ಮಹಲ್-ಕೆಮ್ಮಣ್ಣುಗುಂಡಿ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಮತ್ತೊಮ್ಮೆ ಪ್ರಸ್ತಾವನೆ: ಶಾಸಕ ಎಚ್.ಡಿ ತಮ್ಮಯ್ಯ

ಜನಪ್ರಿಯ ಗಿರಿಧಾಮವಾದ ಕೆಮ್ಮಣ್ಣುಗುಂಡಿಯನ್ನು ತಲುಪಲು ಅತ್ತಿಗುಂಡಿಯಿಂದ ಮಹಲ್‌ಗೆ ಹೋಗುವ 8 ಕಿ.ಮೀ ರಸ್ತೆಯನ್ನು ಬಳಸಿಕೊಂಡು ಈ ಹಿಂದೆ ಖಾಸಗಿ ಬಸ್‌ಗಳು ಮತ್ತು ಪ್ರವಾಸಿ ವಾಹನಗಳು ಸಂಚರಿಸುತ್ತಿದ್ದವು.
The Mahal-Kemmangundi link road which has been closed for traffic
ಮಹಲ್-ಕೆಮ್ಮಣ್ಣುಗುಂಡಿ ಸಂಪರ್ಕ ರಸ್ತೆ
Updated on

ಚಿಕ್ಕಮಗಳೂರು: ಜಿಲ್ಲೆಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಮುಂದಿನ ದಿನಗಳಲ್ಲಿ ಮಹಲ್‌ನಿಂದ ಕೆಮ್ಮಣ್ಣುಗುಂಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕೆ ಗುರಿ ಹೊಂದಲಾಗಿದೆ. ಮಹಲ್-ಕೆಮ್ಮಣ್ಣುಗುಂಡಿ ಸಂಪರ್ಕ ರಸ್ತೆಯು ಜಾಗರ ಮೀಸಲು ಅರಣ್ಯದ ಮೂಲಕ ಹಾದುಹೋಗುವುದರಿಂದ ವರ್ಷಗಳಿಂದ ಮುಚ್ಚಲ್ಪಟ್ಟಿತ್ತು.

ಜನಪ್ರಿಯ ಗಿರಿಧಾಮವಾದ ಕೆಮ್ಮಣ್ಣುಗುಂಡಿಯನ್ನು ತಲುಪಲು ಅತ್ತಿಗುಂಡಿಯಿಂದ ಮಹಲ್‌ಗೆ ಹೋಗುವ 8 ಕಿ.ಮೀ ರಸ್ತೆಯನ್ನು ಬಳಸಿಕೊಂಡು ಈ ಹಿಂದೆ ಖಾಸಗಿ ಬಸ್‌ಗಳು ಮತ್ತು ಪ್ರವಾಸಿ ವಾಹನಗಳು ಸಂಚರಿಸುತ್ತಿದ್ದವು.

ಮಣ್ಣಿನ ರಸ್ತೆಯಾಗಿದ್ದರೂ, ಸ್ಥಳೀಯ ನಿವಾಸಿಗಳು ಮತ್ತು ಪ್ರವಾಸಿಗರು ಕಡಿಮೆ ಸಮಯದಲ್ಲಿ ಗಿರಿಧಾಮವನ್ನು ತಲುಪಲು ಇದು ಸಹಾಯ ಮಾಡುತ್ತಿತ್ತು. ಭದ್ರಾ ಅಭಯಾರಣ್ಯವನ್ನು ಹುಲಿ ಮೀಸಲು ಪ್ರದೇಶವೆಂದು ಘೋಷಿಸಿದ ನಂತರ, ಜಾಗರ ಕಣಿವೆ ವ್ಯಾಪ್ತಿಯಲ್ಲಿ ಬರುವ ರಸ್ತೆಯನ್ನು ಸಂಚಾರಕ್ಕೆ ನಿಷೇಧಿಸಲಾಗಿತ್ತು.

ಚಂದ್ರ ದ್ರೋಣ ಬೆಟ್ಟ ಶ್ರೇಣಿಗಳಲ್ಲಿರುವ ಮುಳ್ಳಯ್ಯನಗಿರಿ, ಸೀತಾಳಯ್ಯನ ಗಿರಿ, ದತ್ತ ಪೀಠ ಮತ್ತು ಮಾಣಿಕ್ಯಧಾರಕ್ಕೆ ಭೇಟಿ ನೀಡುವ ಪ್ರವಾಸಿ ವಾಹನಗಳು ಅತ್ತಿಗುಂಡಿಯಿಂದ ಕೈಮರ, ಶಾಂತವೇರಿ, ಲಿಂಗದಹಳ್ಳಿ ಮತ್ತು ಕಲ್ಲತ್ತಿಗಿರಿ ಜಲಪಾತಗಳ ಮೂಲಕ ಸುಮಾರು 30 ಕಿ.ಮೀ. ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕಾಗುತ್ತದೆ. ಕೆಮ್ಮಣ್ಣುಗುಂಡಿಗೆ ಭೇಟಿ ನೀಡಿದ ನಂತರ ಪ್ರವಾಸಿಗರು ಬೀರೂರು ಮತ್ತು ತರೀಕೆರೆ ಮೂಲಕ ಹಿಂತಿರುಗಬೇಕಾಗುತ್ತದೆ.

image-fallback
ಕೆಮ್ಮಣ್ಣುಗುಂಡಿ ರಸ್ತೆ ಅಗಲೀಕರಣಕ್ಕೆ ವಿರೋಧ

ಮುಂದಿನ ದಿನಗಳಲ್ಲಿ ಮಹಲ್‌ನಿಂದ ಕೆಮ್ಮಣ್ಣುಗುಂಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕೆ ಗುರಿ ಹೊಂದಲಾಗಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು. ಅತ್ತಿಗುಂಡಿ ಗ್ರಾ.ಪಂ.ಗೆ ₹1 ಕೋಟಿ ವೆಚ್ಚದ ಕಾಂಕ್ರೀಟ್ ರಸ್ತೆ ನಿರ್ಮಾಣ, ₹1.50 ಕೋಟಿ ವೆಚ್ಚದಲ್ಲಿ ಅತ್ತಿಗುಂಡಿಯಿಂದ ಕೊಳಗಾಮೆಗೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.‌

ಈಗಾಗಲೇ ಮಹಲ್‌ನಿಂದ ಕೆಮ್ಮಣ್ಣುಗುಂಡಿ ಸಂಪರ್ಕಿಸುವ ರಸ್ತೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ನೇತೃತ್ವದಲ್ಲಿ 33 ಕೋಟಿ ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕೆಲವು ತಾಂತ್ರಿಕ ತೊಂದರೆಯಿಂದಾಗಿ ವಾಪಸ್ ಬಂದಿದೆ ಎಂದು ಹೇಳಿದರು. ಈ ರಸ್ತೆ ಅಭಿವೃದ್ಧಿಯಾದರೆ ವಾಹನ ದಟ್ಟಣೆ ಕಡಿಮೆಯಾಗಿ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಕೆಮ್ಮಣ್ಣುಗುಂಡಿಯಿಂದ ತರೀಕೆರೆ ಮಾರ್ಗವಾಗಿ ಪ್ರವಾಸಿಗರು ವಾಪಸ್ ಹೋಗುತ್ತಾರೆ ಎಂದು ವಿವರಿಸಿದರು.

ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಮತ್ತೊಮ್ಮೆ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ಸೇರಿ, ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ. ಪರಿಸರಕ್ಕೆ ಹಾನಿಯಾಗದಂತೆ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com