ಕುಂಭಮೇಳ ಅಪಘಾತದಲ್ಲಿ ಮೃತಪಟ್ಟ ನಾಲ್ವರ ಪಾರ್ಥಿವ ಶರೀರ ಬೆಳಗಾವಿಗೆ ಆಗಮನ

ಕುಂಭಮೇಳಕ್ಕಾಗಿ ಬೆಳಗಾವಿಯಿಂದ 18 ಜನರ ಗುಂಪು ಹೊರಟಿತ್ತು. ಫೆಬ್ರವರಿ 8 ರಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದರು ಮತ್ತು 17 ಜನರು ಗಂಭೀರವಾಗಿ ಗಾಯಗೊಂಡರು.
Locals carry bodies of the deceased in Belagavi on Sunday
ಬೆಳಗಾವಿಗೆ ಆಗಮಿಸಿದ ಶವಗಳು
Updated on

ಬೆಳಗಾವಿ: ಕುಂಭಮೇಳಕ್ಕೆ ಪ್ರಯಾಣಿಸುತ್ತಿದ್ದಾಗ ಅಪಘಾತದಲ್ಲಿ ಸಾವನ್ನಪ್ಪಿದ ಬೆಳಗಾವಿಯ ನಾಲ್ವರು ಜನರ ಶವಗಳು ಭಾನುವಾರ ಬೆಳಗಾವಿಗೆ ಆಗಮಿಸಿವೆ. ಬೆಳಗಾವಿಯ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ-48 ರಲ್ಲಿರುವ ಭೂತಾರಾಮನಹಟ್ಟಿ ಗ್ರಾಮಕ್ಕೆ ಶವಗಳನ್ನು ರವಾನಿಸಲಾಗಿದೆ.

ಶವಗಳನ್ನು ಅಧಿಕೃತ ಮೇಲ್ವಿಚಾರಣೆಯಲ್ಲಿ ಇಂದೋರ್‌ನಿಂದ ಸಾಗಿಸಲಾಯಿತು, ಅವರ ಕುಟುಂಬಗಳು ಪಾರ್ಥೀವ ಶರೀರಗಳನ್ನು ಸ್ವೀಕರಿಸಿದರು. ಕುಂಭಮೇಳಕ್ಕಾಗಿ ಬೆಳಗಾವಿಯಿಂದ 18 ಜನರ ಗುಂಪು ಹೊರಟಿತ್ತು. ಫೆಬ್ರವರಿ 8 ರಂದು ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದರು ಮತ್ತು 17 ಜನರು ಗಂಭೀರವಾಗಿ ಗಾಯಗೊಂಡರು.

ಮೃತರಲ್ಲಿ ಬೆಳಗಾವಿಯ ನಾಲ್ವರು ಸೇರಿದ್ದಾರೆ, ಅವರನ್ನು ಸಾಗರ್ ಶಹಾಪುರ್ಕರ್ (55), ಬಸವನ್ ಗಲ್ಲಿಯ ಚಾಲಕ ಬೆನಕನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕ್ರಾಂತಿ ನಗರದ ನೀತಾ ಬಡಮಂಜಿ (50) ಛತ್ರಪತಿ ಶಿವಾಜಿನಗರದ ಸಂಗೀತಾ ಮೈತ್ರೆ ಮತ್ತು ವಡ್ಗಾಂವ್‌ನ ಜ್ಯೋತಿ ಖಂಡೇಕರ್ ಎಂದು ಗುರುತಿಸಲಾಗಿದೆ.

ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಇಂದೋರ್ ಜಿಲ್ಲಾ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಗಾಯಾಳುಗಳು ಮತ್ತು ಮೃತ ದೇಹಗಳನ್ನು ತಲುಪಿಸುವಲ್ಲಿ ನೆರವು ನೀಡಿದ್ದಾರೆ. ಮೃತದೇಹಗಳನ್ನು ಭೂತರಾಮನಹಟ್ಟಿಯಲ್ಲಿ ಶಾಸಕ ಪಾಟೀಲ್, ಶ್ರೀ ರಾಮ ಸೇನೆ ಹಿಂದೂಸ್ತಾನ್ ಅಧ್ಯಕ್ಷ, ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಾಯಕ ರಮಾಕಾಂತ್ ಕೊಂಡುಸ್ಕರ್ ಮತ್ತು ಇತರರು ಸ್ವೀಕರಿಸಿದರು. ನಂತರ, ಶವಗಳನ್ನು ಆಯಾ ಸ್ಥಳಗಳಿಗೆ ಕೊಂಡೊಯ್ಯಲಾಯಿತು, ಅಲ್ಲಿ ಇಂದೋರ್‌ನ ಉಪ ತಹಶೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗಳು ಔಪಚಾರಿಕವಾಗಿ ಕುಟುಂಬಗಳಿಗೆ ಹಸ್ತಾಂತರಿಸಿದರು.

Locals carry bodies of the deceased in Belagavi on Sunday
ಭೀಕರ ಅಪಘಾತ: ಕುಂಭ ಮೇಳದಿಂದ ಹಿಂದಿರುಗುತ್ತಿದ್ದ ಬೆಳಗಾವಿಯ ನಾಲ್ವರು ಸೇರಿ ಆರು ಜನ ಸಾವು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com