110 ಹಳ್ಳಿಗಳಲ್ಲಿರುವ ಕೊಳವೆಬಾವಿಗಳನ್ನು BWSSBಗೆ ಹಸ್ತಾಂತರಿಸಿ: ತುಷಾರ್ ಗಿರಿನಾಥ್

"ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಗೊಂಡ 110 ಹಳ್ಳಿಗಳಲ್ಲಿರುವ ಎಲ್ಲಾ ಕೊಳವೆ ಬಾವಿಗಳನ್ನು ಜಲಮಂಡಳಿಗೆ ಹಸ್ತಾಂತರಿಸಿ" ಎಂದು ಮುಖ್ಯ ಆಯುಕ್ತರು ಸೂಚಿಸಿದ್ದಾರೆ.
ತುಷಾರ್ ಗಿರಿನಾಥ್
ತುಷಾರ್ ಗಿರಿನಾಥ್
Updated on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ 110 ಹಳ್ಳಿಗಳಲ್ಲಿರುವ ಕೊಳವೆ ಬಾವಿಗಳನ್ನು ಪಾಲಿಕೆಯಿಂದ ಬಿಡಬ್ಲ್ಯೂಎಸ್ಎಸ್ಬಿಗೆ ಹಸ್ತಾಂತರಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬೇಸಿಗೆ ಆರಂಭವಾಗುವ ಮೊದಲೇ ಹೆಗ್ಡೆನಗರ ಮತ್ತು ಥಣಿಸಂದ್ರದಂತಹ ಹೊರ ಪ್ರದೇಶಗಳಲ್ಲಿ ನೀರಿನ ಕೊರತೆಯ ಬಗ್ಗೆ ನಿವಾಸಿಗಳಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ, ಬಿಬಿಎಂಪಿ ಆಯುಕ್ತರು ಈ ನಿರ್ದೇಶನ ನೀಡಿದ್ದಾರೆ.

"ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಗೊಂಡ 110 ಹಳ್ಳಿಗಳಲ್ಲಿರುವ ಎಲ್ಲಾ ಕೊಳವೆ ಬಾವಿಗಳನ್ನು ಜಲಮಂಡಳಿಗೆ ಹಸ್ತಾಂತರಿಸಿ" ಎಂದು ಮುಖ್ಯ ಆಯುಕ್ತರು ಹೇಳಿದರು ಮತ್ತು ನಿವಾಸಿಗಳು ಬಿಡಬ್ಲ್ಯೂಎಸ್ಎಸ್ಬಿ ಸಂಪರ್ಕ ಪಡೆದುಕೊಳ್ಳುವಂತೆ ಹಾಗೂ ಅಂತರ್ಜಲ ಮತ್ತು ಬೋರ್‌ವೆಲ್‌ಗಳ ಅವಲಂಬನೆಯನ್ನು ಕಡಿಮೆ ಮಾಡುವಂತೆ ಅವರು ಮನವಿ ಮಾಡಿದರು.

ತುಷಾರ್ ಗಿರಿನಾಥ್
ಅನಧಿಕೃತ ಕಟ್ಟಡಗಳ ವಿರುದ್ಧ ಸರ್ಕಾರ ಕ್ರಮ: 100 ಕಟ್ಟಡಗಳ BWSSB ಸೇವೆ ಸ್ಥಗಿತ; ಕೊಳಚೆ ನೀರಿನಿಂದ ಗಬ್ಬುನಾರುತ್ತಿರುವ ರಸ್ತೆಗಳು!

ಬೇಸಿಗೆಯಲ್ಲಿ ನೀರಿನ ಮಹತ್ವ ಮತ್ತು ಸವಾಲಿನ ಪರಿಸ್ಥಿತಿಯನ್ನು ಅರಿತುಕೊಂಡ ಮುಖ್ಯ ಆಯುಕ್ತರು, ಬೋರ್‌ವೆಲ್‌ಗೆ ನಿಯಮಿತ ಸೇವೆ ಮತ್ತು ನಿರ್ವಹಣೆ ಅಗತ್ಯವಿರುವುದರಿಂದ ಮತ್ತು ಜಲಮಂಡಳಿ ಅಧಿಕಾರಿಗಳು ಅಗತ್ಯವಾದ ಕಾರ್ಯವಿಧಾನವನ್ನು ಹೊಂದಿರುವುದರಿಂದ, ಬಿಬಿಎಂಪಿಯ ಎಲ್ಲಾ ಕೊಳವೆ ಬಾವಿಗಳನ್ನು ಬಿಡಬ್ಲ್ಯೂಎಸ್ಎಸ್ಬಿಗೆ ಹಸ್ತಾಂತರಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೊರ ಪ್ರದೇಶಗಳಲ್ಲಿ ಸುಮಾರು 6000 ನೋಂದಾಯಿತ ಬೋರ್‌ವೆಲ್‌ಗಳಿವೆ ಮತ್ತು ಈಗ ಅದನ್ನು BWSSB ಗೆ ಹಸ್ತಾಂತರಿಸಲಾಗುವುದು. ಇದು ಪಾಲಿಕೆಗೆ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳ ನಿವಾಸಿಗಳ ನೀರಿನ ನಿರ್ವಹಣೆಗೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com