ಬಿಗ್ ಬಾಸ್ ಗೂ ನಮಗೂ ಯಾವುದೇ ಸಂಬಂಧವಿಲ್ಲ: ನಿಯಮ ಉಲ್ಲಂಘಿಸಿದ್ದಕ್ಕೆ ಜಾಲಿವುಡ್ ಸ್ಟುಡಿಯೋ ಸೀಲ್ ; KSPCB
ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೂ ಬಿಗ್ ಬಾಸ್ ಶೋಗೂ ಯಾವುದೇ ಸಂಬಂಧವಿಲ್ಲ. ನಾವು ನೋಟಸ್ ನೀಡಿರುವುದು ಜಾಲಿವುಡ್ ಸ್ಟುಡಿಯೋಸ್ ಗೆ ಮಾತ್ರ. ಹಾಗಾಗಿ, ನಮ್ಮ ಟಾರ್ಗೆಟ್ ಬಿಗ್ ಬಾಸ್ ಅಲ್ಲ. ಇದರಲ್ಲಿ ಯಾರೂ ರಾಜಕೀಯ ಮಾಡುವುದು ಬೇಡ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾದ ಪಿಎಂ ನರೇಂದ್ರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ವರದಿಯ ಆಧಾರದ ಮೇಲೆ ಮತ್ತು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ. ನಡೆಯುತ್ತಿರುವ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ನಮಗೆ ಏನೂ ತಿಳಿದಿಲ್ಲ, ಅದನ್ನೂ ಮುಚ್ಚುವ ಆದೇಶಕ್ಕೂ ಯಾವುದೇ ಸಂಬಂಧವಿಲ್ಲ. ಜಾಲಿವುಡ್ ಸ್ಟುಡಿಯೋದ 30 ಎಕರೆ ಆವರಣವನ್ನು ಸೀಲ್ ಮಾಡುವ ಆದೇಶವಿತ್ತು ಎಂದು ತಿಳಿಸಿದರು.
ಅಕ್ಟೋಬರ್ 6 ರಂದು, KSPCB ಕರ್ನಾಟಕ ವಾಯು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ನಿಯಮಗಳು 1983 ರ ವಾಯು (ತಡೆಗಟ್ಟುವಿಕೆ ಮತ್ತು ನಿರಂತರ ಮಾಲಿನ್ಯ ಕಾಯ್ದೆ 1981) ರ ಸೆಕ್ಷನ್ 31(A) ಜಾಲಿ ವುಡ್ ಸ್ಟುಡಿಯೋ ಮತ್ತು ಅಡ್ವೆಂಚರ್ ಗೆ ನೋಟಿಸ್ ಜಾರಿ ಮಾಡಿತ್ತು. ಅಕ್ಟೋಬರ್ 7 ರಂದು, ಆವರಣವನ್ನು ಸೀಲ್ ಮಾಡಲಾಯಿತು, ಬಿಗ್ ಬಾಸ್ ಚಿತ್ರೀಕರಣವನ್ನು ನಿಲ್ಲಿಸಲಾಯಿತು.
ನಾನು ಇಲ್ಲಿ ರಾಜಕಾರಣಿಯಲ್ಲ. ಬಿಗ್ ಬಾಸ್ ಶೂಟಿಂಗ್ ಪ್ರಾರಂಭವಾಗುವ ಮೊದಲೇ ಜಾಲಿವುಡ್ ಸ್ಟುಡಿಯೋಗೆ ನೋಟಿಸ್ ನೀಡಲಾಗಿದೆ. ಇದನ್ನು 2024 ರಲ್ಲಿ ನೀಡಲಾಯಿತು. ಪ್ರತಿಕ್ರಿಯಿಸಲು ಅವರಿಗೆ ಸಾಕಷ್ಟು ಸಮಯವನ್ನು ನೀಡಲಾಯಿತು. ಆದರೆ ಯಾರೂ ನಮ್ಮನ್ನು ಭೇಟಿ ಮಾಡಲು ಅಥವಾ ಸಮಸ್ಯೆಯನ್ನು ಪರಿಹರಿಸಲು ಬಂದಿರಲಿಲ್ಲ. ಆವರಣವನ್ನು ಸೀಲ್ ಮಾಡುವ ಮೊದಲು ಮೂರು ನೋಟಿಸ್ಗಳನ್ನು ನೀಡಲಾಯಿತು ಎಂದು ಅವರು ಹೇಳಿದರು.
ಈ ವಿಷಯ ಆಗಸ್ಟ್ನಲ್ಲಿ ತಮ್ಮ ಗಮನಕ್ಕೆ ಬಂದಿತ್ತು ಮತ್ತು ಸೆಪ್ಟೆಂಬರ್ನಲ್ಲಿ ನಿರ್ಧಾರಕ್ಕಾಗಿ ಮಂಡಳಿ ಸಮಿತಿಯ ಮುಂದೆ ಫೈಲ್ ಇಡಲಾಗಿತ್ತು. ವಿವರವಾದ ಸೈಟ್ ವರದಿಯ ನಂತರ ಅಕ್ಟೋಬರ್ನಲ್ಲಿ ಆದೇಶ ಹೊರಡಿಸಲಾಯಿತು. ಸಮೀಕ್ಷೆ ನಡೆದಾಗ, ಬಿಗ್ ಬಾಸ್ ಶೂಟಿಂಗ್ ನಡೆಯುತ್ತಿರಲಿಲ್ಲ ಎಂದು ಅವರು ಹೇಳಿದರು. ಕೆಎಸ್ಪಿಸಿಬಿಯನ್ನು ಸಂಪರ್ಕಿಸದೆ ಸ್ಟುಡಿಯೋ ಮಾಲೀಕರು ಶೂಟಿಂಗ್ ಮತ್ತು ಇತರ ಚಟುವಟಿಕೆಗಳನ್ನು ನಡೆಸಲು ಅನುಮತಿ ನೀಡಿದ್ದಾರೆ ಎಂದು ಸ್ಪಷ್ಟ ಪಡಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ