ಹನಿಟ್ರ್ಯಾಪ್, ಸುಪಾರಿ ಡೀಲ್ ಪ್ರಕರಣಗಳ ತನಿಖೆ: ರಾಜಕೀಯ ಆಯಾಮದಲ್ಲಿ ರಹಸ್ಯ ಭೇದಿಸಲು ಪೊಲೀಸರ ಸಿದ್ಧತೆ

ರಾಜೇಂದ್ರ ಪ್ರಬಲ ರಾಜಕಾರಣಿಗಳ ಹೆಸರುಗಳನ್ನು ಉಲ್ಲೇಖಿಸದೆ, ದೂರು ನೀಡಿದ್ದಾರೆ. ಈ ರಹಸ್ಯವನ್ನು ಭೇದಿಸುವ ಜವಾಬ್ದಾರಿ ಪೊಲೀಸರ ಮೇಲಿದೆ.
ರಾಜಣ್ಣ - ರಾಜೇಂದ್ರ
ರಾಜಣ್ಣ - ರಾಜೇಂದ್ರ
Updated on

ಬೆಂಗಳೂರು: ಸಹಕಾರ ಸಚಿವ ಮತ್ತು ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ಅವರನ್ನು ಹನಿಟ್ರ್ಯಾಪ್ ಮಾಡುವ ಪ್ರಯತ್ನ ಮತ್ತು ಅವರ ಪುತ್ರ ಎಂ.ಎಲ್.ಸಿ. ರಾಜೇಂದ್ರ ಅವರ ಮೇಲಿನ 'ಸುಪಾರಿ' ಹತ್ಯೆ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸ್, ಕಾಣದ ಪ್ರಭಾವಿ ವ್ಯಕ್ತಿಗಳು ಮತ್ತು "ಉನ್ನತ ಮಟ್ಟದ ರಾಜಕಾರಣಿಗಳು" ತಂದೆ-ಮಗನ ವಿರುದ್ಧ ಹೊಂದಿರುವ ವೈಯಕ್ತಿಕ ದ್ವೇಷ ಸೇರಿದಂತೆ ವಿವಿಧ ಆಯಾಮಗಳಿಂದ ತನಿಖೆ ನಡೆಸಲು ಮುಂದಾಗಿದ್ದಾರೆ.

ರಾಜೇಂದ್ರ ಪ್ರಬಲ ರಾಜಕಾರಣಿಗಳ ಹೆಸರುಗಳನ್ನು ಉಲ್ಲೇಖಿಸದೆ, ದೂರು ನೀಡಿದ್ದಾರೆ. ಈ ರಹಸ್ಯವನ್ನು ಭೇದಿಸುವ ಜವಾಬ್ದಾರಿ ಪೊಲೀಸರ ಮೇಲಿದೆ. ರಾಜಕೀಯ ಸಂಪರ್ಕಗಳಿಂದಾಗಿ ಪ್ರಕರಣ ಮತ್ತಷ್ಟು ಜಟಿಲವಾಗುತ್ತಿದೆ. ಪ್ರಕರಣದ ತನಿಖೆ ನಡೆಸುವ ಪೊಲೀಸರು ಸೂಕ್ಷ್ಮತೆಯಿಂದ ಎದುರಿಸಬೇಕಾಗಿದೆ.

ಹಿಂದೆ ಯಾವುದೋ ಸಂದರ್ಭದಲ್ಲಿ ನಡೆದ ಘಟನೆಗಳು, ರಾಜಣ್ಣ ಅವರನ್ನು ಹನಿಟ್ರ್ಯಾಪ್ ಮಾಡಲು ಪ್ರಯತ್ನ ನಡೆದಿದೆ ಎಂದು ಹೇಳುವುದರೊಂದಿಗೆ ಬಯಲಾಗಿದೆ. ಪ್ರಭಾವಿ ರಾಜಕಾರಣಿಗಳು ಅವುಗಳ ಹಿಂದೆ ಇದ್ದಾರೆ ಎಂದು ಹೇಳಲಾಗುತ್ತಿರುವುದರಿಂದ ಈ ಎರಡು ಪ್ರಕರಣಗಳ ನಡುವೆ ಪರಸ್ಪರ ಸಂಬಂಧವಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ರಾಜಣ್ಣ ದೂರು ನೀಡಲು ತಮ್ಮದೇ ಆದ ಸಮಯ ತೆಗೆದುಕೊಂಡರು, ಮತ್ತು ಅಂತಿಮವಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರನ್ನು ಭೇಟಿಯಾಗಿ ರಾಜಣ್ಣ ಚರ್ಚಿಸಿದರು ನಂತರ ಸಿಐಡಿ ತನಿಖೆಗೆ ಪ್ರಕರಣವನ್ನು ವಹಿಸಲಾಗಿದೆ.

ರಾಜಣ್ಣ - ರಾಜೇಂದ್ರ
ಸಚಿವ ರಾಜಣ್ಣ ಅವರ ಮೇಲೆ 'ಹನಿಟ್ರ್ಯಾಪ್' ಯತ್ನದ ಬಗ್ಗೆ ಸಿಐಡಿ ತನಿಖೆ ಆರಂಭ: MLC Rajendra

ಶುಕ್ರವಾರ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ, ರಾಜೇಂದ್ರ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿರುವುದರಿಂದ ಪ್ರಭಾವಿ ರಾಜಕಾರಣಿಗಳು ತಮ್ಮ ತಂದೆ ರಾಜಣ್ಣ ಅವರನ್ನು ರಾಜಕೀಯವಾಗಿ ಮುಗಿಸಲು ಸಂಚು ರೂಪಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿರುವ "ಪ್ರಬಲ ವ್ಯಕ್ತಿಗಳು" ಅವರನ್ನು ಕೊಲ್ಲಲು ಸಂಚು ರೂಪಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಆದರೆ ಅವರು ನಾಯಕರ ಹೆಸರುಗಳನ್ನು ಉಲ್ಲೇಖಿಸಲಿಲ್ಲ, ಆದರೆ ಎಫ್‌ಐಆರ್ ದಾಖಲಾಗಿರುವ ಐದು ಆರೋಪಿಗಳನ್ನು ವಿಚಾರಣೆ ಮಾಡುವ ಮೂಲಕ ರಹಸ್ಯ ಬಯಲು ಮಾಡುವ ಜವಾಬ್ದಾರಿಯನ್ನು ಪೊಲೀಸರಿಗೆ ಬಿಟ್ಟಿದ್ದಾರೆ.

ಲೋಕೋಪಯೋಗಿ ಸಚಿವ ಮತ್ತು ಮುಖ್ಯಮಂತ್ರಿಯವರ ಆಪ್ತ ಸಹಾಯಕ ಸತೀಶ್ ಜಾರಕಿಹೊಳಿ, ಶನಿವಾರ ಬೆಂಗಳೂರಿನಲ್ಲಿ ವರದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಯಾವ ಪ್ರಭಾವಿ ನಾಯಕ ಪಿತೂರಿ ನಡೆಸಿದ್ದಾರೆ ಎಂಬುದನ್ನು ಪೊಲೀಸರು ಕಂಡು ಹಿಡಿಯಬೇಕು ಎಂದು ಒತ್ತಾಯಿಸಿದರು.

ನಾನು ತನಿಖಾ ಸಂಸ್ಥೆಯಲ್ಲ, ಆ ಪ್ರಭಾವಿ ನಾಯಕ ಯಾರು ಎಂದು ಪೊಲೀಸರು ಕಂಡುಹಿಡಿಯಲಿ, ದೇಶಾದ್ಯಂತ ರಾಜಕೀಯ ಪಿತೂರಿಗಳ ಅನೇಕ ನಿದರ್ಶನಗಳು ವರದಿಯಾಗಿವೆ" ಎಂದು ಅವರು ಹೇಳಿದರು. ತುಮಕೂರು ಎಸ್ಪಿ ಅಶೋಕ್ ಕೆ.ವಿ ಅವರು ಮಧುಗಿರಿ ಡಿವೈಎಸ್ಪಿ ಮಂಜುನಾಥ್ ಜಿ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿದ್ದಾರೆ, ಅವರು ಎರಡು ತಿಂಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸಲಿದ್ದಾರೆ. ನ್ಯಾಯಾಲಯದ ಮುಂದೆ ಆರೋಪಪಟ್ಟಿ ಸಲ್ಲಿಸಲು ಪೊಲೀಸರಿಗೆ 60 ದಿನಗಳ ಕಾಲಾವಕಾಶವಿರುವುದರಿಂದ ಪ್ರಕರಣವನ್ನು ಶೀಘ್ರದಲ್ಲೇ ಭೇದಿಸಬೇಕು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com