ಮೈಸೂರು: ಮಾನವ ಆವಾಸಸ್ಥಾನಗಳಿಗೆ 21 ಹುಲಿಗಳ ಲಗ್ಗೆ; ಪಶುವೈದ್ಯರ ಕೊರತೆ, ಸಿಬ್ಬಂದಿ ಮುಷ್ಕರದಿಂದ ಕಾರ್ಯಾಚರಣೆಗೆ ಅಡ್ಡಿ!

ಮೈಸೂರು ಜಿಲ್ಲೆಯಾದ್ಯಂತ 21 ಹುಲಿಗಳು ಮಾನವ ಪ್ರಾಬಲ್ಯದ ಭೂಪ್ರದೇಶಗಳಿಗೆ ಬಂದು ಹೋಗುತ್ತಿವೆ ಎಂದು ಅರಣ್ಯ ಉಪ ಸಂರಕ್ಷಣಾಧಿಕಾರಿ ಸ್ವತಃ ದೃಢಪಡಿಸಿದ್ದಾರೆ.
Forest officials carry out a combing operation to capture a tiger at HD Kote
ಹುಲಿ ಕಾರ್ಯಾಚರಣೆ
Updated on

ಮೈಸೂರು: ಕೇವಲ ಒಂದು ತಿಂಗಳ ಅಂತರದಲ್ಲಿ ಮೂರು ರೈತರು ಹುಲಿ ದಾಳಿಯಲ್ಲಿ ಸಾವನ್ನಪ್ಪಿದ ನಂತರ ಅರಣ್ಯ ಇಲಾಖೆ ತೀವ್ರ ಆತಂಕಕಾರಿ ಸಂಗತಿಯನ್ನು ಬಹಿರಂಗಪಡಿಸಿದೆ. ಮೈಸೂರು ಜಿಲ್ಲೆಯಾದ್ಯಂತ 21 ಹುಲಿಗಳು ಮಾನವ ಪ್ರಾಬಲ್ಯದ ಭೂಪ್ರದೇಶಗಳಿಗೆ ಬಂದು ಹೋಗುತ್ತಿವೆ ಎಂದು ಅರಣ್ಯ ಉಪ ಸಂರಕ್ಷಣಾಧಿಕಾರಿ ಸ್ವತಃ ದೃಢಪಡಿಸಿದ್ದಾರೆ.

ಹುಲಿಗಳ ಹೆಚ್ಚುತ್ತಿರುವ ಒಳನುಗ್ಗುವಿಕೆ, ಅರಣ್ಯ-ಅಂಚಿನ ಹಳ್ಳಿಗಳಲ್ಲಿ ಭಯ ಹೆಚ್ಚಿಸಿದೆ, ಹುಲಿಗಳ ದಾಳಿ ದೈನಂದಿನ ದಿನಚರಿಯಾಗುತ್ತಿದೆ. ಇದರ ಜತೆಗೆ ಅರಣ್ಯ ಇಲಾಖೆಯು ವನ್ಯಜೀವಿ ಪಶುವೈದ್ಯಕೀಯ ಸಿಬ್ಬಂದಿಯ ಕೊರತೆ ಎದುರಾಗಿದೆ. ಇದರಿಂದಾಗಿ ಕೆಲವು ಸಂದರ್ಭಗಳಲ್ಲಿ ರಕ್ಷಣೆ ಮತ್ತು ಸಂಘರ್ಷ-ತಗ್ಗಿಸುವಿಕೆಯ ಕಾರ್ಯಾಚರಣೆಗಳನ್ನು ಸಹ ನಿಲ್ಲಿಸುತ್ತಿದೆ.

NTCA ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ (SOP) ಅಡಿಯಲ್ಲಿ, ಹುಲಿ ಸೆರೆಹಿಡಿಯುವಿಕೆ ಅಥವಾ ರಕ್ಷಣೆಯ ಸಮಯದಲ್ಲಿ ಕನಿಷ್ಠ ಇಬ್ಬರು ತರಬೇತಿ ಪಡೆದ ವನ್ಯಜೀವಿ ಪಶುವೈದ್ಯರು ಹಾಜರಿರಬೇಕು. ಆದರೂ ಇಡೀ ರಾಜ್ಯವು 31 ಜಿಲ್ಲೆಗಳಿಗೆ ಕೇವಲ ಐದು ವನ್ಯಜೀವಿ ಪಶುವೈದ್ಯರನ್ನು (ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಡಿಯಲ್ಲಿ ಕೆಲಸ ಮಾಡುವವರನ್ನು ಹೊರತುಪಡಿಸಿ) ಹೊಂದಿದೆ. ಇನ್ನೂ ಕಳವಳಕಾರಿ ಸಂಗತಿಯೆಂದರೆ, ಐವರು ಪಶುವೈದ್ಯರು ಪಶುವೈದ್ಯಕೀಯ ಮತ್ತು ಪಶುಸಂಗೋಪನಾ ಇಲಾಖೆಯಿಂದ ನಿಯೋಜನೆಗೊಂಡಿದ್ದಾರೆ ಮತ್ತು ಅವರಲ್ಲಿ ಮೂವರು ವನ್ಯಜೀವಿ ಹಿನ್ನೆಲೆಯನ್ನು ಹೊಂದಿಲ್ಲ ಎಂದು ಹುಲಿ ಕೂಂಬಿಂಗ್ ಕಾರ್ಯಾಚರಣೆಯ ಭಾಗವಾಗಿರುವ ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೈಸೂರು ಜಿಲ್ಲೆಯ ಸರಗೂರು ಮತ್ತು ಎಚ್‌ಡಿ ಕೋಟೆ ತಾಲ್ಲೂಕುಗಳಲ್ಲಿನ ಗ್ರಾಮಗಳು ಪದೇ ಪದೇ ಹುಲಿಗಳ ದಾಳಿಗೆ ಒಳಗಾಗುತ್ತಿವೆ. ವಿಶೇಷ, ಸಮರ್ಪಿತ ಸಿಬ್ಬಂದಿಯ ಅನುಪಸ್ಥಿತಿಯು ಸಂಘರ್ಷ ನಿರ್ವಹಣೆಯಲ್ಲಿ ದೊಡ್ಡ ಅಡಚಣೆಯಾಗಿದೆ. ಮಾನವ ಪ್ರಾಬಲ್ಯದ ಭೂಪ್ರದೇಶದಲ್ಲಿ ಹುಲಿಗಳ ಅಲೆದಾಟದಿಂದಾಗಿ ಉಂಟಾಗುವ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸುವುದು ದೊಡ್ಡ ಸವಾಲಾಗಿದೆ.

Forest officials carry out a combing operation to capture a tiger at HD Kote
ಮೈಸೂರಿನಲ್ಲಿ ಮುಂದುವರೆದ ಹುಲಿ ದಾಳಿ; ಸರಗೂರಿನಲ್ಲಿ ದನಗಾಹಿ ಸಾವು

ದಶಕಗಳ ಹಿಂದೆ ಪ್ರಸ್ತಾಪಿಸಲಾದ ವನ್ಯಜೀವಿ ಪಶುವೈದ್ಯರ ಶಾಶ್ವತ ಪಡೆ, ಫೈಲ್‌ಗಳು ಮತ್ತು ಅಧಿಕೃತ ಪತ್ರವ್ಯವಹಾರದಲ್ಲಿ ಸಿಕ್ಕಿಹಾಕಿಕೊಂಡಿದೆ, ಹೀಗಾಗಿ ಇನ್ನೂ ಅನುಷ್ಠಾನಗೊಂಡಿಲ್ಲ,ಕರ್ನಾಟಕದಲ್ಲಿ ವನ್ಯಜೀವಿ ಪಶುವೈದ್ಯರ ಮೀಸಲಾದ, ಶಾಶ್ವತ ಪಡೆ ರಚಿಸುವ ತುರ್ತು ಕುರಿತು ಟಿಪ್ಪಣಿಯನ್ನು ಕಳುಹಿಸಿದ್ದಾರೆ. ವಾಸ್ತವವಾಗಿ, ಅವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಔಪಚಾರಿಕವಾಗಿ ಪತ್ರ ಬರೆದು, ವಿಳಂಬವಿಲ್ಲದೆ ಪ್ರಕ್ರಿಯೆಯನ್ನು ಪ್ರಾರಂಭಿಸಲು ಇಲಾಖೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಕೇವಲ ಎರಡು ವಾರಗಳ ಹಿಂದೆ ನಿರ್ದೇಶನ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಈ ವಿಷಯದ ಕುರಿತು ಉನ್ನತ ಮಟ್ಟದ ಸಭೆ ನಡೆದಿದ್ದು, ಸಿಬ್ಬಂದಿ ಕೊರತೆಯನ್ನು ಪರಿಹರಿಸಲು ಅಗತ್ಯವಾದ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ.

ಮಾನವ-ಪ್ರಾಣಿ ಸಂಘರ್ಷ ಈಗಾಗಲೇ ಹೆಚ್ಚುತ್ತಿರುವ ಈ ಸಮಯದಲ್ಲಿ, ಕರ್ನಾಟಕದ ಅರಣ್ಯ ಇಲಾಖೆಯ ದಿನಗೂಲಿ ಮತ್ತು ಹೊರಗುತ್ತಿಗೆ ಮುಂಚೂಣಿ ಸಿಬ್ಬಂದಿಯ ರಾಜ್ಯವ್ಯಾಪಿ ಮುಷ್ಕರವು ವನ್ಯಜೀವಿ ಪ್ರದೇಶದ ವಿಶಾಲ ಪ್ರದೇಶದಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.

ಹುಲಿ ಮೀಸಲು ಪ್ರದೇಶಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳು ಸೇರಿದಂತೆ ಎಲ್ಲಾ 36 ವನ್ಯಜೀವಿ ವಿಭಾಗಗಳಿಂದ ಸಾವಿರಾರು ಕಾರ್ಮಿಕರು ನವೆಂಬರ್ 17 ಮತ್ತು 18 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಒಟ್ಟುಗೂಡಲಿದ್ದಾರೆ, ಉದ್ಯೋಗ ಭದ್ರತೆ, ಆರೋಗ್ಯ ಸೌಲಭ್ಯಗಳು ಮತ್ತು ಅರಣ್ಯ ಕಾರ್ಯಾಚರಣೆಗಳಲ್ಲಿ ಪ್ರಾಬಲ್ಯ ಹೊಂದಿರುವ ಹೊರಗುತ್ತಿಗೆ ವ್ಯವಸ್ಥೆಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸುತ್ತಾರೆ.

Forest officials carry out a combing operation to capture a tiger at HD Kote
ಔಷಧೀಯ ಸಸ್ಯಗಳ ಸ್ವರ್ಗ ಕಪ್ಪತಗುಡ್ಡ ಅಭಯಾರಣ್ಯ; ಈಗ 18 ಪ್ರಾಣಿಗಳ ಆವಾಸ ಸ್ಥಾನ!

ಖಾಯಂ ಉದ್ಯೋಗಿಗಳಿಗೆ ಸಮಾನವಾದ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದರೂ ಮತ್ತು ತಮ್ಮ ಜೀವಗಳನ್ನು ಪಣಕ್ಕಿಟ್ಟರೂ, ಈ ಕಾರ್ಮಿಕರಿಗೆ ಯಾವುದೇ ವಿಮೆ, ವೈದ್ಯಕೀಯ ಬೆಂಬಲ ಅಥವಾ ನಿಜವಾದ ಇಲಾಖಾ ರಕ್ಷಣೆಯಿಲ್ಲ ಎಂದು ಹೇಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com