ಸಂಪುಟ ಪುನಾರಚನೆ ಸುಳಿವು: Farewell speech ನಂತೆ ಸಾಧನೆಗಳ ವಿವರಿಸಿದ ಸಚಿವ; ಮಧು ಬಂಗಾರಪ್ಪ ನಿರ್ಗಮನ?

ನಾಳೆ ನನ್ನ ಇಲಾಖೆ ನನ್ನನ್ನು ಸ್ಮರಿಸಬೇಕು. ಜವಾಬ್ದಾರಿಯನ್ನು ವಹಿಸಿದಾಗ ಅದನ್ನು ಹೇಗೆ ನಿರ್ವಹಿಸಬೇಕೆಂಬುದು ನನಗೆ ತಿಳಿದಿದೆ. ಪಕ್ಷವು ತಾಯಿಯಂತೆ ಮತ್ತು ಪಕ್ಷದಲ್ಲಿರುವ ಪ್ರತಿಯೊಬ್ಬರೂ ಮಕ್ಕಳೇ. ಹಿರಿಯರು ಮತ್ತು ಕಿರಿಯ ಸಹೋದರರು ಇದ್ದಾರೆ.
Madhu Bangarappa
ಸಚಿವ ಮಧು ಬಂಗಾರಪ್ಪ
Updated on

ಶಿವಮೊಗ್ಗ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಶನಿವಾರ ಮಾಡಿದ ಭಾಷಣವು, ವಿದಾಯದ ಭಾಷಣವೆಂಬಂತೆ ಭಾಸವಾಗುವಂತೆ ಮಾಡಿತು.

ಶಿವಮೊಗ್ಗ ಪ್ರೆಸ್ ಟ್ರಸ್ಟ್ ಶನಿವಾರ ಶಿವಮೊಗ್ಗದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಭಾಗವಹಿಸಿದ ಸಚಿವ ಮಧು ಬಂಗಾರಪ್ಪ ಅವರು, ತಮ್ಮ ಸಾಧನೆಗಳನ್ನು ಪಟ್ಟಿ ಮಾಡಿದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ವ್ಯವಸ್ಥೆಯಲ್ಲಿ ತಾವು ಪರಿಚಯಿಸಿದ ಹೊಸ ವಿಚಾರಗಳನ್ನು ವಿವರಿಸಿದರು, ಅವುಗಳನ್ನು "ತೃಪ್ತಿದಾಯಕ"ವಾಗಿವೆ ಎಂದು ಹೇಳಿದರು.

ಭಾಷಣದ ಉದ್ದಕ್ಕೂ ಸಚಿವ ಸ್ಥಾನ ಬಿಡಲು ಸಿದ್ಧರಾಗಿರುವ ವ್ಯಕ್ತಿಯಂತೆ ಕಂಡು ಬಂದರು. ಶಿಕ್ಷಣ ಖಾತೆಯು ತಮಗೆ ಅಪಾರ ತೃಪ್ತಿಯನ್ನು ತಂದಿದೆ. ತಮ್ಮ ಹುದ್ದೆಯ ಬಗ್ಗೆ ಹೆಮ್ಮೆಯಿದೆ ಎಂದು ಹೇಳಿದರು.

ಸವಾಲುಗಳನ್ನು ಸ್ವೀಕರಿಸಿ ತಮ್ಮ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿದೆ. ನನ್ನ ಈ ಸಾಧನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರಣರಾಗಿದ್ದಾರೆ ಎಂದು ತಿಳಿಸಿದರು.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಎರಡು ಪೂರಕ ಪರೀಕ್ಷೆಗಳು ಮತ್ತು ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಸಿಎಸ್‌ಆರ್ ನಿಧಿಯನ್ನು ಸಂಗ್ರಹಿಸುವುದು ಸೇರಿದಂತೆ ತಮ್ಮ ಅಧಿಕಾರಾವಧಿಯಲ್ಲಿ ಜಾರಿಗೆ ತಂದ ಹೊಸ ಕ್ರಮ ಹಾಗೂ ಯೋಜನೆಗಳನ್ನು ಪಟ್ಟಿ ಮಾಡಿದರು, ಇದನ್ನು ಅನೇಕರು ಮೆಚ್ಚಿದ್ದಾರೆ ಎಂದು ಹೇಳಿದರು.

Madhu Bangarappa
ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ: ಸರ್ಕಾರಿ-ಅನುದಾನಿತ ಶಾಲೆಗಳಿಗೆ 18,000 ಶಿಕ್ಷಕರ ನೇಮಕಾತಿಗೆ ಶೀಘ್ರದಲ್ಲೇ ಅಧಿಸೂಚನೆ..!

ಸರ್ಕಾರಿ ಶಾಲೆಗಳಲ್ಲಿ 13,000 ಶಿಕ್ಷಕರ ನೇಮಕಾತಿ ಮತ್ತು ದ್ವಿಭಾಷಾ ಬೋಧನೆಯನ್ನು ಜಾರಿಗೆ ತಂದಿದ್ದಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗ, ರಾಜ್ಯದಲ್ಲಿ 800 ಕೆಪಿಎಸ್ ಶಾಲೆಗಳ ಸ್ಥಾಪನೆಗೆ ಸರ್ಕಾರ ಬೆಂಬಲ ನೀಡುತ್ತಿದೆ ಎಂದು ಹೇಳಿದರು.

ನಾಳೆ ನನ್ನ ಇಲಾಖೆ ನನ್ನನ್ನು ಸ್ಮರಿಸಬೇಕು. ಜವಾಬ್ದಾರಿಯನ್ನು ವಹಿಸಿದಾಗ ಅದನ್ನು ಹೇಗೆ ನಿರ್ವಹಿಸಬೇಕೆಂಬುದು ನನಗೆ ತಿಳಿದಿದೆ. ಪಕ್ಷವು ತಾಯಿಯಂತೆ ಮತ್ತು ಪಕ್ಷದಲ್ಲಿರುವ ಪ್ರತಿಯೊಬ್ಬರೂ ಮಕ್ಕಳೇ. ಹಿರಿಯರು ಮತ್ತು ಕಿರಿಯ ಸಹೋದರರು ಇದ್ದಾರೆ. ಕೆಲವೊಮ್ಮೆ, ಕಿರಿಯರು ದೊಡ್ಡವರಾಗುತ್ತಾರೆ, ಹಿರಿಯರು ಕಿರಿಯರಾಗುತ್ತಾರೆ... ನಮ್ಮ ಪಕ್ಷಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ತಂದೆಗೆ ರಾಜ್ಯಕ್ಕೆ ಸಿಎಂ ಆಗಿ ಸೇವೆ ಸಲ್ಲಿಸುವ ಅವಕಾಶವಿತ್ತು. ಸಿಎಂ, ಡಿಸಿಎಂ, ಕಾಂಗ್ರೆಸ್ ಪಕ್ಷ ಮತ್ತು ರಾಷ್ಟ್ರೀಯ ನಾಯಕರು ನನಗೆ ಪ್ರತಿ ಮನೆಯ ಮಕ್ಕಳಿಗೂ ಸೇವೆ ಸಲ್ಲಿಸುವ ಕೆಲಸವನ್ನು ನೀಡಿದ್ದಾರೆ. ಭವಿಷ್ಯದಲ್ಲಿ, ಪಕ್ಷವು ನನಗೆ ಯಾವುದೇ ಕೆಲಸವನ್ನು ವಹಿಸಿದರೂ, ನಾನು ಅದನ್ನು ನಿರ್ವಹಿಸುತ್ತೇನೆ. ನಿಮ್ಮ ಮಾರ್ಗದರ್ಶನವು ನನ್ನೊಂದಿಗೆ ಶಾಶ್ವತವಾಗಿರಲಿ ಎಂದು ಭಾವುಕರಾಗಿ ನುಡಿದರು.

ಇದೇ ವೇಳೆ ಸಿದ್ದರಾಮಯ್ಯ ಅವರು ಔತಣಕೂಟ ಕುರಿತ ಪ್ರಶ್ನೆಗೆ ಯಾವ ಮಾಹಿತಿಯನ್ನೂ ಬಹಿರಂಗ ಪಡಿಸಿದ ಅವರು, ಇದಕ್ಕೆ ಹೈಕಮಾಂಡ್ ಉತ್ತರ ನೀಡಲಿದೆ ಎಂದು ಹೇಳಿದರು.

ಅಧಿಕಾರದಲ್ಲಿದ್ದಾಗ ಮಾತ್ರವೇ ಮಾತುಕತೆ ನಡೆಸಬೇಕು ಎಂಬುದಲ್ಲ. ಅಧಿಕಾರ ಇಲ್ಲದಿದ್ದರೂ ಸಂಬಂಧ ಮುಂದುವರೆಯಬೇಕು. ನಾನು ಆ ಗೌರವವನ್ನು ನಿರೀಕ್ಷಿಸುತ್ತೇನೆಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com