Dharwad: ಕಾಲೇಜು ಕಾಂಪೌಂಡ್‌ಗೆ BRTS ಬಸ್ ಡಿಕ್ಕಿ; ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲ!

ಹುಬ್ಬಳ್ಳಿ-ಧಾರವಾಡ ಬಸ್ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ (HDBRTS) 'ಚಿಗರಿ' ಬಸ್ ಧಾರವಾಡದ ಜೆಎಸ್‌ಎಸ್ ಕಾಲೇಜಿನ ಕಾಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದಿದೆ.
BRTS bus Accident
ಚಿಗರಿ ಬಸ್ ಅಪಘಾತ
Updated on

ಧಾರವಾಡ: ಹುಬ್ಬಳ್ಳಿ-ಧಾರವಾಡ ಬಸ್ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ (HDBRTS) 'ಚಿಗರಿ' ಬಸ್ ಧಾರವಾಡದ ಜೆಎಸ್‌ಎಸ್ ಕಾಲೇಜಿನ ಕಾಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗೋಡೆ ಮುರಿದು ಬಸ್ ಕಾಲೇಜು ಆವರಣ ಪ್ರವೇಶಿಸಿತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಘಟನೆಯ ನಂತರ, ಸಾರ್ವಜನಿಕರು ಬಿಆರ್‌ಟಿಎಸ್ ಕಾರಿಡಾರ್ ಅನ್ನು ತಡೆದು ದಿಢೀರ್ ಪ್ರತಿಭಟನೆ ನಡೆಸಿದರು. ಆ ಸಮಯದಲ್ಲಿ ಪೊಲೀಸರ ಮಧ್ಯಪ್ರವೇಶಿಸಿ ಪ್ರತಿಭಟನಾಕಾರರನ್ನು ಚದುರಿಸಿದರು. ಆದರೆ ಸುಮಾರು 40 ನಿಮಿಷಗಳ ಕಾಲ ರಸ್ತೆ ತಡೆ ನಡೆಸಲಾಯಿತು. ಪ್ರಯಾಣಿಕರು, ವಿದ್ಯಾರ್ಥಿಗಳು ಮತ್ತು ಇತರ ಸಾರ್ವಜನಿಕರು ಸ್ವಲ್ಪದರಲ್ಲೇ ಪಾರಾಗಿದ್ದಾರೆ.

ಬಿಆರ್‌ಟಿಎಸ್‌ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ ಜೆಡ್ಡೆನ್ನವರ್, ಬಸ್ ಕಾಲೇಜು ಕ್ಯಾಂಪಸ್‌ಗೆ ಪ್ರವೇಶಿಸಿದೆ ಎಂದು ದೃಢಪಡಿಸಿದರು. ಸ್ಟೀರಿಂಗ್ ವೀಲ್‌ನಲ್ಲಿನ ಸಮಸ್ಯೆ ಇಂತಹ ಅಪಘಾತಕ್ಕೆ ಕಾರಣವಾಗಿದೆ. ಚಾಲಕನ ಸಮಯಪ್ರಜ್ಞೆ ಸಂಭವನೀಯ ಹಾನಿಯನ್ನು ತಪ್ಪಿಸಿದೆ. ಯಾವುದೇ ಪ್ರಯಾಣಿಕರು ಅಥವಾ ಇತರರಿಗೆ ಯಾವುದೇ ಗಾಯಗಳಾಗಿಲ್ಲ. ಇಲ್ಲಿಯವರೆಗೆ, ಸ್ಟೀರಿಂಗ್-ಸಂಪರ್ಕಿತ ಸಮಸ್ಯೆಯೇ ಕಾರಣ ಎಂದು ನಮಗೆ ತಿಳಿದುಬಂದಿದೆ ಎಂದರು.

BRTS bus Accident
ಬೆಂಗಳೂರಿನಲ್ಲಿ ಮಳೆ ಆರ್ಭಟ: ರಸ್ತೆ ತುಂಬ ನೀರು; ತಗ್ಗು ಪ್ರದೇಶಗಳು ಜಲಾವೃತ; Video

ಪದೇ ಪದೇ ದೂರುಗಳು ಬಂದರೂ ಬಿಆರ್‌ಟಿಎಸ್ ಬಸ್ ಗಳ ಸುರಕ್ಷತಾ ಕಾಳಜಿಗಳನ್ನು ಪರಿಹರಿಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಆರಂಭದಿಂದಲೂ ಪ್ರತಿಭಟನೆಗಳನ್ನು ನಡೆಸಲಾಗುತ್ತಿದೆ ಆದರೆ ಯಾವುದೇ ಅಧಿಕಾರಿಗಳು ಅಥವಾ ಚುನಾಯಿತ ಪ್ರತಿನಿಧಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ. ಬಸ್ ಈ ರೀತಿ ಅಪಘಾತಕ್ಕೀಡಾಗಿರುವುದು ಸುಮಾರು ಎಂಟನೇ ಬಾರಿಯಾಗಿದೆ ಎಂದು ಪ್ರತಿಭಟನಾಕಾರರೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com