ಮಂಡ್ಯ: ಏಳು ವರ್ಷದ ಬಾಲಕಿಯನ್ನು ಕರೆದೊಯ್ದು ಸಾಲ ವಸೂಲಾತಿ ಏಜೆಂಟರಿಂದ ವಿಚಾರಣೆ

ವಸೂಲಾತಿ ಏಜೆಂಟರು ಮನೆಗೆ ಬಂದು ಮನೆಯಲ್ಲಿ ಯಾರೂ ಇಲ್ಲದ್ದನ್ನು ಕಂಡು ಸಂಬಂಧಿಕರ ಮನೆಯಿಂದ ಮಗುವನ್ನು ಬಲವಂತವಾಗಿ ಕರೆದುಕೊಂಡು ಹೋದರು.
Representational image
ಸಾಂದರ್ಭಿಕ ಚಿತ್ರ
Updated on

ಮೈಸೂರು: ಮೈಕ್ರೋಫೈನಾನ್ಸ್ ವಸೂಲಾತಿ ಏಜೆಂಟರು 1,280 ರೂಪಾಯಿಗಳ ಬಾಕಿ ಸಾಲದ ಕಂತಿನ ಬಗ್ಗೆ ವಿಚಾರಣೆ ನಡೆಸಲು ಏಳು ವರ್ಷದ ಬಾಲಕಿಯನ್ನು ಕರೆದುಕೊಂಡು ಹೋಗಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಪುರಿಗಾಲಿ ಗ್ರಾಮದಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆಯ ಟಿ ನರಸೀಪುರ ತಾಲ್ಲೂಕಿನ ಜಾಲಹಳ್ಳಿ ಗ್ರಾಮದ ಮೂಲದ ಬಾಲಕಿಯ ಪೋಷಕರಾದ ನವೀನ್ ಮತ್ತು ಪ್ರಮೀಳಾ ಅವರು ಮೈಕ್ರೋಫೈನಾನ್ಸ್ ಸಂಸ್ಥೆಯಿಂದ 30,000 ರೂಪಾಯಿ ಸಾಲ ಪಡೆದಿದ್ದರು. 13 ತಿಂಗಳಲ್ಲಿ ಸಾಲವನ್ನು ಮರುಪಾವತಿ ಮಾಡುವುದಾಗಿ ಮಾತು ಕೊಟ್ಟು ಪಾವತಿಸಿಕೊಂಡು ಬರುತ್ತಿದ್ದರು. ಆದರೆ ಇತ್ತೀಚಿನ ಕಂತು ವಿಳಂಬ ಮಾಡಿದರು.

ಇದರಿಂದಾಗಿ ವಸೂಲಾತಿ ಏಜೆಂಟರು ಮನೆಗೆ ಬಂದು ಮನೆಯಲ್ಲಿ ಯಾರೂ ಇಲ್ಲದ್ದನ್ನು ಕಂಡು ಸಂಬಂಧಿಕರ ಮನೆಯಿಂದ ಮಗುವನ್ನು ಬಲವಂತವಾಗಿ ಕರೆದುಕೊಂಡು ಹೋದರು.

ನನ್ನ ಪತ್ನಿ ಮತ್ತು ಸಂಬಂಧಿಕರು ಕೆಲಸದ ಮೇಲೆ ಹೊರಗೆ ಹೋಗಿದ್ದರು. ಹಣ ಸ್ಥಳದಲ್ಲೇ ಪಾವತಿಸದಿದ್ದಾಗ, ಏಜೆಂಟರು ನಮ್ಮ ಮಗಳ ಬಳಿಗೆ ಹೋಗಿ ಪತ್ನಿ ಇರುವಲ್ಲಿಗೆ ಕರೆದೊಯ್ಯುವಂತೆ ಒತ್ತಾಯಿಸಿದರು ಎಂದು ಆರೋಪಿಸಲಾಗಿದೆ. ಇಂದು ಸಂಜೆ ಹಣ ಪಾವತಿಸಲಾಗುವುದು ಎಂದು ಏಜೆಂಟರಿಗೆ ಹೇಳಲಾಗಿದ್ದರೂ, ತಕ್ಷಣವೇ ಪಾವತಿಸಬೇಕೆಂದು ಒತ್ತಾಯಿಸಿದರು ಎಂದು ನವೀನ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com