ತುಮಕೂರು: ದೇಶದ್ರೋಹ ಚಟುವಟಿಕೆ ಆರೋಪ; ಎಂಎಫ್ಐ ವಿರುದ್ಧ ಕ್ರಮಕ್ಕೆ ಮುಸ್ಲಿಂ ಮುಖಂಡರ ಆಗ್ರಹ

ಈ ಸಂಘಟನೆಯ ನಂಬಿಕೆಗಳು ಇಸ್ಲಾಮಿಕ್ ತತ್ವಗಳಿಗೆ ವಿರುದ್ಧವಾಗಿವೆ. ಅವರ ಚಟುವಟಿಕೆಗಳು ಮುಗ್ಧ ಜನರನ್ನು ದಾರಿ ತಪ್ಪಿಸುತ್ತಿವೆ. ಭಾರತೀಯ ಮುಸ್ಲಿಮರಿಗೆ ಪಾಕಿಸ್ತಾನ ಮೂಲದ ಇಂತಹ ಸಂಘಟನೆಗಳು ಅಗತ್ಯವಿಲ್ಲ.
Muslim leaders
ದೂರು ಕೊಟ್ಟ ಮುಸ್ಲಿಂ ಸಮುದಾಯದ ನಾಯಕರು.
Updated on

ತುಮಕೂರು: ತುಮಕೂರಿನಲ್ಲಿ ಪಾಕಿಸ್ತಾನ ಮೂಲದ ಮೆಸ್ಸಿಹ್ ಫೌಂಡೇಶನ್ ಇಂಟರ್ನ್ಯಾಷನಲ್ (ಎಂಎಫ್ಐ) ದೇಶದ್ರೋಹ ಚಟುವಟಿಕೆಗಳನ್ನು ಹರಡುತ್ತಿದ್ದು, ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮುಸ್ಲಿಂ ಮುಖಂಡರು ಆಗ್ರಹಿಸಿದ್ದಾರೆ.

ಈ ಸಂಬಂಧ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ ವಿ ಅವರಿಗೆ ದೂರು ಸಲ್ಲಿಸಿರುವ ಅವರು, ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಮರ್ಕಜಿ ಮಜ್ಲಿಸ್ ಮುಶ್ವರತ್ ನೇತೃತ್ವದಲ್ಲಿ ಎಂಎಫ್ಐ ಚಟುವಟಿಕೆಗಳನ್ನು ಪ್ರಚಾರ ಮಾಡಿದ ಉಪ್ಪಾರಹಳ್ಳಿಯ ನಿವಾಸಿಯಾಗಿರುವ ಮಹಿಳೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದ್ದಾರೆ.

ಈ ಸಂಘಟನೆಯ ನಂಬಿಕೆಗಳು ಇಸ್ಲಾಮಿಕ್ ತತ್ವಗಳಿಗೆ ವಿರುದ್ಧವಾಗಿವೆ. ಅವರ ಚಟುವಟಿಕೆಗಳು ಮುಗ್ಧ ಜನರನ್ನು ದಾರಿ ತಪ್ಪಿಸುತ್ತಿವೆ. ಭಾರತೀಯ ಮುಸ್ಲಿಮರಿಗೆ ಪಾಕಿಸ್ತಾನ ಮೂಲದ ಇಂತಹ ಸಂಘಟನೆಗಳು ಅಗತ್ಯವಿಲ್ಲ. ಈ ಸಂಘಟನೆ ಸಮುದಾಯದ ಶಾಂತಿ, ಏಕತೆ ಮತ್ತು ಸಾಮರಸ್ಯಕ್ಕೆ ಅಪಾಯವನ್ನುಂಟು ಮಾಡುತ್ತಿದೆ ಎಂದು ಹೇಳಿದ್ದಾರೆ.

Muslim leaders
ಬಿಜೆಪಿ ಜೊತೆಗೆ ಸಖ್ಯ- ದಳಪತಿಗಳ ತಿರಸ್ಕರಿಸಿದ ಮುಸ್ಲಿಂ ಸಮುದಾಯ!

ಈ ಸಂಘಟನೆಯ ಸದಸ್ಯರು ಬೆಂಗಳೂರಿನಲ್ಲಿ ನಡೆಸಿದ್ದು, ತುಮಕೂರಿನ ಮಹಿಳೆಯೊಂದಿಗೆ ಸಂಪರ್ಕದ ಮೂಲಕ ಇಲ್ಲಿಗೆ ಬರುತ್ತಿದ್ದಾರೆ. ಈ ಸಂಘಟನೆಯ ಸದಸ್ಯರು ಇಸ್ಲಾಂ ಅಥವಾ ಮುಸ್ಲಿಂ ಸಮುದಾಯದೊಂದಿಗೆ ಯಾವುದೇ ಧಾರ್ಮಿಕ ಸಂಬಂಧವನ್ನು ಹೊಂದಿಲ್ಲ. ಇವರ ಹೆಸರುಗಳು ಮುಸ್ಲಿಮರಂತೆ ಕಾಣುತ್ತಿದ್ದರೂ, ಅವರ ನಂಬಿಕೆಗಳು ಮತ್ತು ಆಚರಣೆಗಳು ಸಂಪೂರ್ಣವಾಗಿ ಇಸ್ಲಾಂ ಧರ್ಮದ ವಿರುದ್ಧವಾಗಿದೆ. ಆದ್ದರಿಂದ, ನಗರದ ಮುಸ್ಲಿಂ ಸಮುದಾಯವು ಅವರನ್ನು ಗುರುತಿಸಬಾರದು ಅಥವಾ ಬೆಂಬಲಿಸಬಾರದು ಮತ್ತು ಅವರು ಯಾವುದೇ ಕಾನೂನುಬಾಹಿರ ಅಥವಾ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದರೆ, ಅದರ ಜವಾಬ್ದಾರಿಯನ್ನು ಸಮುದಾಯದ ಮೇಲೆ ಹಾಕಬಾರದು ಎಂದು ಮನವಿ ಮಾಡಿದ್ದಾರೆ.

ಅಧಿಕಾರಿಗಳು ತುಮಕೂರಿನಲ್ಲಿ ಈ ಸಂಘಟನೆಯ ಎಲ್ಲಾ ಚಟುವಟಿಕೆಗಳನ್ನು ಗುರುತಿಸಬೇಕು. ಈ ಸಂಘಟನೆಯ ಪ್ರಚಾರ ಸಭೆಗಳು ಅಥವಾ ಕರಪತ್ರಗಳನ್ನು ವಿತರಿಸುವುದನ್ನು ತಡೆಯಬೇಕು ಎಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com