ಯುಗಾದಿ ಹಬ್ಬದ ನಡುವೆ ಕಹಿ ಸುದ್ದಿ: ವಿಷ್ಣು ದೇವರ ವಿಗ್ರಹ ಧ್ವಂಸ; ಗೃಹ ಸಚಿವರ ಸ್ವಕ್ಷೇತ್ರದಲ್ಲೇ ಘಟನೆ, Video Viral!

ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರ ಸ್ವಕ್ಷೇತ್ರ ತುಮಕೂರಿನ ಕುಣಿಗಲ್ ನ ರಂಗಸ್ವಾಮಿ ಬೆಟ್ಟದ ಪ್ರವೇಶ ದ್ವಾರದಲ್ಲಿದ್ದ ವಿಷ್ಣು ದೇವರ ವಿಗ್ರಹ ಭಗ್ನ ಮಾಡಲಾಗಿದೆ.
ಯುಗಾದಿ ಹಬ್ಬದ ನಡುವೆ ಕಹಿ ಸುದ್ದಿ: ವಿಷ್ಣು ದೇವರ ವಿಗ್ರಹ ಧ್ವಂಸ; ಗೃಹ ಸಚಿವರ ಸ್ವಕ್ಷೇತ್ರದಲ್ಲೇ ಘಟನೆ, Video Viral!
Updated on

ಕುಣಿಗಲ್: ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರ ಸ್ವಕ್ಷೇತ್ರ ತುಮಕೂರಿನ ಕುಣಿಗಲ್ ನ ರಂಗಸ್ವಾಮಿ ಬೆಟ್ಟದ ಪ್ರವೇಶ ದ್ವಾರದಲ್ಲಿದ್ದ ವಿಷ್ಣು ದೇವರ ವಿಗ್ರಹ ಭಗ್ನ ಮಾಡಲಾಗಿದೆ. ಕಿಡಿಗೇಡಿಯೊಬ್ಬ ತಂತಿ ಬೇಲಿ ಹಾಕಿದ್ದರೂ ವಿಷ್ಣುವಿಗ್ರಹವನ್ನು ಧ್ವಂಸ ಮಾಡಿದ್ದಾನೆ. ಈ ಘಟನೆಯ ಸಿಸಿಟಿವಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ. ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಹಿಂದೂ ದೇವತೆಗಳು ಎಷ್ಟು ಸೇಫ್ ಎಂಬ ಪ್ರಶ್ನೆಯೂ ಮೂಡಿದೆ. ದೇವಾಲಯದ ಸಿಬ್ಬಂದಿ ಚಂದ್ರಶೇಖರ್ ನೀಡಿದ ದೂರಿನ ಮೇರೆಗೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿದ್ದಾರೆ. ಸಿಸಿಟಿವಿ ಕ್ಯಾಮೆರ ದೃಶ್ಯಗಳ ಆಧಾರಿಸಿ ನೀಡಿದ ದೂರಿನ ಮೇರೆಗೆ ಅಡೋನಹಳ್ಳಿ ಗ್ರಾಮದ ಶಂಕಿತ ವ್ಯಕ್ತಿ ವಿರುದ್ಧ ದೂರು ನೀಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com