ಎಲ್ಲಾ ಪಾರ್ಕ್‌ಗಳಲ್ಲಿ ಎಲೆ ಗೊಬ್ಬರ ಘಟಕ ಸ್ಥಾಪಿಸುವಂತೆ BBMP ಅಧಿಕಾರಿಗಳಿಗೆ ಸೂಚನೆ

ಉದ್ಯಾನವನಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಎಲೆ ಗೊಬ್ಬರವಾಗಿ ಸಂಸ್ಕರಿಸಬೇಕು ಮತ್ತು ಈ ಗೊಬ್ಬರವನ್ನು ಉದ್ಯಾನವನಗಳಲ್ಲಿ ಮರುಬಳಕೆ ಮಾಡಬೇಕು ಎಂದು ಅವರು ಒತ್ತಿ ಹೇಳಿದರು.
Maheshwar Rao
ಮಹೇಶ್ವರ ರಾವ್
Updated on

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರು ಶುಕ್ರವಾರ ನಗರದಾದ್ಯಂತ ಎಲ್ಲಾ ಉದ್ಯಾನವನಗಳಲ್ಲಿ ಎಲೆ ಗೊಬ್ಬರ ಘಟಕ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ದಕ್ಷಿಣ ವಲಯದಲ್ಲಿ "ಮುಖ್ಯ ಅಯುಕ್ತರ ನಡೆ ವಲಯದ ಕಡೆ"(ವಲಯಕ್ಕೆ ಮುಖ್ಯ ಆಯುಕ್ತರ ಭೇಟಿ) ಉಪಕ್ರಮದ ಭಾಗವಾಗಿ, ಇಂದು ನಡೆದ ಸಭೆಯಲ್ಲಿ ಸಾರ್ವಜನಿಕ ಕುಂದುಕೊರತೆಗಳನ್ನು ಸ್ವೀಕರಿಸುವಾಗ ಮುಖ್ಯ ಆಯುಕ್ತರು ಈ ನಿರ್ದೇಶನ ನೀಡಿದ್ದಾರೆ.

ಉದ್ಯಾನವನಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಎಲೆ ಗೊಬ್ಬರವಾಗಿ ಸಂಸ್ಕರಿಸಬೇಕು ಮತ್ತು ಈ ಗೊಬ್ಬರವನ್ನು ಉದ್ಯಾನವನಗಳಲ್ಲಿ ಮರುಬಳಕೆ ಮಾಡಬೇಕು ಎಂದು ಅವರು ಒತ್ತಿ ಹೇಳಿದರು.

Maheshwar Rao
ಒಂದು ಸಾವಿರಕ್ಕೂ ಹೆಚ್ಚು ಪಾರ್ಕ್ ಗಳಲ್ಲಿ ಒಣ ಎಲೆಗಳನ್ನು ಗೊಬ್ಬರವಾಗಿಸಲು BBMP ಸಜ್ಜು

ಮಳೆಗಾಲದಲ್ಲಿ, ಭಾರೀ ಮಳೆಯಿಂದಾಗಿ ಮರದ ಕೊಂಬೆಗಳು ಹೆಚ್ಚಾಗಿ ಬೀಳುತ್ತವೆ ಎಂದು ಮುಖ್ಯ ಆಯುಕ್ತರು, ಬಿದ್ದ ಕೊಂಬೆಗಳು ಮತ್ತು ಶಿಲಾಖಂಡರಾಶಿಗಳನ್ನು ಸ್ಥಳೀಯವಾಗಿ ಸಂಸ್ಕರಿಸಲು ಪ್ರತಿ ವಲಯವು ಛೇದಕ ಯಂತ್ರವನ್ನು ಹೊಂದಿರಬೇಕು ಎಂದು ಸೂಚಿಸಿದರು.

ದಕ್ಷಿಣ ವಲಯದ ಹಲವು ಭಾಗಗಳಲ್ಲಿ ಅಸಮರ್ಪಕ ಬೀದಿ ದೀಪಗಳ ಕುರಿತು ನಿವಾಸಿಗಳ ದೂರಿಗೆ ಪ್ರತಿಕ್ರಿಯಿಸಿದ ರಾವ್, ಎಲ್ಲಾ ನಿಷ್ಕ್ರಿಯ ಬೀದಿ ದೀಪಗಳನ್ನು ಕೂಡಲೇ ಬದಲಾಯಿಸುವಂತೆ ಸೂಚನೆ ನೀಡಿದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com