ಮತಕಳ್ಳತನ: ರಾಹುಲ್ ಗಾಂಧಿ ಆರೋಪಗಳ ಬಗ್ಗೆ ಮುಖ್ಯ ಚುನಾವಣಾಧಿಕಾರಿಯಿಂದ ತನಿಖೆಗೆ ಒಪ್ಪಿಗೆ- DK Shivakumar

ಬಿಜೆಪಿಯ ಆರೋಪಗಳ ಬಗ್ಗೆ ಕೇಳಿದಾಗ, ಬಿಜೆಪಿ ಪಕ್ಷದ ಬಗ್ಗೆ ನನಗೆ ಯಾವುದೇ ಚಿಂತೆ ಇಲ್ಲ ಎಂದು ಶಿವಕುಮಾರ್ ಹೇಳಿದರು.
DK Shivakumar
ಡಿಕೆ ಶಿವಕುಮಾರ್online desk
Updated on

ಬೆಂಗಳೂರು: ಚುನಾವಣಾ ವಂಚನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆರೋಪಗಳ ಬಗ್ಗೆ ತನಿಖೆಗೆ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಆದೇಶಿಸಿದ್ದಾರೆ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶುಕ್ರವಾರ ಹೇಳಿದ್ದಾರೆ.

ಸಿಇಒ ಅನ್ಬುಕುಮಾರ್ ಅವರು ಶಿವಕುಮಾರ್ ಅವರನ್ನು ನಿಯಮದ ಪ್ರಕಾರ ಘೋಷಣೆ ಅಥವಾ ಪ್ರಮಾಣವಚನದೊಂದಿಗೆ ತಮ್ಮ ಹಕ್ಕುಗಳನ್ನು ಬೆಂಬಲಿಸುವ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.

ತಮ್ಮ ನೇತೃತ್ವದ ಕಾಂಗ್ರೆಸ್ ನಿಯೋಗ ಅನ್ಬುಕುಮಾರ್ ಅವರಿಗೆ ಜ್ಞಾಪಕ ಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು (ಸಿಇಒ ಕಚೇರಿ) ತನಿಖೆಯನ್ನು ಪ್ರಾರಂಭಿಸಿರುವುದಾಗಿ ತಿಳಿಸಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. "ಇದನ್ನು ತಿಳಿದು ನನಗೆ ಸಂತೋಷವಾಯಿತು." ಎಂದಿರುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷರೂ ಆಗಿರುವ ಶಿವಕುಮಾರ್, ದಾಖಲೆಗಳು ಮತ್ತು ಪುರಾವೆಗಳನ್ನು ಪಡೆಯಲು ಮತ್ತೆ ಸಿಇಒ ಕಚೇರಿಗೆ ಭೇಟಿ ನೀಡುವುದಾಗಿ ಹೇಳಿದರು.

"ಮೊದಲ ಹಂತದಲ್ಲಿ, ಅಂತಹ ಘಟನೆಗಳು ನಡೆದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ವಿವರಗಳನ್ನು ಒದಗಿಸಲು ನಾವು ಅವರನ್ನು ಕೇಳಿದ್ದೇವೆ" ಎಂದು ಉಪಮುಖ್ಯಮಂತ್ರಿ ಹೇಳಿದರು.

ಬಿಜೆಪಿಯ ಆರೋಪಗಳ ಬಗ್ಗೆ ಕೇಳಿದಾಗ, ಬಿಜೆಪಿ ಪಕ್ಷದ ಬಗ್ಗೆ ನನಗೆ ಯಾವುದೇ ಚಿಂತೆ ಇಲ್ಲ ಎಂದು ಶಿವಕುಮಾರ್ ಹೇಳಿದರು.

"ಅವರು (ಬಿಜೆಪಿ ನಾಯಕರು) ಏನು ಬೇಕಾದರೂ ಹೇಳಲಿ. ನಾವು ನ್ಯಾಯಾಲಯ, ನ್ಯಾಯಾಧೀಶರು, ಸ್ವಾಯತ್ತ ಅಧಿಕಾರ ಹೊಂದಿರುವ ಆಯೋಗವನ್ನು ಕೇಳುತ್ತಿದ್ದೇವೆ. ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು, ಚುನಾವಣೆ ನಡೆಸುವುದು ಮತ್ತು ತಕ್ಷಣ ವಿಷಯಗಳನ್ನು ಸರಿಪಡಿಸುವುದು ಚುನಾವಣಾ ಆಯೋಗದ ಜವಾಬ್ದಾರಿಯಾಗಿರುವುದರಿಂದ ಕ್ರಮ ಕೈಗೊಳ್ಳುವಂತೆ ನಾವು (ಚುನಾವಣಾ ಆಯೋಗ) ಅವರನ್ನು ವಿನಂತಿಸಿದ್ದೇವೆ" ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

DK Shivakumar
'ಸಂಸತ್ತಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದೇನೆ': ಅಫಿಡವಿಟ್ ಕೇಳಿದ EC ವಿರುದ್ಧ ರಾಹುಲ್ ಗಾಂಧಿ ಕಿಡಿ; ಚುನಾವಣಾ ಆಯೋಗಕ್ಕೆ 5 ಪ್ರಶ್ನೆ

ಲೋಕಸಭಾ ಚುನಾವಣೆಯ ಸಮಯದಲ್ಲಿ ಮಹದೇವಪುರ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದ ಚುನಾವಣಾ ವಂಚನೆ ನಡೆದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ ನಂತರ ಶಿವಕುಮಾರ್ ಸಿಇಒ ಅನ್ಬುಕುಮಾರ್ ಅವರಿಗೆ ಜ್ಞಾಪಕ ಪತ್ರ ಸಲ್ಲಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಧಾನಸಭಾ ಕ್ಷೇತ್ರ ವರುಣಾ ಮತ್ತು ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಅವರ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಕಲಿ ಮತದಾರರಿದ್ದಾರೆ ಎಂದು ಮಹದೇವಪುರದ ಮಾಜಿ ಶಾಸಕ ಅರವಿಂದ್ ಲಿಂಬಾವಳಿ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು ಚುನಾವಣಾ ಆಯೋಗ ಅದನ್ನೂ ತನಿಖೆ ಮಾಡಬೇಕು ಎಂದು ಹೇಳಿದ್ದಾರೆ.

"ನನ್ನ ಕ್ಷೇತ್ರದಲ್ಲಿ (ಕನಕಪುರ) ಅಂತಹ ಸಮಸ್ಯೆಗಳಿದ್ದರೂ ನನಗೆ ಅಭ್ಯಂತರವಿಲ್ಲ. ವಂಚನೆಯಲ್ಲಿ ತೊಡಗಿರುವ ಮತ್ತು ದುರುಪಯೋಗದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು" ಎಂದು ಡಿಸಿಎಂ ಆಗ್ರಹಿಸಿದ್ದಾರೆ.

ದಾಖಲೆ ಸಲ್ಲಿಸಲು ಶಿವಕುಮಾರ್ ಗೆ ಸೂಚನೆ

ಶಿವಕುಮಾರ್ ಅವರಿಗೆ ಬರೆದ ಪತ್ರದಲ್ಲಿ ಸಿಇಒ, "08.08.2025 ರಂದು ಸಲ್ಲಿಸಲಾದ ನಿಮ್ಮ ಪತ್ರಕ್ಕೆ ಸಂಬಂಧಿಸಿದಂತೆ, ಪ್ರಾತಿನಿಧ್ಯದಲ್ಲಿ ಮಾಡಲಾದ ಉಲ್ಲೇಖಗಳನ್ನು ಬೆಂಬಲಿಸುವ ಯಾವುದೇ ದಾಖಲೆಗಳನ್ನು ನೀವು ಸಲ್ಲಿಸಿಲ್ಲ" ಎಂದು ಹೇಳಿದ್ದಾರೆ.

"ದೂರಿನ ಮೇಲೆ ಕ್ರಮ ಕೈಗೊಳ್ಳಲು, ಮತದಾರರ ನೋಂದಣಿ ನಿಯಮಗಳು, 1960 ರ ನಿಯಮ 20(3)(b) ರ ಪ್ರಕಾರ ಘೋಷಣೆ/ಪ್ರಮಾಣದ ಜೊತೆಗೆ ನಿಮ್ಮ ದೂರಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲು ನಿಮ್ಮನ್ನು ಇಲ್ಲಿ ವಿನಂತಿಸಲಾಗಿದೆ" ಎಂದು ಅಧಿಕಾರಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com