಖೆಯ ಅಧಿಕೃತ ಇಮೇಲ್ ಖಾತೆ rldabangalore2022@gmail.com ಗೆ ಬರೆಯುವ ಮೂಲಕ ನಾಗರಿಕರು ತಮ್ಮ ಪ್ರತಿಭಟನೆಗಳನ್ನು ಸಲ್ಲಿಸಲು ಪ್ರೋತ್ಸಾಹಿಸಲಾಗುವುದು ಮತ್ತು ಮನವಿ ಮಾಡಲಾಗುವುದು ಎಂದು ನಿಶಾಂತ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com