ಮೈಕ್ರೋ ಫೈನಾನ್ಸ್ ಕಿರುಕುಳ: ರಾಜ್ಯಪಾಲರು ಸೂಚಿಸಿದರೆ ಬದಲಾವಣೆ ಮಾಡ್ತೀವಿ- ಡಾ. ಜಿ.ಪರಮೇಶ್ವರ್

ರಾಜ್ಯಪಾಲರಿಗೆ ಈಗಾಗಲೇ ಕರಡು ಕಳಿಸಲಾಗಿದೆ. ಅವರು ಕಾನೂನು ತಜ್ಞರ ಜೊತೆಗೆ ಸಮಾಲೋಚಿಸಿ ಇಂದು ಸುಗ್ರೀವಾಜ್ಞೆಗೆ ಸಹಿ ಹಾಕಬಹುದು ಎಂಬ ನಿರೀಕ್ಷೆ ಇದೆ.
Dr. Parameshwar
ಡಾ. ಜಿ. ಪರಮೇಶ್ವರ್
Updated on

ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ರಾಜ್ಯ ಸರ್ಕಾರ ತರಲು ಹೊರಟಿರುವ ಸುಗ್ರೀವಾಜ್ಞೆಯಲ್ಲಿ ರಾಜ್ಯಪಾಲರು ಏನಾದರೂ ಬದಲಾವಣೆ ಸೂಚನೆ ಅದನ್ನು ಮಾಡಲು ನಾವು ಸಿದ್ಧರಿದ್ದೇವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಬುಧವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಜಿ. ಪರಮೇಶ್ವರ್, ರಾಜ್ಯಪಾಲರಿಗೆ ಈಗಾಗಲೇ ಕರಡು ಕಳಿಸಲಾಗಿದೆ. ಅವರು ಕಾನೂನು ತಜ್ಞರ ಜೊತೆಗೆ ಸಮಾಲೋಚಿಸಿ ಇಂದು ಸುಗ್ರೀವಾಜ್ಞೆಗೆ ಸಹಿ ಹಾಕಬಹುದು ಎಂಬ ನಿರೀಕ್ಷೆ ಇದೆ.

ಅದರಲ್ಲಿ ಏನಾದರೂ ಬದಲಾವಣೆಗೆ ಇಲ್ಲಿಯವರೆಗೂ ಸೂಚಿಸಿಲ್ಲ. ಒಂದು ವೇಳೆ ಬದಲಾವಣೆಗೆ ಸೂಚಿಸಿದರೆ ಕೂಡಲೇ ಅದನ್ನು ಬದಲಾವಣೆ ಮಾಡಿ, ಅವರ ಅನುಮೋದನೆಗಾಗಿ ವಾಪಸ್ ಕಳುಹಿಸುತ್ತೇವೆ ಎಂದರು.

"ದಂಡದ ಮೊತ್ತವನ್ನು 5 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ, ಆದ್ದರಿಂದ ಅಪರಾಧಿಗಳು ಕಾನೂನಿನ ಶಿಕ್ಷೆಗೆ ಒಳಗಾಗುತ್ತಾರೆ. ಅದಕ್ಕಾಗಿಯೇ ಕಾನೂನನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ನಿಜವಾದ ಪರಿಣಾಮ ಬೀರಲು ಜೈಲು ಶಿಕ್ಷೆ ಮತ್ತು ದಂಡದ ಮೊತ್ತ ಎರಡನ್ನೂ ಹೆಚ್ಚಿಸಲಾಗಿದೆ. ಆತ್ಮಹತ್ಯೆ ಮತ್ತು ಕಿರುಕುಳದ ಘಟನೆ ತಡೆಯುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.

Dr. Parameshwar
ಮೈಕ್ರೋ ಫೈನಾನ್ಸ್: ಕಿರುಕುಳ ನೀಡುವವರಿಗೆ ಕಾನೂನು ಮೂಲಕ ಬಿಸಿ ಮುಟ್ಟಿಸಲು ಸರ್ಕಾರ ಮುಂದು, ಶಿಕ್ಷೆ ಪ್ರಮಾಣ 10 ವರ್ಷಕ್ಕೆ ಹೆಚ್ಚಳ..!

ಮೈಕ್ರೋ ಫೈನಾನ್ಸ್ ಕಂಪನಿಗಳು ಹೊಸ ಕಾನೂನನ್ನು ಪ್ರಶ್ನಿಸಿ ಹೈಕೋರ್ಟ್ ಗೆ ತೆರಳಲು ಅವಕಾಶವಾಗದಂತೆ, ರಾಜ್ಯಸರ್ಕಾರಕ್ಕೆ ಹಿನ್ನಡೆವಾಗದಂತೆ ಸುಗ್ರೀವಾಜ್ಞೆ ಖಾತ್ರಿಪಡಿಸಲಾಗುತ್ತಿದೆ. ಹೀಗಾಗಿ ಅದರ ಜಾರಿಗೆ ವಿಳಂಬವಾಗುತ್ತಿದೆ. ಈ ವಿಷಯ ಕುರಿತು ವಿವರವಾಗಿ ಚರ್ಚಿಸಿದ್ದೇವೆ. ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಕಾನೂನು ಇಲಾಖೆಗೆ ಮುಖ್ಯಮಂತ್ರಿ ನಿರ್ದೇಶಿಸಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com