ಭೋವಿ ಅಭಿವೃದ್ಧಿ ನಿಗಮ 'ಹಗರಣ': ಕೆಬಿಡಿಸಿ ಮಾಜಿ ಅಧಿಕಾರಿಗಳ ಆಸ್ತಿಗಳು ಮುಟ್ಟುಗೋಲು

ತನಿಖೆಯ ಭಾಗವಾಗಿ ನಾಗರಾಜಪ್ಪ ಮತ್ತು ಲೀಲಾವತಿ ಅವರನ್ನು ಏಪ್ರಿಲ್‌ನಲ್ಲಿ ಇಡಿ ಬಂಧಿಸಿದೆ ಮತ್ತು ಪ್ರಸ್ತುತ ಅವರು ನ್ಯಾಯಾಂಗ ಬಂಧನದಲ್ಲಿ ಜೈಲಿನಲ್ಲಿದ್ದಾರೆ.
K'taka Bhovi Development Corp
ಭೋವಿ ಅಭಿವೃದ್ಧಿ ನಿಗಮonline desk
Updated on

ಬೆಂಗಳೂರು: ರಾಜ್ಯ ಸರ್ಕಾರದ ಇಲಾಖೆಯಲ್ಲಿ ನಡೆದಿರುವ ಹಣಕಾಸು ಅಕ್ರಮಗಳ ತನಿಖೆಯ ಭಾಗವಾಗಿ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ (ಕೆಬಿಡಿಸಿ) ಇಬ್ಬರು ಮಾಜಿ ಅಧಿಕಾರಿಗಳ 26 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯ ಸೋಮವಾರ ತಿಳಿಸಿದೆ.

ಭೋವಿ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಗಳ ಕಲ್ಯಾಣಕ್ಕಾಗಿ ಕೆಬಿಡಿಸಿ ಕೆಲಸ ಮಾಡುತ್ತದೆ. ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳು ಕೆಬಿಡಿಸಿಯ ಮಾಜಿ ಜನರಲ್ ಮ್ಯಾನೇಜರ್ ಬಿ ಕೆ ನಾಗರಾಜಪ್ಪ, ಸಂಸ್ಥೆಯ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಆರ್ ಲೀಲಾವತಿ ಮತ್ತು ಇತರ ಕೆಲವು ಆರೋಪಿಗಳಿಗೆ ಸೇರಿವೆ.

ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ 26.27 ಕೋಟಿ ರೂ. ಮೌಲ್ಯದ ಆದರೆ ಪ್ರಸ್ತುತ ಮಾರುಕಟ್ಟೆ ಮೌಲ್ಯ 40 ಕೋಟಿ ರೂ. ಹೊಂದಿರುವ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ತಾತ್ಕಾಲಿಕ ಆದೇಶ ಹೊರಡಿಸಲಾಗಿದೆ ಎಂದು ಕೇಂದ್ರ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಈ ತನಿಖೆಯ ಭಾಗವಾಗಿ ನಾಗರಾಜಪ್ಪ ಮತ್ತು ಲೀಲಾವತಿ ಅವರನ್ನು ಏಪ್ರಿಲ್‌ನಲ್ಲಿ ಇಡಿ ಬಂಧಿಸಿದೆ ಮತ್ತು ಪ್ರಸ್ತುತ ಅವರು ನ್ಯಾಯಾಂಗ ಬಂಧನದಲ್ಲಿ ಜೈಲಿನಲ್ಲಿದ್ದಾರೆ.

ಮಧ್ಯವರ್ತಿಗಳು ಮತ್ತು ಅವರ ಸಹಚರರೊಂದಿಗೆ ಶಾಮೀಲಾಗಿ, 750 ಕ್ಕೂ ಹೆಚ್ಚು "ನಕಲಿ" ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಸಾಲ, ಸಬ್ಸಿಡಿ ಮತ್ತು ಹಣಕಾಸಿನ ನೆರವು ನೀಡುವ ಮೂಲಕ ಕೆಬಿಡಿಸಿಯಿಂದ ಹಣವನ್ನು "ದುರುಪಯೋಗಪಡಿಸಿಕೊಂಡಿದ್ದಾರೆ" ಎಂದು ಇಡಿ ಆರೋಪಿಸಿದೆ, ಇವುಗಳನ್ನು ಅವರು "ಮೋಸದಿಂದ" ತೆರೆದಿದ್ದಾರೆ.

ನಂತರ, ಕೆಬಿಡಿಸಿಯಿಂದ ಮಂಜೂರು ಮಾಡಿದ ಮೊತ್ತವನ್ನು ನಾಗರಾಜಪ್ಪ ಮತ್ತು ಇತರರು "ನಿಯಂತ್ರಿಸುವ" ಆದಿತ್ಯ ಎಂಟರ್‌ಪ್ರೈಸಸ್, ಸೋಮನಾಥೇಶ್ವರ ಎಂಟರ್‌ಪ್ರೈಸಸ್, ನ್ಯೂ ಡ್ರೀಮ್ಸ್ ಎಂಟರ್‌ಪ್ರೈಸಸ್, ಹರಂತಿಹಾ ಕ್ರಿಯೇಷನ್ಸ್ ಮತ್ತು ಅನ್ನಿಕಾ ಎಂಟರ್‌ಪ್ರೈಸಸ್‌ನಂತಹ ವಿವಿಧ ಸಂಸ್ಥೆಗಳ ಬ್ಯಾಂಕ್ ಖಾತೆಗಳಿಗೆ "ತಿರುಗಿಸಲಾಗಿದೆ".

K'taka Bhovi Development Corp
ಭೋವಿ ಅಭಿವೃದ್ಧಿ ನಿಗಮ ಅಕ್ರಮ: ಕೆಬಿಡಿಸಿಯ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಬಂಧಿಸಿದ ED

ಈ ಹಣವನ್ನು ಆಸ್ತಿಗಳ ಖರೀದಿ, ಮಧ್ಯವರ್ತಿಗಳಿಗೆ ಪಾವತಿ ಮಾಡುವುದು ಮತ್ತು ವ್ಯಕ್ತಿಗಳು ಮತ್ತು ಇತರ ವಿವಿಧ ಸಂಸ್ಥೆಗಳ ಬ್ಯಾಂಕ್ ಖಾತೆಗಳಿಗೆ ತಿರುಗಿಸಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

"ಕೆಬಿಡಿಸಿಯಿಂದ ದುರುಪಯೋಗಪಡಿಸಿಕೊಂಡ ಹಣವನ್ನು ಮುಖ್ಯವಾಗಿ ಅವರ ಐಷಾರಾಮಿ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಮತ್ತು ಅವರ ಹೆಸರಿನಲ್ಲಿ ಮತ್ತು ಅವರ ಕುಟುಂಬ ಸದಸ್ಯರ ಹೆಸರಿನಲ್ಲಿ ಸ್ಥಿರ ಮತ್ತು ಚರ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಬಳಸಲಾಗಿದೆ" ಎಂದು ಇಡಿ ಹೇಳಿದೆ.

ಕೆಬಿಡಿಸಿಯಿಂದ 97 ಕೋಟಿ ರೂ. ಮೌಲ್ಯದ ಹಣವನ್ನು "ದುರುಪಯೋಗಪಡಿಸಿಕೊಂಡ ಮತ್ತು ಬೇರೆಡೆ ತಿರುಗಿಸಿದ" ಆರೋಪದ ಮೇಲೆ ಕರ್ನಾಟಕ ಪೊಲೀಸರು ಹಲವಾರು ಎಫ್‌ಐಆರ್‌ಗಳನ್ನು ದಾಖಲಿಸಿದ್ದರಿಂದ ಈ ಹಣ ವರ್ಗಾವಣೆ ಪ್ರಕರಣ ಉದ್ಭವಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com