Smart Meters: ಕೇಂದ್ರದಿಂದ ಪ್ರತಿ ಮೀಟರ್‌ಗೆ 900 ರೂ ಸಬ್ಸಿಡಿ ಸುಳ್ಳು; ಬಿಜೆಪಿಯದು ದಾರಿ ತಪ್ಪಿಸುವ ಕೆಲಸ- ಕರ್ನಾಟಕ ಕಾಂಗ್ರೆಸ್

ನೀರಾವರಿ ಪಂಪ್ ಸೆಟ್‌ಗಳನ್ನು ಹೊರತುಪಡಿಸಿ ಹೊಸ ಸಂಪರ್ಕಗಳಿಗೆ ಮಾತ್ರ ಸ್ಮಾರ್ಟ್ ಮೀಟರ್ ಕಡ್ಡಾಯವಾಗಿದೆ. ಸ್ಮಾರ್ಟ್ ಮೀಟರ್ ಅಳವಡಿಕೆ ಕುರಿತು ನಿರ್ಧಾರ ತೆಗೆದುಕೊಳ್ಳುವ ಆಯ್ಕೆಯನ್ನು ಸುಮಾರು 3 ಕೋಟಿ ಜನರಿಗೆ ಬಿಡಲಾಗಿದೆ.
Dr CN Ashwathnarayan
ಅಶ್ವತ್ಥ ನಾರಾಯಣ
Updated on

ಬೆಂಗಳೂರು: ಕೇಂದ್ರ ಸರ್ಕಾರದ ಪರಿಷ್ಕೃತ ವಿತರಣಾ ವಲಯ ಯೋಜನೆಯಡಿ (RDSS)ಸ್ಮಾರ್ಟ್ ಮೀಟರ್‌ ಖರೀದಿ ವಿಷಯದಲ್ಲಿ ರಾಜ್ಯ ಸರ್ಕಾರವನ್ನು ಸಮರ್ಥಿಸಿಕೊಂಡಿರುವ ಕಾಂಗ್ರೆಸ್, ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ಇತ್ತೀಚಿನ ಆರೋಪಗಳನ್ನು ಅವಾಸ್ತವಿಕ ಮತ್ತು ರಾಜಕೀಯ ಪ್ರೇರಿತ ಎಂದು ಬಣ್ಣಿಸಿದೆ.

ಪಕ್ಷದ ಮಾಧ್ಯಮ ಘಟಕದ ಅಧ್ಯಕ್ಷ ರಮೇಶ್ ಬಾಬು ಮಾತನಾಡಿ, ಸರ್ಕಾರವು ಪಾರದರ್ಶಕ ರೀತಿಯಲ್ಲಿ ಸ್ಮಾರ್ಟ್ ಮೀಟರ್‌ಗಳನ್ನು ಜಾರಿಗೊಳಿಸುತ್ತಿದೆ. ಇದು ಇಂಧನ ದಕ್ಷತೆಯನ್ನು ಸುಧಾರಿಸಲು, ಪ್ರಸರಣ ಮತ್ತು ವಿತರಣಾ ನಷ್ಟವನ್ನು ಕಡಿಮೆ ಮಾಡಲು ರಾಷ್ಟ್ರವ್ಯಾಪಿ ಪ್ರಯತ್ನದ ಭಾಗವಾಗಿದೆ. RDSS ಯೋಜನೆಯಡಿ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಪ್ರತಿ ಮೀಟರ್‌ಗೆ ರೂ. 900 ಸಬ್ಸಿಡಿ ನೀಡುತ್ತದೆ ಎಂಬ ಅಶ್ವತ್ಥ ನಾರಾಯಣ ಅವರ ಹೇಳಿಕೆ ಸುಳ್ಳು ಎಂದಿದ್ದಾರೆ.

Dr CN Ashwathnarayan
ಸ್ಮಾರ್ಟ್ ಮೀಟರ್ ಹಗರಣ: ಸಚಿವ ಜಾರ್ಜ್ ವಿರುದ್ಧ ಲೋಕಾಯುಕ್ತಕ್ಕೆ BJP ದೂರು, ತನಿಖೆಗೆ ಆಗ್ರಹ

ವಾಸ್ತವಾಂಶ ಗೊತ್ತಿದ್ದರೂ ಅಶ್ವತ್ಥನಾರಾಯಣ ಉದ್ದೇಶಪೂರ್ವಕವಾಗಿ ಜನರನ್ನು ದಾರಿತಪ್ಪಿಸುತ್ತಿದ್ದಾರೆ. 2020-21ರಲ್ಲಿ ಬಿಜೆಪಿ ನೇತೃತ್ವದ ಕರ್ನಾಟಕ ಸರ್ಕಾರವೇ ಅದೇ RDSS ಯೋಜನೆಯನ್ನು ತಿರಸ್ಕರಿಸಿದೆ ಎಂದರು.

ಕೆಇಆರ್‌ಸಿ ನಿರ್ದೇಶನದ ಪ್ರಕಾರ, ನೀರಾವರಿ ಪಂಪ್ ಸೆಟ್‌ಗಳನ್ನು ಹೊರತುಪಡಿಸಿ ಹೊಸ ಸಂಪರ್ಕಗಳಿಗೆ ಮಾತ್ರ ಸ್ಮಾರ್ಟ್ ಮೀಟರ್ ಕಡ್ಡಾಯವಾಗಿದೆ. ಸ್ಮಾರ್ಟ್ ಮೀಟರ್ ಅಳವಡಿಕೆ ಕುರಿತು ನಿರ್ಧಾರ ತೆಗೆದುಕೊಳ್ಳುವ ಆಯ್ಕೆಯನ್ನು ಸುಮಾರು 3 ಕೋಟಿ ಜನರಿಗೆ ಬಿಡಲಾಗಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com