4 ಲಕ್ಷ ರೂ ಗೆ 7 ವರ್ಷದ ಬಾಲಕನ ಮಾರಾಟ ಪ್ರಕರಣ: ನಾಲ್ವರ ಬಂಧನ; 3 ತಿಂಗಳಲ್ಲಿ ಇದು ಮೂರನೇ ಘಟನೆ!

ಶಿವಬಸಪ್ಪ ಮಗ್ದುಮ್ ಮತ್ತು ಕೊಲ್ಲಾಪುರ ಮತ್ತು ಕಾರವಾರದ ಕೆಲವು ಮಧ್ಯವರ್ತಿಗಳು ಬಾಲಕನನ್ನು ಬೆಳಗಾವಿ ನಗರದ ದಿಲ್ಶಾದ್ ಸಿಕಂದರ್ ತಹಶೀಲ್ದಾರ್ ಎಂಬ ಮಹಿಳೆಗೆ 4 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಳಗಾವಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಸುಲ್ತಾನಪುರದ ಏಳು ವರ್ಷದ ಬಾಲಕನನ್ನು 4 ಲಕ್ಷ ರೂಪಾಯಿಗೆ ಮಾರಾಟ ಮಾಡಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ. ಕಳೆದ ಮೂರು ತಿಂಗಳಲ್ಲಿ ಜಿಲ್ಲೆಯಲ್ಲಿ ವರದಿಯಾದ ಮೂರನೇ ಪ್ರಕರಣ ಇದಾಗಿದೆ.

ಬಂಧಿತರನ್ನು ಸುಲ್ತಾನಪುರದ ಸದಾಶಿವ ಶಿವಬಸಪ್ಪ ಮಗ್ದುಮ್ (32ವ), ಸುಲ್ತಾನಪುರದ ಭಾದ್ಗಾಂವ್ ಮೂಲದ ಲಕ್ಷ್ಮಿ ಬಾಬು ಗೋಲ್ಭಾವಿ (38ವ), ಕೊಲ್ಹಾಪುರದ ನಾಗಲಾ ಪಾರ್ಕ್‌ನ ಅಂಬೇಡ್ಕರ್ ನಗರದ ನಿವಾಸಿ ಸಂಗೀತಾ ವಿಷ್ಣು ಸಾವಂತ್ (40ವ), ಮತ್ತು ಕಾರವಾರದ ಹಳಿಯಾಳ ತಾಲ್ಲೂಕಿನ ಕೆಸ್ರೋಲಿಯ ಅನಸೂಯಾ ಗಿರಿಮಲ್ಲಪ್ಪ ದೊಡ್ಮನಿ (50ವ) ಎಂದು ಗುರುತಿಸಲಾಗಿದೆ.

ಶಿವಬಸಪ್ಪ ಮಗ್ದುಮ್ ಮತ್ತು ಕೊಲ್ಲಾಪುರ ಮತ್ತು ಕಾರವಾರದ ಕೆಲವು ಮಧ್ಯವರ್ತಿಗಳು ಬಾಲಕನನ್ನು ಬೆಳಗಾವಿ ನಗರದ ದಿಲ್ಶಾದ್ ಸಿಕಂದರ್ ತಹಶೀಲ್ದಾರ್ ಎಂಬ ಮಹಿಳೆಗೆ 4 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಭೀಮಶಂಕರ್ ಗುಲೇದ್ ತಿಳಿಸಿದ್ದಾರೆ. ಇಬ್ಬರು ಹೆಣ್ಣು ಮಕ್ಕಳಿರುವ ದಿಲ್ಶಾದ್ ಗಂಡು ಮಗು ಬೇಕೆಂದು ಬಯಸಿದ್ದರು.

Representational image
ಮಕ್ಕಳ ಕಳ್ಳಸಾಗಣೆ: ಟಾಪ್ 3 ನಲ್ಲಿ ಉತ್ತರ ಪ್ರದೇಶ, ಬಿಹಾರ, ಆಂಧ್ರ ಪ್ರದೇಶ; ಕರ್ನಾಟಕಕ್ಕೆ 4ನೇ ಸ್ಥಾನ!

ಮಗ್ದುಮ್ ನಾಲ್ಕು ತಿಂಗಳ ಹಿಂದೆ ಬಾಲಕನ ತಾಯಿ ಸಂಗೀತಾ ಗುಡಪ್ಪ ಕಮ್ಮಾರ್ (30ವ) ಅವರನ್ನು ವಿವಾಹವಾದರು. ಮಗ್ದುಮ್ ಅವರ ಹಿಂದಿನ ಮದುವೆಯಿಂದ ಮಕ್ಕಳಿದ್ದರು. ಅವರ ಮಕ್ಕಳು ಆಗಾಗ್ಗೆ ಜಗಳವಾಡುತ್ತಿದ್ದರು. ಇದರಿಂದ ಬೇಸತ್ತ ಮಗ್ದುಮ್ ಹುಡುಗನನ್ನು ಮಾರಾಟ ಮಾಡಲು ಬಯಸಿದ್ದರು.

ಲಕ್ಷ್ಮಿ ನಾಲ್ಕು ತಿಂಗಳ ಹಿಂದೆ ಮಗ್ದುಮ್ ಸಂಗೀತಾಳನ್ನು ಮದುವೆಯಾಗಲು ಸಹಾಯ ಮಾಡಿದರು. ಅವರು ಸಂಗೀತಾ ಜೊತೆ ಪಿತೂರಿ ನಡೆಸಿ ಕಾರವಾರದ ಕೆಸ್ರೋಲಿಯಲ್ಲಿರುವ ಅನಸುಯಾ ದೊಡ್ಮನಿ ಎಂಬುವವರಿಗೆ ಬಾಲಕನನ್ನು ಹಸ್ತಾಂತರಿಸುವಂತೆ ಕೇಳಿಕೊಂಡರು. ನಂತರ ಅನಸುಯಾ ಬಾಲಕನನ್ನು ಅನಾಥ ಎಂದು ದಿಲ್ಶಾದ್ ಗೆ ಮಾರಿದರು,

ಈ ಮಧ್ಯೆ, ಬಾಲಕನ ತಾಯಿ ಸಂಗೀತಾ ಕಮ್ಮಾರ್ ತಮ್ಮ ಮಗ ಕಾಣೆಯಾಗಿದ್ದಾನೆ ಎಂದು ದೂರು ದಾಖಲಿಸಿದರು. ಪೊಲೀಸ್ ತಂಡವು ಬೈಲಹೊಂಗಲ ಬಳಿಯ ಹಳ್ಳಿಯಲ್ಲಿ ಬಾಲಕನನ್ನು ಪತ್ತೆ ಹಚ್ಚಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com