ಬೆಂಗಳೂರಿನ ಉತ್ತರ-ದಕ್ಷಿಣ ಸುರಂಗ ಮಾರ್ಗಕ್ಕೆ ಪರಿಸರ ಅಧ್ಯಯನ ನಿರ್ಲಕ್ಷಿಸಬೇಡಿ: ತಜ್ಞರ ಎಚ್ಚರಿಕೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಸುರಂಗಗಳು, ಎತ್ತರದ ಕಾರಿಡಾರ್‌ಗಳು ಮತ್ತು ಇತರ ದಟ್ಟಣೆ ನಿವಾರಣೆ ಯೋಜನೆಗಳನ್ನು ಅಧ್ಯಯನ ಮಾಡಲು 2024 ರಲ್ಲಿ ಆಲ್ಟಿನೋಕ್ ಕನ್ಸಲ್ಟಿಂಗ್ ನ್ನು ನಿಯೋಜಿಸಿತ್ತು.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಹೆಬ್ಬಾಳ ಮತ್ತು ಸಿಲ್ಕ್ ಬೋರ್ಡ್ ನಡುವಿನ (ಉತ್ತರ-ದಕ್ಷಿಣ ಸುರಂಗ) ಅತಿ ಉದ್ದದ ಸುರಂಗ ರಸ್ತೆ ಯೋಜನೆಗೆ ಬೆಂಗಳೂರು ಸಿದ್ಧತೆ ನಡೆಸುತ್ತಿರುವಾಗ, ಸಂಪೂರ್ಣ ಪರಿಸರ ಪರಿಣಾಮ ಮೌಲ್ಯಮಾಪನ (EIA)ವನ್ನು ನಿರ್ಲಕ್ಷಿಸುವುದರಿಂದ ನಗರವು ಭೌಗೋಳಿಕ ಅಪಾಯಗಳು, ನೀರಿನ ನಷ್ಟ ಮತ್ತು ಸುರಕ್ಷತಾ ಕಾಳಜಿಗಳಿಗೆ ಒಡ್ಡಿಕೊಳ್ಳಬಹುದು ಎಂದು ಪರಿಸರ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಸುರಂಗಗಳು, ಎತ್ತರದ ಕಾರಿಡಾರ್‌ಗಳು ಮತ್ತು ಇತರ ದಟ್ಟಣೆ ನಿವಾರಣೆ ಯೋಜನೆಗಳನ್ನು ಅಧ್ಯಯನ ಮಾಡಲು 2024 ರಲ್ಲಿ ಆಲ್ಟಿನೋಕ್ ಕನ್ಸಲ್ಟಿಂಗ್ ನ್ನು ನಿಯೋಜಿಸಿತ್ತು.

ವರದಿಯು ವಿವರವಾದ ಪರಿಸರ ಪರಿಣಾಮದ ಮೌಲ್ಯಮಾಪನ(EIA) ನ್ನು ಶಿಫಾರಸು ಮಾಡಿದೆ. 16 ಕಿಮೀ ಯೋಜನೆಗಾಗಿ ಸಿದ್ಧಪಡಿಸಲಾದ ಅಂತಿಮ ವಿವರವಾದ ಯೋಜನಾ ವರದಿ (DPR) 2006 ರ ಇಐಎ ಅಧಿಸೂಚನೆ ಮತ್ತು ನಂತರದ ತಿದ್ದುಪಡಿಗಳ ಅಡಿಯಲ್ಲಿ, ಸುರಂಗಗಳನ್ನು ಅನುಮತಿ ಅಗತ್ಯವಿರುವ ಯೋಜನೆಗಳಾಗಿ ವರ್ಗೀಕರಿಸಲಾಗಿಲ್ಲ ಎಂದು ಹೇಳುತ್ತದೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಪರಿಸರ ವಿಜ್ಞಾನ ಮತ್ತು ಪರಿಸರ ಇಲಾಖೆಯ ಮಾಜಿ ಕಾರ್ಯದರ್ಶಿ ಎ.ಎನ್. ಯಲ್ಲಪ್ಪ ರೆಡ್ಡಿ, ಉತ್ಖನನವನ್ನು ಪ್ರಾರಂಭಿಸುವ ಮೊದಲು ಪೂರ್ಣ ಪರಿಣಾಮ ಮತ್ತು ಅಪಾಯದ ಮೌಲ್ಯಮಾಪನವನ್ನು ನಡೆಸಬೇಕು ಎಂದು ಹೇಳಿದರು.

ಬ್ಲಾಸ್ಟಿಂಗ್ ಮೂಲಕ ಗ್ರಾನೈಟ್ ತಳಪಾಯವನ್ನು ಕತ್ತರಿಸುವುದು ಹತ್ತಿರದ ಎತ್ತರದ ಅಪಾರ್ಟ್‌ಮೆಂಟ್‌ಗಳ ಮೇಲೆ ಪರಿಣಾಮ ಬೀರಬಹುದು. ನಿರಂತರ ಬ್ಲಾಸ್ಟಿಂಗ್‌ನಿಂದಾಗಿ ರೀಚಾರ್ಜ್ ವ್ಯವಸ್ಥೆಗಳು ಮತ್ತು ಜಲಚರಗಳಿಗೆ ತೊಂದರೆಯುಂಟಾಗಬಹುದು ಎಂದರು.

Representational image
ಸುರಂಗ ರಸ್ತೆ ಯೋಜನೆ ಬಗ್ಗೆ ಪ್ರಧಾನಿ ಮೋದಿ ಮನವಿ ಕೇಳಿದ್ದಾರೆ: ಡಿಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರಿನ ಅಂತರ್ಜಲವು 50 ರಿಂದ 1,000 ಅಡಿ ಆಳದವರೆಗೆ ಕ್ರಿಯಾತ್ಮಕ, ಸ್ಥಿರ ಮತ್ತು ಪಳೆಯುಳಿಕೆ ನೀರಿನ ಪದರಗಳಲ್ಲಿ ಅಸ್ತಿತ್ವದಲ್ಲಿದೆ. ಸ್ಥಿರ ನೀರನ್ನು ಹರಿಸಿದರೆ, ಖಾಲಿ ಜಾಗಗಳು ಸೃಷ್ಟಿಯಾಗುತ್ತವೆ. ಇವುಗಳು ಭೂಕಂಪಗಳ ಸಮಯದಲ್ಲಿ ಅನಿರೀಕ್ಷಿತ ಅಪಾಯಗಳನ್ನು ಉಂಟುಮಾಡಬಹುದು. ಇದು ನಗರದ ಅತಿದೊಡ್ಡ ಮಾನವ ನಿರ್ಮಿತ ಪ್ರಮಾದಗಳಲ್ಲಿ ಒಂದಾಗಬಹುದು ಎಂದರು.

2006 ರ ಇಐಎ ವಿನಾಯಿತಿಯನ್ನು ಬಳಸಿಕೊಂಡು ಅಧಿಕಾರಿಗಳು ಹೊಣೆಗಾರಿಕೆಯನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು, ಮುನ್ನೆಚ್ಚರಿಕೆ ತತ್ವ ಮತ್ತು ಸುಪ್ರೀಂ ಕೋರ್ಟ್ ಆದೇಶಗಳಿಗೆ ಅಪಾಯ ವಿಶ್ಲೇಷಣೆ ಅಗತ್ಯವಿದೆ ಎಂದು ಅವರು ಹೇಳಿದರು.

Representational image
ಸುರಂಗ ರಸ್ತೆಯ ಬಗ್ಗೆ DULT ಪರಿಶೀಲನಾ ವರದಿ: BBMP ನಿರ್ಲಕ್ಷಿಸಿದೆಯೇ?

ರಸ್ತೆಗಳಲ್ಲಿ, ಮಾಲಿನ್ಯವು ಕನಿಷ್ಠ ತೆರೆದ ಗಾಳಿಯಲ್ಲಿ ಹರಡುತ್ತದೆ. ಮುಚ್ಚಿದ ಸುರಂಗದೊಳಗೆ, ಇಂಗಾಲದ ಮಾನಾಕ್ಸೈಡ್ ಮತ್ತು ಸಾರಜನಕ ಆಕ್ಸೈಡ್‌ಗಳಂತಹ ಹೊರಸೂಸುವಿಕೆಗಳು ಸಂಗ್ರಹವಾಗುತ್ತವೆ, ವಾತಾಯನ ನಾಳಗಳು ಈ ಮಾಲಿನ್ಯಕಾರಕಗಳನ್ನು ಹೊರಗೆ ತಳ್ಳಬಹುದು, ಆದರೆ ಅದು ಸುರಂಗ ನಿರ್ಗಮನಗಳಲ್ಲಿ ವಿಷಕಾರಿ ಗಾಳಿಯ ಕೇಂದ್ರೀಕೃತ ಹಾಟ್‌ಸ್ಪಾಟ್‌ಗಳನ್ನು ಮಾತ್ರ ಸೃಷ್ಟಿಸುತ್ತದೆ, ಹತ್ತಿರದ ನೆರೆಹೊರೆಗಳಿಗೆ ಪರಿಸರ ಅಪಾಯದ ಹೊಸ ಪದರವನ್ನು ಸೇರಿಸುತ್ತದೆ ಎಂದು 'ಜಲ ಭದ್ರತೆಗಾಗಿ ಒಕ್ಕೂಟ' ಮತ್ತು 'ಬೆಂಗಳೂರಿನ ನಾಗರಿಕರ ಕಾರ್ಯಸೂಚಿ'ಯ ಸಂಚಾಲಕ ಸಂದೀಪ್ ಅನಿರುಧನ್ ಹೇಳುತ್ತಾರೆ.

ಉತ್ತರಾಖಂಡದಲ್ಲಿ ಸಿಲ್ಕ್ಯಾರಾ ಸುರಂಗ ಕುಸಿತ ಘಟನೆಯ ನಂತರ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ರಾಷ್ಟ್ರೀಯ ಹೆದ್ದಾರಿಗಳಲ್ಲಿ (24 ಅಕ್ಟೋಬರ್ 2024 ರಂದು ನೀಡಲಾದ) ಉದ್ದದ ಸುರಂಗ (1.5 ಕಿ.ಮೀ.ಗಿಂತ ಹೆಚ್ಚು) ಯೋಜನಾ ಪ್ರಸ್ತಾವನೆಗಳನ್ನು ಸಲ್ಲಿಸಲು ಪರಿಶೀಲನಾಪಟ್ಟಿಯ ಭಾಗವಾಗಿ ಇಐಎಯನ್ನು ಪಟ್ಟಿ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com