
ಬೆಂಗಳೂರು: ರಾಜ್ಯಾದ್ಯಂತ ಪ್ರಾದೇಶಿಕ ಸಾರಿಗೆ ಕಚೇರಿಗಳು (ಆರ್ಟಿಒಗಳು) ಸ್ಮಾರ್ಟ್ ಕಾರ್ಡ್ ಚಾಲನಾ ಪರವಾನಗಿಗಳು (ಡಿಎಲ್ಗಳು) ಮತ್ತು ವಾಹನ ನೋಂದಣಿ ಪ್ರಮಾಣಪತ್ರಗಳನ್ನು (ಆರ್ಸಿ) ನೀಡುವಲ್ಲಿ ಬಿಕ್ಕಟ್ಟು ಎದುರಿಸುತ್ತಿವೆ.
ಕೆಲವು ಆರ್ಟಿಒಗಳಲ್ಲಿ, ಸುಮಾರು 15,000 ಕಾರ್ಡ್ಗಳು ವಿತರಣೆಯಾಗಿಲ್ಲ. ಇದು ಅರ್ಜಿದಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ, ಹಲವರು ನವೆಂಬರ್ನಲ್ಲಿ ತಮ್ಮ ಚಾಲನಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ.
ಕರ್ನಾಟಕವು ಡಿಎಲ್ ಮತ್ತು ಆರ್ಸಿ ಸ್ಮಾರ್ಟ್ ಕಾರ್ಡ್ಗಳನ್ನು ರವಾನಿಸುವಲ್ಲಿ ಬಹುಶಃ ಅತ್ಯಂತ ಕೆಟ್ಟ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅರ್ಜಿದಾರರು 50 ದಿನಗಳಿಗೂ ಹೆಚ್ಚು ಕಾಲ ಡಿಎಲ್ ಮತ್ತು ಆರ್ಸಿ ಕಾರ್ಡ್ಗಳಿಗಾಗಿ ಕಾಯುತ್ತಿದ್ದಾರೆ. ರಾಜ್ಯಾದ್ಯಂತ ಆರ್ಟಿಒಗಳು 7 ಲಕ್ಷ ಕಾರ್ಡ್ಗಳನ್ನು ನೀಡಬೇಕಾಗಿದೆ, ಅಂದಾಜಿನ ಪ್ರಕಾರ, ಈ ಸಂಖ್ಯೆ ಸುಮಾರು 8 ಲಕ್ಷ ಇರಬಹುದು. ಪ್ರಧಾನ ಕಚೇರಿಯಿಂದ ಸ್ಮಾರ್ಟ್ ಕಾರ್ಡ್ಗಳನ್ನು ಪಡೆಯುವಲ್ಲಿ ಸಮಸ್ಯೆ ಇರುವುದರಿಂದ ಆರ್ಟಿಒಗಳ ಅಧಿಕಾರಿಗಳು ನಮಗೆ ಕಾಯುವಂತೆ ಹೇಳುತ್ತಾರೆ ಎಂದು ಚಾಲನಾ ಪರವಾನಗಿಗೆ ಸಲ್ಲಿಸಿರುವ ಅರ್ಜಿದಾರರು ಆರೋಪಿಸಿದ್ದಾರೆ.
ಡಿಎಲ್ ಮತ್ತು ಆರ್ಸಿ ಸ್ಮಾರ್ಟ್ ಕಾರ್ಡ್ಗಳನ್ನು ರವಾನಿಸುವಲ್ಲಿ ಸಮಸ್ಯೆ ಇದೆ ಎಂದು ಒಪ್ಪಿಕೊಂಡ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, “ಸ್ಮಾರ್ಟ್ ಕಾರ್ಡ್ಗಳನ್ನು ಸೇವಾ ಪೂರೈಕೆದಾರರಾದ ‘ರೋಸ್ ಮಾರ್ಟ್’ ಪೂರೈಸುತ್ತಿತ್ತು. ಅದರೊಂದಿಗಿನ ಒಪ್ಪಂದವು ಕಳೆದ ಡಿಸೆಂಬರ್ನಲ್ಲಿ ಕೊನೆಗೊಂಡಿತು. ಸ್ಮಾರ್ಟ್ ಕಾರ್ಡ್ಗಳ ಪೂರೈಕೆಗಾಗಿ ನಾವು ಹೊಸ ಟೆಂಡರ್ಗಳನ್ನು ಆಹ್ವಾನಿಸಿದ್ದೇವೆ. ಇಲಾಖೆಯು ಟೆಂಡರ್ಗಳನ್ನು ಪರಿಶೀಲಿಸುತ್ತಿದೆ. ಇದು ಆಡಳಿತಾತ್ಮಕ ಪ್ರಕ್ರಿಯೆಯಾಗಿದ್ದು, ಹಲವು ಕಾರ್ಯವಿಧಾನಗಳನ್ನು ಅನುಸರಿಸಬೇಕಾಗಿದೆ.
ಇದಕ್ಕಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ನಾವು ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ನಾವು ಪ್ರತಿದಿನ ಸುಮಾರು 20,000 ಕಾರ್ಡ್ಗಳನ್ನು ನೀಡುತ್ತೇವೆ ಮತ್ತು ಈಗಿನಿಂದ ಸುಮಾರು 10 ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು, ಬಾಕಿ ಉಳಿದಿರುವ ಕಾರ್ಡ್ ಗಳನ್ನು ಸಹ ಆದಷ್ಟು ಶೀಘ್ರವೇ ವಿಲೇವಾರಿ ಮಾಡುವುದಾಗಿ ತಿಳಿಸಿದ್ದಾರೆ.
ಆದಾಗ್ಯೂ, ಇಲಾಖೆಯು ಬಾಕಿ ಇರುವ ಸ್ಮಾರ್ಟ್ ಕಾರ್ಡ್ಗಳನ್ನು ತೆರವುಗೊಳಿಸಲು ಎರಡು ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದು ತಜ್ಞರು ಹೇಳಿದರು. ಪ್ರಸ್ತುತ, ರಾಜ್ಯಾದ್ಯಂತ ಆರ್ಟಿಒಗಳು ಸ್ಮಾರ್ಟ್ ಕಾರ್ಡ್ಗಳನ್ನು ನೀಡುತ್ತಿಲ್ಲ ಎಂದು ಅವರು ಆರೋಪಿಸಿದರು. ಬೆಂಗಳೂರು ನಗರದಲ್ಲಿ ಯಶವಂತಪುರ, ರಾಜಾಜಿನಗರ, ಕೋರಮಂಗಲ, ಜ್ಞಾನಭಾರತಿ, ಇಂದಿರಾನಗರ, ಯಲಹಂಕ, ಕೆಆರ್ ಪುರಂ, ನೆಲಮಂಗಲ, ಎಲೆಕ್ಟ್ರಾನಿಕ್ಸ್ ಸಿಟಿ, ದೇವನಹಳ್ಳಿ ಮತ್ತು ಜಯನಗರ ಸೇರಿದಂತೆ 11 ಆರ್ಟಿಒಗಳಿವೆ, ಅಲ್ಲಿ ರಾಜ್ಯದ ಇತರ ಭಾಗಗಳಿಗಿಂತ ಹೆಚ್ಚಿನ ಬಾಕಿ ಇರಬಹುದು. ಬೆಂಗಳೂರಿನಲ್ಲಿ ಗರಿಷ್ಠ ಸಂಖ್ಯೆಯ ಡಿಎಲ್ ಸ್ಮಾರ್ಟ್ ಕಾರ್ಡ್ಗಳನ್ನು ನೀಡಲಾಗುತ್ತದೆ.
ಸ್ಮಾರ್ಟ್ ಕಾರ್ಡ್ಗಳ ಉಸ್ತುವಾರಿ ಹೆಚ್ಚುವರಿ ಆಯುಕ್ತ (ಸಾರಿಗೆ) ಜೆ ಜ್ಞಾನೇಂದ್ರ ಕುಮಾರ್ ಮಾತನಾಡಿ “ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರಿಂದ ವಿಳಂಬವಾಯಿತು. ಬಾಕಿ ಇರುವ ಕಾರ್ಡ್ ಗಳನ್ನು ಆದಷ್ಟು ಬೇಗ ತೆರವುಗೊಳಿಸಲು ನಾವು ಪ್ರಯತ್ನಿಸುತ್ತೇವೆ ಎಂದು ಹೇಳಿದರು.
ಆರ್ಟಿಒಗಳು ಬಹಳ ಹಿಂದೆಯೇ ಕಾರ್ಯನಿರ್ವಹಿಸಬೇಕಿತ್ತು. ಸರಿಯಾದ ಯೋಜನೆ ಇರಬೇಕು. ಈ ಪರಿಸ್ಥಿತಿಯಲ್ಲಿ, ಆರ್ಟಿಒಗಳ ಅಧಿಕಾರಿಗಳನ್ನು ಮಾತ್ರ ದೂಷಿಸಲಾಗುತ್ತದೆ, ಸಂಚಾರ ಪೊಲೀಸ್ ಸಿಬ್ಬಂದಿ ಅಪರಾಧಿಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವುದರಿಂದ, ಸವಾರರು/ಚಾಲಕರು ತಮ್ಮ ಪರವಾನಗಿ ಬಾಕಿ ಇದೆ ಎಂದು ಅವರಿಗೆ ಹೇಳಲು ಸಾಧ್ಯವಿಲ್ಲ. ಅವರ ಮಾತನ್ನು ಯಾರು ಕೇಳುತ್ತಾರೆ? ಎಂದು ನಿವೃತ್ತ ಆರ್ಟಿಒ ಸೈಯದ್ ಶಫಿ ಅಹ್ಮದ್ ತಿಳಿಸಿದ್ದಾರೆ. ಬಿಕ್ಕಟ್ಟು ಬಗೆಹರಿಯುವವರೆಗೆ ತಾತ್ಕಾಲಿಕ ಕಾಗದ ಆಧಾರಿತ ಡಿಎಲ್/ಆರ್ಸಿಗಳನ್ನು ನೀಡುವ ಬಗ್ಗೆ ನಾವು ಪರಿಗಣಿಸುತ್ತೇವೆ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
Advertisement