ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರ ಕೊರತೆ, ಹಣಕಾಸು ಅಭಾವ: ಗುಣಮಟ್ಟದ ಶಿಕ್ಷಣಕ್ಕೆ ಹೊಡೆತ!

ನಿಯಮಿತ ನೇಮಕಾತಿ ಇಲ್ಲದ ಕಾರಣ, ಈ ಸಂಸ್ಥೆಗಳು ಹೆಚ್ಚಾಗಿ ಅತಿಥಿ ಅಧ್ಯಾಪಕರ ಮೇಲೆ ಅವಲಂಬಿತವಾಗಿವೆ. ಆದರೆ ಇದು ಹೊಣೆಗಾರಿಕೆಯ ಕೊರತೆಗೆ ಕಾರಣವಾಗಿದೆ, ಇದು ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಎಂದು ಶಿಕ್ಷಣ ತಜ್ಞರು ಹೇಳುತ್ತಾರೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜ್ಯದ ವಿಶ್ವವಿದ್ಯಾಲಯಗಳ ಕಾರ್ಯನಿರ್ವಹಣೆಯನ್ನು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ತೀವ್ರ ಕೊರತೆ ಕುಂಠಿತಗೊಳಿಸಿದೆ. ಹಳೆಯ ಸಂಸ್ಥೆಗಳು ಬೋಧಕರ ತೀವ್ರ ಕೊರತೆಯನ್ನು ಎದುರಿಸುತ್ತಿದೆ, ಹೀಗಾಗಿ ಹೊಸದಾಗಿ ರಚಿಸಲಾದ ವಿಶ್ವವಿದ್ಯಾಲಯಗಳು ಸಾಕಷ್ಟು ಪ್ರಾಧ್ಯಾಪಕರು ಮತ್ತು ಸರ್ಕಾರಿ ನಿಧಿಗಳಿಲ್ಲದೆ ಕಾರ್ಯನಿರ್ವಹಿಸುತ್ತಿವೆ.

ಇದರಿಂದ ಹೊಸ ವಿಶ್ವವಿದ್ಯಾಲಯಗಳು ಶುಲ್ಕವನ್ನು ತೀವ್ರವಾಗಿ ಹೆಚ್ಚಿಸಲು ಕಾರಣವಾಗಿದೆ, ಹೀಗಾಗಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗಿದೆ. ಮೈಸೂರು ವಿಶ್ವವಿದ್ಯಾಲಯ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಮಂಗಳೂರು ವಿಶ್ವವಿದ್ಯಾಲಯ ಸೇರಿದಂತೆ ಪ್ರತಿಷ್ಠಿತ ಮತ್ತು ಪ್ರಮುಖ ವಿಶ್ವವಿದ್ಯಾಲಯಗಳು ಬೋಧಕ ಸಿಬ್ಬಂದಿಯ ಸುಮಾರು ಶೇ. 70 ಕೊರತೆಯನ್ನು ಎದುರಿಸುತ್ತಿವೆ.

ನಿಯಮಿತ ನೇಮಕಾತಿ ಇಲ್ಲದ ಕಾರಣ, ಈ ಸಂಸ್ಥೆಗಳು ಹೆಚ್ಚಾಗಿ ಅತಿಥಿ ಅಧ್ಯಾಪಕರ ಮೇಲೆ ಅವಲಂಬಿತವಾಗಿವೆ. ಆದರೆ ಇದು ಹೊಣೆಗಾರಿಕೆಯ ಕೊರತೆಗೆ ಕಾರಣವಾಗಿದೆ, ಇದು ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಎಂದು ಶಿಕ್ಷಣ ತಜ್ಞರು ಹೇಳುತ್ತಾರೆ.

ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಪರಿಷತ್ತಿನ ಚಳಿಗಾಲದ ಅಧಿವೇಶನದಲ್ಲಿ ನೀಡಿದ ಮಾಹಿತಿಯ ಪ್ರಕಾರ, ರಾಜ್ಯದಲ್ಲಿರುವ 32 ವಿಶ್ವವಿದ್ಯಾಲಯಗಳಲ್ಲಿ ಪೈಕಿ ಐದು ವಿವಿಗಳು ಪೂರ್ಣ ಪ್ರಮಾಣದ ಉಪಕುಲಪತಿಗಳನ್ನು ಹೊಂದಿಲ್ಲ. ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ಅವರ ನಕ್ಷತ್ರ ಹಾಕದ ಪ್ರಶ್ನೆಗೆ ಉತ್ತರಿಸುತ್ತಿ ಅವರು. ಕೆಲವು ವರ್ಷಗಳ ಹಿಂದೆ ಮೂರು ಭಾಗಗಳಾಗಿ ವಿಂಗಡಿಸಲಾದ ಬೆಂಗಳೂರು ವಿಶ್ವವಿದ್ಯಾಲಯದ ಮೇಲೆ ತೀವ್ರವಾಗಿ ಪರಿಣಾಮ ಬೀರಿದೆ ಎಂದರು.

Representational image
ಕಾರು ಚಾಲಕನ ನಿವೃತ್ತಿಯ ದಿನದಂದು ತಾವೇ ಕಾರು ಚಲಾಯಿಸಿದ ಕರ್ನಾಟಕ ವಿವಿ ರಿಜಿಸ್ಟ್ರಾರ್!

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 'ಒಂದು ಜಿಲ್ಲೆ, ಒಂದು ವಿಶ್ವವಿದ್ಯಾಲಯ' ನೀತಿಯನ್ನು ಜಾರಿಗೆ ತಂದಿತು, ಇದು ಅಸ್ತಿತ್ವದಲ್ಲಿರುವ ವಿಶ್ವವಿದ್ಯಾಲಯಗಳ ಜೊತೆಗೆ ಹಲವಾರು ಜಿಲ್ಲಾ ವಿಶ್ವವಿದ್ಯಾಲಯಗಳನ್ನು ರಚಿಸಿತು. ಕೊಪ್ಪಳ, ಕೊಡಗು, ಹಾವೇರಿ, ಬಾಗಲಕೋಟೆ ಮತ್ತು ಹಾಸನ ಸೇರಿದಂತೆ ರಚಿಸಲಾದ ಅಂತಹ ಹತ್ತು ವಿಶ್ವವಿದ್ಯಾಲಯಗಳಲ್ಲಿ, ಬೀದರ್‌ನಲ್ಲಿ ಒಂದನ್ನು ಹೊರತುಪಡಿಸಿ ಉಳಿದೆಲ್ಲವೂ ಕಾರ್ಯಸಾಧ್ಯವಲ್ಲ ಎಂದು ಕಂಡುಬಂದಿದೆ. ಅಂದಿನಿಂದ ಸರ್ಕಾರ ಈ ವಿಶ್ವವಿದ್ಯಾಲಯಗಳನ್ನು ಅವುಗಳ ಮಾತೃ ಸಂಸ್ಥೆಗಳೊಂದಿಗೆ ವಿಲೀನಗೊಳಿಸಲು ನಿರ್ಧರಿಸಿದೆ. ಆದರೆ ಅದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ರಾಜ್ಯ ಸರ್ಕಾರ ಹೊಸ ವಿಶ್ವವಿದ್ಯಾಲಯಗಳನ್ನು ರಚಿಸಿ ಅವುಗಳನ್ನು ನಿಯಂತ್ರಿಸುವ ಕಾಯಿದೆಗಳನ್ನು ಜಾರಿಗೆ ತಂದಿದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

'ಬೈಲಾಗಳಿಲ್ಲದೆ ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆ

ಆದರೆ ಈ ವಿಶ್ವವಿದ್ಯಾಲಯಗಳು ಕಾರ್ಯನಿರ್ವಹಿಸಲು ಅಗತ್ಯವಾದ ಬೈಲಾಗಳನ್ನು ರೂಪಿಸದ ಕಾರಣ, ಬಹಳಷ್ಟು ಗೊಂದಲಗಳಿವೆ. ಸರ್ಕಾರವು ಮೊದಲು ಹೊಸ ವಿಶ್ವವಿದ್ಯಾಲಯಗಳಾಗಿ ಮಾರ್ಪಟ್ಟ ಕಾಲೇಜುಗಳಿಗೆ ಉಪನ್ಯಾಸಕರನ್ನು ನೇಮಿಸಿತ್ತು. ಈ ಉಪನ್ಯಾಸಕರನ್ನು ಬೇರೆ ಯಾವುದೇ ಸರ್ಕಾರಿ ಕಾಲೇಜು ಅಥವಾ ವಿಶ್ವವಿದ್ಯಾಲಯಕ್ಕೆ ವರ್ಗಾಯಿಸಲಾಗುವುದಿಲ್ಲ. ಆದರೆ ಯಾವುದೇ ಬೈಲಾಗಳನ್ನು ರೂಪಿಸದ ಕಾರಣ, ಅವರು ಸಂದಿಗ್ಧ ಸ್ಥಿತಿಯಲ್ಲಿದ್ದಾರೆ ಎಂದು ಅವರು ವಿವರಿಸಿದರು.

Representational image
ಅಧ್ಯಾಪಕರ ನೇಮಕಾತಿ, ಪಿಎಚ್‌ಡಿ ಪ್ರದಾನ ವೇಳೆ ನಿಯಮ ಉಲ್ಲಂಘನೆ ಪರಿಶೀಲಿಸಲು ಸಮಿತಿ ರಚನೆ

ಸರ್ಕಾರಿ ಉಪನ್ಯಾಸಕರ ನಿವೃತ್ತಿ ವಯಸ್ಸು 60 ವರ್ಷಗಳು, ಆದರೆ ವಿಶ್ವವಿದ್ಯಾಲಯದ ಉಪನ್ಯಾಸಕರ ನಿವೃತ್ತಿ ವಯಸ್ಸು 62 ವರ್ಷಗಳು. ಸರ್ಕಾರಿ ಉಪನ್ಯಾಸಕರು ಹಳೆಯ ಪಿಂಚಣಿ ಯೋಜನೆಗೆ ಸೇರುತ್ತಾರೆ, ಆದರೆ ವಿಶ್ವವಿದ್ಯಾಲಯದ ಉಪನ್ಯಾಸಕರು ಹೊಸ ಪಿಂಚಣಿ ಯೋಜನೆಯಡಿಯಲ್ಲಿ ಬರುತ್ತಾರೆ. ಹೀಗಾಗಿ ಕೆಲವರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ.

ಹೊಸ ವಿಶ್ವವಿದ್ಯಾಲಯಗಳನ್ನು ರಚಿಸಿದ ನಂತರ, ಸರ್ಕಾರವು ಅನುದಾನ ನೀಡುವುದನ್ನು ನಿಲ್ಲಿಸಿತು, ಇದರಿಂದಾಗಿ ಅವರು ಸ್ವತಂತ್ರವಾಗಿ ವೆಚ್ಚಗಳನ್ನು ನಿರ್ವಹಿಸಬೇಕಾಯಿತು ಎಂದು ಮೂಲಗಳು ತಿಳಿಸಿವೆ. ಹಣಕಾಸಿನ ಕೊರತೆಯಿಂದಾಗಿ, ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಶುಲ್ಕವನ್ನು ತೀವ್ರವಾಗಿ ಹೆಚ್ಚಿಸಿದವು, ಇದರ ಪರಿಣಾಮವಾಗಿ ಬಿಎ, ಬಿಕಾಂ ಮತ್ತು ಬಿಎಸ್ಸಿಯಂತಹ ಪದವಿಪೂರ್ವ ಕೋರ್ಸ್‌ಗಳ ದಾಖಲಾತಿಯಲ್ಲಿ ತೀವ್ರ ಕುಸಿತ ಕಂಡುಬಂದಿದೆ.

ಇದು ವಿಶೇಷವಾಗಿ ಆರ್ಥಿಕವಾಗಿ ದುರ್ಬಲ ವರ್ಗಗಳ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿದೆ. "ಸರ್ಕಾರವು ಅನುದಾನ ಅಥವಾ ಮೂಲಸೌಕರ್ಯವನ್ನು ಒದಗಿಸದೆ ಹೊಸ ವಿಶ್ವವಿದ್ಯಾಲಯಗಳನ್ನು ರಚಿಸಿದೆ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇಬ್ಬರ ಸ್ಥಿತಿಯ ಬಗ್ಗೆ ಸ್ಪಷ್ಟತೆ ಇಲ್ಲ" ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com