ಗದಗ: ಈಜು ಬಾರದೆ ತುಂಗಭದ್ರಾ ನದಿಗೆ ಇಳಿದ ಸ್ನೇಹಿತರನ್ನು ಉಳಿಸಲು ಹೋಗಿ ಜನ್ಮದಿನದಂದೇ ಮಸಣ ಸೇರಿದ ಯುವಕ, ಮೂವರು ಸಾವು!

ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸ್ನೇಹಿತರೊಂದಿಗೆ ದೇವಸ್ಥಾನಕ್ಕೆ ಬಂದು ಆಂಜನೇಯನ ದರ್ಶನ ಪಡೆದು ನಂತರ ತುಂಗಭದ್ರಾ ನದಿಗೆ ಈಜಲು ಇಳಿದಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಮೂವರು ಸಾವನ್ನಪ್ಪಿರುವ ದಾರುಣ ಘಟನೆ ಗದಗದಲ್ಲಿ ನಡೆದಿದೆ.
Tungabhadra river
ತುಂಗಭದ್ರಾ ನದಿ
Updated on

ಗದಗ: ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸ್ನೇಹಿತರೊಂದಿಗೆ ದೇವಸ್ಥಾನಕ್ಕೆ ಬಂದು ಆಂಜನೇಯನ ದರ್ಶನ ಪಡೆದು ನಂತರ ತುಂಗಭದ್ರಾ ನದಿಗೆ ಈಜಲು ಇಳಿದಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಮೂವರು ಸಾವನ್ನಪ್ಪಿರುವ ದಾರುಣ ಘಟನೆ ಗದಗದಲ್ಲಿ ನಡೆದಿದೆ.

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರಲಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಗದಗ ಜಿಲ್ಲೆಯ ಶಿರಹಟ್ಟಿಯ 34 ವರ್ಷದ ಶರಣಪ್ಪ ಬಡಿಗೇರ, 36 ವರ್ಷದ ಮಹೇಶ್ ಮತ್ತು 38 ವರ್ಷದ ಗುರುನಾಥ್ ಎಂದು ಗುರುತಿಸಲಾಗಿದೆ. ಶರಣಪ್ಪ ನಾಲ್ವರು ಸ್ನೇಹಿತರೊಂದಿಗೆ ದೇವಸ್ಥಾನಕ್ಕೆ ಬಂದಿದ್ದಾರೆ. ಆಂಜನೇಯನ ದರ್ಶನ ಪಡೆದು ಬಳಿಕ ನದಿಗೆ ಈಜಲು ಹೋಗಿದ್ದರು. ಈಜಲು ಬಾರದಿದ್ದರೂ ಶರಣಪ್ಪನ ಸ್ನೇಹಿತ ಮಹೇಶ್ ನದಿಗೆ ಇಳಿದಿದ್ದನು. ನೀರಿನ ಸೆಳೆತಕ್ಕೆ ಸಿಲುಕಿದ್ದ ಮಹೇಶನ್ ನನ್ನು ರಕ್ಷಿಸಲು ಶರಣಪ್ಪ ಹಾಗೂ ಗುರುನಾಥ್ ಮುಂದಾಗಿದ್ದಾರೆ. ಆದರೆ ನೀರಿನ ಸೆಳೆತ ಹೆಚ್ಚಾಗಿದ್ದರಿಂದ ಮೂವರು ನೀರು ಪಾಲಾಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು ನದಿಯಲ್ಲಿ ಮುಳುಗಿರುವವರಿಗಾಗಿ ಶೋಧ ನಡೆಸಿದ್ದಾರೆ. ವಿಜಯನಗರ ಜಿಲ್ಲೆ ಹೂವಿನಹಡಗಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Tungabhadra river
Koppal Gang Rape: ಇಬ್ಬರು ಆರೋಪಿಗಳ ಬಂಧನ; ಪೆಟ್ರೋಲ್ ಗೆ 100 ರೂ ಕೊಡಲಿಲ್ಲ ಎಂದು ಸಾಮೂಹಿಕ ಅತ್ಯಾಚಾರ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com