ಹೊನ್ನಾವರ ಬಂದರು, ಶರಾವತಿ ಯೋಜನೆ ಕೈ ಬಿಡಿ: ಸಿಎಂ ಸಿದ್ದರಾಮಯ್ಯಗೆ ಮೇಧಾ ಪಾಟ್ಕರ್ ಮನವಿ

ಎರಡು ಯೋಜನೆಗಳು ಇಡೀ ಪರಿಸರ ವ್ಯವಸ್ಥೆಯನ್ನು ನಾಶಮಾಡುತ್ತವೆ ಮತ್ತು ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಪಶ್ಚಿಮ ಘಟ್ಟಗಳ ಕೆಲವು ಭಾಗಗಳಲ್ಲಿ ಪರಿಸರ ವಿಜ್ಞಾನವು ಯಾವ ರೀತಿ ತೊಂದರೆಗೊಳಗಾಗಿದೆ ಎಂಬುದನ್ನು ಎಲ್ಲರೂ ನೋಡಿದ್ದಾರೆ.
Medha patkar
ಮೇಧಾ ಪಾಟ್ಕರ್
Updated on

ಬೆಂಗಳೂರು: ಶರಾವತಿ ನದಿಯು ಹಲವು ಕಡೆಗಳಿಂದ ಹಲವಾರು ಬೆದರಿಕೆಗಳನ್ನು ಎದುರಿಸುತ್ತಿದೆ. ಈ ಸಮಸ್ಯೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗಿದ್ದು, ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಹೇಳಿದ್ದಾರೆ.

ಆಲ್‌ ಇಂಡಿಯಾ ಸೆಂಟ್ರಲ್‌ ಕೌನ್ಸಿಲ್‌ ಆಫ್‌ ಟ್ರೇಡ್‌ ಯೂನಿಯನ್ಸ್‌ (ಎಐಸಿಸಿಟಿಯು), ಫ್ರೈಡೇಸ್‌ ಫಾರ್‌ ಫ್ಯೂಚರ್‌ ಕರ್ನಾಟಕ (ಎಫ್‌ಎಫ್‌ಎಫ್‌–ಕೆ) ಮತ್ತು ಪೀಪಲ್ಸ್‌ ಯೂನಿಯನ್‌ ಫಾರ್‌ ಸಿವಿಲ್‌ ಲಿಬರ್ಟೀಸ್‌– ಕರ್ನಾಟಕ (ಪಿಯುಸಿಎಲ್‌–ಕೆ) ಜಂಟಿಯಾಗಿ ಸಿದ್ಧಪಡಿಸಿರುವ ‘ಹೊನ್ನಾವರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಸತ್ಯಶೋಧನಾ ವರದಿ’ಯನ್ನು ಮಂಗಳವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಪ್ರಸ್ತಾವಿತ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯು 16,000 ಕ್ಕೂ ಹೆಚ್ಚು ಮರಗಳನ್ನು ಕಡಿಯಲು ಕಾರಣವಾಗುತ್ತದೆ, ಇದು ಸಿಂಹ ಬಾಲದ ಮಕಾಕ್ ಸೇರಿದಂತೆ ವಿವಿಧ ವನ್ಯಜೀವಿ ಪ್ರಭೇದಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ನಿರಂತರ ಕೊರೆತದಿಂದ ಪ್ರಾಚೀನ ಪಶ್ಚಿಮ ಘಟ್ಟಗಳನ್ನು ನಾಶಪಡಿಸುತ್ತದೆ ಎಂದು ಪಾಟ್ಕರ್ ತಿಳಿಸಿದ್ದಾರೆ.

ಶರಾವತಿ ನದಿ ಅರೇಬಿಯನ್ ಸಮುದ್ರವನ್ನು ಸಂಧಿಸುವ ಉತ್ತರ ಕನ್ನಡ ಜಿಲ್ಲೆಯ ಪ್ರಸ್ತಾವಿತ ಹೊನ್ನಾವರ ಬಂದರು ಯೋಜನೆಯು ನದೀಮುಖಗಳು ಮತ್ತು ಮ್ಯಾಂಗ್ರೋವ್‌ಗಳನ್ನು ನಾಶಪಡಿಸುತ್ತದೆ, ಮೀನುಗಾರಿಕೆಯ ಮೇಲೆ ಪರಿಣಾಮ ಬೀರುತ್ತದೆ. ಇಡೀ ಮೀನುಗಾರ ಸಮುದಾಯದ ಜೀವನೋಪಾಯವನ್ನು ನಾಶಪಡಿಸುತ್ತದೆ ಹೇಳಿದ್ದಾರೆ.

Medha patkar
ನೆನೆಗುದಿಗೆ ಬಿದ್ದಿರುವ ಹೊನ್ನಾವರ ಬಂದರು ಯೋಜನೆ ಆರಂಭಿಸಲು ಕ್ರಮ: ಈಶ್ವರ್ ಖಂಡ್ರೆ

ಎರಡು ಯೋಜನೆಗಳು ಇಡೀ ಪರಿಸರ ವ್ಯವಸ್ಥೆಯನ್ನು ನಾಶಮಾಡುತ್ತವೆ ಮತ್ತು ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಪಶ್ಚಿಮ ಘಟ್ಟಗಳ ಕೆಲವು ಭಾಗಗಳಲ್ಲಿ ಪರಿಸರ ವಿಜ್ಞಾನವು ಯಾವ ರೀತಿ ತೊಂದರೆಗೊಳಗಾಗಿದೆ ಎಂಬುದನ್ನು ಎಲ್ಲರೂ ನೋಡಿದ್ದಾರೆ. ನಾನು ಸಿದ್ದರಾಮಯ್ಯ ಅವರೊಂದಿಗೆ ಸಂಕ್ಷಿಪ್ತ ಮಾತುಕತೆ ನಡೆಸಿದೆ. ಈ ವಿಷಯಗಳನ್ನು ಅವರ ಗಮನಕ್ಕೆ ತಂದಿದ್ದೇನೆ.

ಅವರು ಇದನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ. ಪ್ರತಿಭಟನಾ ನಿರತ ಮೀನುಗಾರರು ಮತ್ತು ಅವರ ಕುಟುಂಬಗಳ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಕೈಬಿಡುವಂತೆ ಪೊಲೀಸರಿಗೆ ನಿರ್ದೇಶಿಸುವುದಾಗಿಯೂ ಅವರು ಭರವಸೆ ನೀಡಿದ್ದಾರೆ ಎಂದು ಮೇಧಾ ಪಾಟ್ಕರ್ ತಿಳಿಸಿದ್ದಾರೆ.

ಚುನಾವಣೆಗೆ ಮೊದಲು, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಮಂಕಾಳ್ ವೈದ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೊನ್ನಾವರಕ್ಕೆ ಭೇಟಿ ನೀಡಿ ಮೀನುಗಾರ ಸಮುದಾಯದ ಭೂಮಿಯನ್ನು ಕಳೆದುಕೊಳ್ಳುವುದಿಲ್ಲ, ಬಂದರು ನಿರ್ಮಾಣವಾಗುವುದಿಲ್ಲ ಎಂದು ಭರವಸೆ ನೀಡಿದ್ದರು. ಆದರೆ ಅವರು ಏನನ್ನೂ ಮಾಡಿಲ್ಲ. ಸಿದ್ದರಾಮಯ್ಯ ಅವರ ಹಿನ್ನೆಲೆ ನನಗೆ ತಿಳಿದಿದೆ ಮತ್ತು ಈ ಯೋಜನೆಗಳನ್ನು ಪರಿಶೀಲಿಸಲಿಸಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಭರವಸೆ ವ್ಯಕ್ತ ಪಡಿಸಿದ್ದಾರೆ.

ಬಂದರು ಯೋಜನೆಗೆ ಪಡೆದ ಪರಿಸರ ಅನುಮತಿಗಳನ್ನು ನಿಗದಿತ ನಿಯಮಗಳ ಪ್ರಕಾರ ಮಾಡಲಾಗಿಲ್ಲ ಎಂದು ಪಾಟ್ಕರ್ ಹೇಳಿದ್ದಾರೆ. ಒಂದು ದಶಕದ ಹಿಂದೆ ಅವುಗಳನ್ನು ಪಡೆಯಲಾಗಿತ್ತು. ಈಗ ಅವುಗಳ ಅವಧಿ ಮುಗಿದಿದೆ. ಹೊನ್ನಾವರದಲ್ಲಿ ಆಲಿವ್ ರಿಡ್ಲಿ ಆಮೆಗಳು ಇಲ್ಲ ಎಂದು ಸುಳ್ಳು ವರದಿಗಳನ್ನು ಸಲ್ಲಿಸಲಾಗಿತ್ತು. ಆದರೆ ಆಗಸ್ಟ್‌ನಲ್ಲಿ ಸಮೀಕ್ಷೆ ನಡೆಸಲಾಗಿತ್ತು, ಆಗ ಆಮೆಗಳು ತೀರಕ್ಕೆ ಭೇಟಿ ನೀಡುವುದಿಲ್ಲ. ಮೂರು ತಿಂಗಳ ಅಧ್ಯಯನದ ನಂತರ ಬಂದರಿಗೆ ಪರಿಸರ ಅನುಮತಿ ಪಡೆಯಲಾಯಿತು.

Medha patkar
ರಾಜ್ಯದ ಇಂಧನ ಅಗತ್ಯಗಳಿಗೆ ಶರಾವತಿ ಯೋಜನೆ ನಿರ್ಣಾಯಕ: ಸಚಿವ ಕೆ.ಜೆ ಜಾರ್ಜ್

ಬಂದರನ್ನು NH-66 ಗೆ ಸಂಪರ್ಕಿಸುವ 50 ಕಿ.ಮೀ ರಸ್ತೆಯ ನಿರ್ಮಾಣವನ್ನು ಯಾವುದೇ ಸಾರ್ವಜನಿಕ ವಿಚಾರಣೆಯಿಲ್ಲದೆ ಪ್ರಾರಂಭಿಸಲಾಯಿತು. ಎಲ್ಲಾ ಕರಾವಳಿ ವಲಯ ನಿಯಮಗಳು ಮತ್ತು ಪರಿಸರ ಪ್ರಭಾವದ ನಿಯಮಗಳನ್ನು ಉಲ್ಲಂಘಿಸಲಾಗಿದೆ," ಎಂದು ಅವರು ಹೇಳಿದರು.

ಮಂಗಳವಾರ ನಡೆದ ಸಭೆಯಲ್ಲಿ ನಾನು ಈ ಎಲ್ಲಾ ಸಮಸ್ಯೆಗಳನ್ನು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ಕರ್ನಾಟಕ ಸಾಗರ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ಸಿ. ಬಾಲಚಂದ್ರ ಅವರ ಗಮನಕ್ಕೆ ತಂದಿದ್ದೇನೆ.

ಕರ್ನಾಟಕ ಸರ್ಕಾರದಿಂದ ನಮಗೆ ಬಹಳಷ್ಟು ನಿರೀಕ್ಷೆಗಳಿವೆ. ರೈತರ ಪ್ರತಿಭಟನೆಯ ನಂತರ ರಾಜ್ಯ ಸರ್ಕಾರ ದೇವೇನಹಳ್ಳಿಯಲ್ಲಿ ಏರೋಸ್ಪೇಸ್ ರಚಿಸುವ ನಿರ್ಧಾರವನ್ನು ಹಿಂತೆಗೆದುಕೊಂಡಿದ್ದರೂ, ಹೊನ್ನಾವರ ಬಂದರು, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಮತ್ತು ಮಲ್ಪೆ ನದಿ ಯೋಜನೆಯ ಸಂದರ್ಭದಲ್ಲಿಯೂ ಇದನ್ನು ಪರಿಗಣಿಸಬೇಕು ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com