ವಿಐಪಿಗಳಿಗೆ ಟ್ರೋಫಿ, ಸ್ಮರಣಿಕೆ ಬೇಡ; ಪರಿಸರ ಸ್ನೇಹಿ ವಸ್ತುಗಳನ್ನೇ ನೀಡಿ: ಅಧಿಕಾರಿಗಳಿಗೆ DPAR ಸೂಚನೆ

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ(ಪ್ರೋಟೋಕಾಲ್) ಎಲ್ಲಾ ಹಿರಿಯ ಅಧಿಕಾರಿಗಳು, ರಾಜ್ಯಪಾಲರ ಕಚೇರಿ, ಸಚಿವಾಲಯ ಮತ್ತು ಇತರ ಕಚೇರಿಗಳಿಗೆ ಹೊಸ ನಿಯಮವನ್ನು ಜಾರಿಗೆ ತರಲು ಸುತ್ತೋಲೆ ಹೊರಡಿಸಿದೆ.
No trophies for VIPs, give only eco-friendly items: DPAR to officials
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಇನ್ನು ಮುಂದೆ ಸರ್ಕಾರಿ ಅಥವಾ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಗಣ್ಯರಿಗೆ ಟ್ರೋಫಿಗಳು, ಸ್ಮರಣಿಕೆಗಳನ್ನು ನೀಡುವುದಕ್ಕೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ.

ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ(ಪ್ರೋಟೋಕಾಲ್) ಎಲ್ಲಾ ಹಿರಿಯ ಅಧಿಕಾರಿಗಳು, ರಾಜ್ಯಪಾಲರ ಕಚೇರಿ, ಸಚಿವಾಲಯ ಮತ್ತು ಇತರ ಕಚೇರಿಗಳಿಗೆ ಹೊಸ ನಿಯಮವನ್ನು ಜಾರಿಗೆ ತರಲು ಸುತ್ತೋಲೆ ಹೊರಡಿಸಿದೆ.

ಗಣ್ಯರಿಗೆ ಟ್ರೋಫಿ, ಸ್ಮರಣಿಕೆ ಬದಲಾಗಿ ಸ್ಥಳೀಯ ಕುಶಲಕರ್ಮಿಗಳು ತಯಾರಿಸಿದ ಕರಕುಶಲ ವಸ್ತುಗಳು, ಪುಸ್ತಕಗಳು, ಸಸಿಗಳನ್ನು ನೀಡಿ ಗೌರವಿಸಬೇಕು ಎಂದು ಡಿಪಿಎಆರ್ ಸೂಚಿಸಿದೆ.

No trophies for VIPs, give only eco-friendly items: DPAR to officials
SC ಒಳಮೀಸಲಾತಿ: ಪರಿಷ್ಕೃತ ಮೀಸಲಾತಿ ನಿಗದಿಗೆ DPAR ಆದೇಶ, ಸರ್ಕಾರಿ ಹುದ್ದೆ ನೇಮಕಾತಿಗಿದ್ದ ಅಡೆತಡೆ ದೂರ..!

"ಈ ಟ್ರೋಫಿಗಳನ್ನು ಗಣ್ಯರಿಗೆ ನೀಡುವಲ್ಲಿ ಒಳ್ಳೆಯ ಉದ್ದೇಶವಿದ್ದರೂ, ಈ ಪದ್ಧತಿಯು ಆರ್ಥಿಕ ಮತ್ತು ಪರಿಸರದ ಮೇಲೆ ಪರಿಣಾಮ ಬೀರುವುದರಿಂದ ಕಳವಳವನ್ನುಂಟುಮಾಡುತ್ತಿದೆ" ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಸರ್ಕಾರಿ ಮತ್ತು ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಗಣ್ಯರಿಗೆ ಹೂವಿನ ಹೂಗುಚ್ಛಗಳು, ಹಾರಗಳು, ಹಣ್ಣಿನ ಬುಟ್ಟಿಗಳು ಅಥವಾ ಶಾಲುಗಳನ್ನು ನೀಡಬಾರದು ಎಂಬ 2021ರ ಸುತ್ತೋಲೆಯ ಜೊತೆಗೆ ಬುಧವಾರದ ನಿರ್ದೇಶನವು ಇದೆ. ಬದಲಾಗಿ ಕನ್ನಡ ಪುಸ್ತಕಗಳನ್ನು ನೀಡುವಂತೆ ಕಾರ್ಯಕ್ರಮ ಸಂಘಟಕರಿಗೆ ನಿರ್ದೇಶನ ನೀಡಿದೆ.

ಲ್ಯಾಮಿನೇಟೆಡ್ ಮರದ ಫಲಕಗಳು, ಪ್ಲಾಸ್ಟಿಕ್, ಲೋಹ ಅಥವಾ ಗಾಜಿನ ಸ್ಮರಣಿಕೆಗಳಂತಹ ವಸ್ತುಗಳು ಪರಿಸರದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ ಎಂದು ಇತ್ತೀಚಿನ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com