GAIL ಗ್ಯಾಸ್ ಪೈಪ್ ಲೈನ್ ಹಾನಿಯಾಗಿ ಅನಿಲ ಸೋರಿಕೆ: ಮಲ್ಲೇಶ್ವರದ ನಿವಾಸಿಗಳಲ್ಲಿ ಆತಂಕ

8ನೇ ಮುಖ್ಯ ರಸ್ತೆಯಲ್ಲಿ ಅಗೆಯುವ ಸಮಯದಲ್ಲಿ ಈ ಘಟನೆ ಸಂಭವಿಸಿದ್ದು, ಇದರಿಂದ ಅನಿಲ ಸೋರಿಕೆಯುಂಟಾಯಿತು.
GAIL technicians undertake repairs of the pipeline in Malleswaram on Thursday
ಮಲ್ಲೇಶ್ವರದಲ್ಲಿ GAIL ತಂತ್ರಜ್ಞರು ಪೈಪ್‌ಲೈನ್ ದುರಸ್ತಿ ಕಾರ್ಯ ಕೈಗೊಂಡರು.
Updated on

ಬೆಂಗಳೂರು: ನಿನ್ನೆ ಗುರುವಾರ ಸಂಜೆ ಬಿಡಬ್ಲ್ಯುಎಸ್ ಎಸ್ ಬಿ ನಡೆಸುತ್ತಿರುವ ಕಾಮಗಾರಿ ಸಮಯದಲ್ಲಿ GAIL ಅನಿಲ ಪೈಪ್‌ಲೈನ್ ಆಕಸ್ಮಿಕವಾಗಿ ಹಾನಿಗೊಳಗಾಗಿ ಮಲ್ಲೇಶ್ವರಂನಲ್ಲಿ ಭಯಯ ವಾತಾವರಣ ನಾಗರಿಕರಲ್ಲಿ ಉಂಟಾಯಿತು.

8ನೇ ಮುಖ್ಯ ರಸ್ತೆಯಲ್ಲಿ ಅಗೆಯುವ ಸಮಯದಲ್ಲಿ ಈ ಘಟನೆ ಸಂಭವಿಸಿದ್ದು, ಇದರಿಂದ ಅನಿಲ ಸೋರಿಕೆಯುಂಟಾಯಿತು. ಸಂಜೆ 5.30 ರಿಂದ 5.45 ರ ನಡುವೆ ಸೋರಿಕೆ ಸಂಭವಿಸಿದೆ, ಆಗ ದೊಡ್ಡ ಶಬ್ದ ಕೇಳಿಸಿತು, ನಂತರ ಆ ಪ್ರದೇಶದಲ್ಲಿ ತೀವ್ರವಾದ ಅನಿಲದ ವಾಸನೆ ಬಂದಿತು.

ಒಂದು ದೊಡ್ಡ ಶಬ್ದ ಕೇಳಿಸಿದಾಗ ಮನೆಯಿಂದ ಹೊರಬಂದು ನೋಡಿದಾಗ ಸಾಕಷ್ಟು ವಾಸನೆ ಬಂತು ಎಂದು GAIL ದೂರು ಸಂಖ್ಯೆಗೆ ಡಯಲ್ ಮಾಡಿದ ನಿವಾಸಿ ಲಕ್ಷ್ಮಿ ಫಡ್ಕೆ ಹೇಳುತ್ತಾರೆ. ಇದು ಬೆಂಕಿ ಅನಾಹುತಕ್ಕೆ ಕಾರಣವಾಗಬಹುದು ಎಂಬ ಭಯ ಉಂಟಾಗಿ ನಾವು ಮನೆಯಲ್ಲಿ ಕರೆಂಟ್ ಆಫ್ ಮಾಡಿದೆವು. ವಾಸನೆ ಅಸಹನೀಯ ಮತ್ತು ಆತಂಕಕಾರಿಯಾಗಿತ್ತು ಎಂದು ಹೇಳುತ್ತಾರೆ.

ಮಲ್ಲೇಶ್ವರಂ ಜನವಸತಿ ಇರುವ ಪ್ರದೇಶ. ವಿವಿಧ ನಾಗರಿಕ ಕಾಮಗಾರಿಗಳಿಗಾಗಿ ಈಗಾಗಲೇ ಹಲವಾರು ರಸ್ತೆಗಳನ್ನು ಅಗೆದು ಹಾಕಲಾಗಿರುವುದರಿಂದ, ನಿವಾಸಿಗಳು ತಮ್ಮ ವಾಹನಗಳನ್ನು ಸ್ಥಳಾಂತರಿಸಲು ಸಾಧ್ಯವಾಗಲಿಲ್ಲ ನಿವಾಸಿಗಳು ವಾಹನ ನಿಲ್ಲಿಸಲು ಕಷ್ಟಪಡುತ್ತಿದ್ದಾರೆ.

ಈ ಪ್ರದೇಶದಲ್ಲಿ ಕನಿಷ್ಠ ಒಂದು ಲಕ್ಷ ಹಿರಿಯ ನಾಗರಿಕರಿದ್ದಾರೆ, ಎಲ್ಲೆಡೆ ರಸ್ತೆಗಳು ಅಗೆದು ಹಾಕಲ್ಪಟ್ಟಿರುವುದರಿಂದ, ನಾವು ಸ್ಥಳಾಂತರಿಸಲು ಬಯಸಿದರೆ ನಮ್ಮಲ್ಲಿ ಹೆಚ್ಚಿನವರು ಹೊರಗೆ ಓಡಿಸಲು ಸಹ ಸಾಧ್ಯವಿಲ್ಲ ಎಂದು ಮತ್ತೊಬ್ಬ ನಿವಾಸಿ ವಿಜಯ ಶೆಣೈ ಹೇಳುತ್ತಾರೆ. ಇದು ಅತ್ಯಂತ ಉದ್ವಿಗ್ನ ಪರಿಸ್ಥಿತಿಯಾಗಿತ್ತು, ಕೆಲವು ರಸ್ತೆಗಳು ತುಂಬಾ ಕೆಟ್ಟದಾಗಿ ಅಗೆದು ಹಾಕಲ್ಪಟ್ಟಿವೆ, ಮಳೆ ಮತ್ತು ಮೃದುವಾದ ಮಣ್ಣಿನಿಂದಾಗಿ ಯಾರಾದರೂ ನಡೆಯಲು ಸಹ ಅಪಾಯಕಾರಿಯಾಗಿದೆ ಎನ್ನುತ್ತಾರೆ.

GAIL technicians undertake repairs of the pipeline in Malleswaram on Thursday
ಬೆಂಗಳೂರು: 3 ದಿನಕ್ಕೊಮ್ಮೆ ಗ್ಯಾಸ್ ಪೈಪ್ ಲೈನ್ ಸೋರಿಕೆ; ಗೇಲ್ ಸಂಸ್ಥೆ ಹೇಳಿಕೆ

ಅನಿಲ ಸೋರಿಕೆಯು ದೇಶೀಯ ಸಿಎನ್‌ಜಿ ಸರಬರಾಜನ್ನು ಅಡ್ಡಿಪಡಿಸಿತು. ಪ್ರದೇಶದ ಅನೇಕ ಮನೆಗಳು ಅಡುಗೆಗಾಗಿ ಎಲ್‌ಪಿಜಿಯಿಂದ ಪೈಪ್ಡ್ ಸಿಎನ್‌ಜಿಗೆ ಬದಲಾಯಿಸಿವೆ. ಸೋರಿಕೆಯ ನಂತರ, ಹೆಚ್ಚಿನ ಅಪಾಯವನ್ನು ತಡೆಗಟ್ಟಲು ಗೈಲ್ ಅಧಿಕಾರಿಗಳು ಪೂರೈಕೆಯನ್ನು ಸ್ಥಗಿತಗೊಳಿಸಿದ್ದಾರೆ.

ಹೀಗಾದರೆ ನಾವು ಮನೆಯಲ್ಲಿ ಅಡುಗೆ ಮಾಡುವುದು ಹೇಗೆ, ನಾವು ನಮ್ಮ ಎಲ್‌ಪಿಜಿ ಸಂಪರ್ಕಗಳನ್ನು ಬಿಟ್ಟುಕೊಟ್ಟಿದ್ದೇವೆ, ಈಗ ಸಿಎನ್‌ಜಿ ಕೂಡ ಕಡಿತಗೊಂಡಿದೆ. ಈಗ ಸಂಪೂರ್ಣವಾಗಿ ಅಸಹಾಯಕರಾಗಿದ್ದೇವೆ ಎಂದು ಮತ್ತೊಬ್ಬ ನಿವಾಸಿ ಹೇಳುತ್ತಾರೆ. ಘಟನೆಯಿಂದ ಯಾವುದೇ ಅನಾಹುತದ ವರದಿಯಾಗಿಲ್ಲ. ಆದರೆ ಮೂಲಸೌಕರ್ಯ ಕಾರ್ಯದ ಸಮಯದಲ್ಲಿ ಉತ್ತಮ ಸಮನ್ವಯ ಖಚಿತಪಡಿಸಿಕೊಳ್ಳಲು ನಾಗರಿಕ ಅಧಿಕಾರಿಗಳು ಮತ್ತು ಗ್ಯಾಸ್ ಪೂರೈಕೆ ಕಂಪನಿಯಿಂದ ತಕ್ಷಣದ ಕ್ರಮಕ್ಕೆ ನಿವಾಸಿಗಳು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com