ಸಾರ್ವಜನಿಕ ಸಾರಿಗೆ ಖಾಸಗೀಕರಣ ಎನ್ನುವುದು 'ಮಾರಕ ಕಲ್ಪನೆ': ಮೋಹನ್ ದಾಸ್ ಪೈ-ತೇಜಸ್ವಿ ಸೂರ್ಯ ವಿರುದ್ಧ ರಾಮಲಿಂಗಾ ರೆಡ್ಡಿ ಕಿಡಿ

ಬಿಎಂಟಿಸಿ ಪ್ರತಿದಿನ ಸುಮಾರು 48 ಲಕ್ಷ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿದೆ ಮತ್ತು ನಗರದ ಜೀವನಾಡಿಯಾಗಿದೆ. ಬಿಎಂಟಿಸಿ ಜೊತೆಗೆ, ನಮ್ಮ ಮೆಟ್ರೋ, ಆಟೋಗಳು ಮತ್ತು ಖಾಸಗಿ ಕ್ಯಾಬ್‌ಗಳು ಬೆಂಗಳೂರಿನ ಅಂದಾಜು 1.44 ಕೋಟಿ ಜನಸಂಖ್ಯೆಗೆ ಸೇವೆ ಸಲ್ಲಿಸುತ್ತಿವೆ.
Minister Ramalinga reddy
ಗೃಹ ಸಚಿವ ರಾಮಲಿಂಗಾ ರೆಡ್ಡಿ
Updated on

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ)ವನ್ನು ಖಾಸಗೀಕರಣಗೊಳಿಸಬೇಕೆನ್ನುವುದು ಅಪಾಯಕಾರಿ ಹಾಗೂ ಮಾರಕ ಕಲ್ಪನೆಯಾಗಿದೆ ಎಂದು ಮೋಹನ್ ದಾಸ್ ಪೈ ಮತ್ತು ತೇಜಸ್ವಿ ಸೂರ್ಯ ವಿರುದ್ಧ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಂಟಿಸಿ ಪ್ರತಿದಿನ ಸುಮಾರು 48 ಲಕ್ಷ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿದೆ ಮತ್ತು ನಗರದ ಜೀವನಾಡಿಯಾಗಿದೆ. ಬಿಎಂಟಿಸಿ ಜೊತೆಗೆ, ನಮ್ಮ ಮೆಟ್ರೋ, ಆಟೋಗಳು ಮತ್ತು ಖಾಸಗಿ ಕ್ಯಾಬ್‌ಗಳು ಬೆಂಗಳೂರಿನ ಅಂದಾಜು 1.44 ಕೋಟಿ ಜನಸಂಖ್ಯೆಗೆ ಸೇವೆ ಸಲ್ಲಿಸುತ್ತಿವೆ, ಸರಿಸುಮಾರು ಮೂರನೇ ಒಂದು ಭಾಗದಷ್ಟು ಜನ ಬಿಎಂಟಿಸಿ ಬಸ್‌ಗಳನ್ನು ಮಾತ್ರ ಅವಲಂಬಿಸಿದ್ದಾರೆ. ಸಾರ್ವಜನಿಕ ಸಾರಿಗೆ ಕಲ್ಯಾಣ ರಾಜ್ಯದ ವಿಶಿಷ್ಟ ಲಕ್ಷಣವಾಗಿದೆ. ಅದನ್ನು ನಿರ್ವಹಿಸುವುದು, ಬಲಪಡಿಸುವುದು ಮತ್ತು ವಿಸ್ತರಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಬಂಡವಾಳ ಕೇಂದ್ರಿತ ಮನಸ್ಥಿತಿ ಬಿಎಂಟಿಸಿ ಸೇವೆಗಳನ್ನು ಹೆಚ್ಚು ಅವಲಂಬಿಸಿರುವ ಬಡವರು, ಕಾರ್ಮಿಕರು ಮತ್ತು ಮಧ್ಯಮ ವರ್ಗದ ಪ್ರಯಾಣಿಕರನ್ನು ಕಡೆಗಣಿಸುವುದನ್ನು ಪ್ರತಿಬಿಂಬಿಸುತ್ತವೆ. ವಿಶ್ವದ ಎಲ್ಲಿಯೇ ಆದರೂ ಸಾರ್ವಜನಿಕ ಸಾರಿಗೆ ಸಂಪೂರ್ಣವಾಗಿ ಲಾಭದ ಉದ್ದೇಶದಿಂದ ನಡೆಸಲ್ಪಡುವುದಿಲ್ಲ.

ಬೆಂಗಳೂರು ಮತ್ತು ಇತರ ನಗರಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಂತಹ ಉಪಕ್ರಮಗಳು ಮಹಿಳೆಯರು ಸ್ವಾವಲಂಬಿಯಾಗುವುದನ್ನು ಹೆಚ್ಚಿಸಿವೆ. ಇದರಿಂದ ಬೆಂಗಳೂರಿನಲ್ಲಿ ಶೇ.23 ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ಶೇ.21 ಒಟ್ಟಾರೆ ರಾಜ್ಯ ಆದಾಯವನ್ನು ಹೆಚ್ಚಿಸಿವೆ ಎಂದು ತಿಳಿಸಿದರು.

Minister Ramalinga reddy
ಬೆಂಗಳೂರಿನಲ್ಲಿ 'ಖಾಸಗಿ ಬಸ್' ಗಳಿಗೆ ಅನುಮತಿ: ಮೋಹನ್ ದಾಸ್ ಪೈ, ತೇಜಸ್ವಿ ಸೂರ್ಯ ಹೇಳಿಕೆ ಅಪಾಯಕಾರಿ; ತಜ್ಞರ ಸಲಹೆ

ಕಳೆದ ಎರಡು ವರ್ಷಗಳಲ್ಲಿ, ರಾಜ್ಯ ಸರ್ಕಾರವು 5,800 ಹೊಸ ಬಸ್‌ಗಳನ್ನು ಸೇರಿಸಿದೆ, 10,000 ಸಿಬ್ಬಂದಿಯನ್ನು ನೇಮಿಸಿಕೊಂಡಿದೆ, ಹೊಸ ಡಿಪೋಗಳನ್ನು ಸ್ಥಾಪಿಸಿದೆ. ಅಪಘಾತ ವಿಮೆ ಮತ್ತು ನಗದು ರಹಿತ ವೈದ್ಯಕೀಯ ಸೌಲಭ್ಯಗಳು ಸೇರಿದಂತೆ ಬಹು ಕಾರ್ಮಿಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ.

ನಗರದ ಸರ್ವತೋಮುಖ ಅಭಿವೃದ್ಧಿಯು ಪರಿಣಾಮಕಾರಿ ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿದೆ. ಹೀಗಾಗಿ ಬಸ್ಸುಗಳು, ಮೆಟ್ರೋ, ಆಟೋ, ಟ್ಯಾಕ್ಸಿ ಮತ್ತು ಉಪನಗರ ರೈಲುಗಳು ಎಲ್ಲವೂ ಅತ್ಯಗತ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕ ಸಾರಿಗೆಯನ್ನು ಸ್ಥಗಿತಗೊಳಿಸುವುದು ಆಘಾತಕಾರಿ, ಅಪಾಯಕಾರಿ ಮತ್ತು ವಿನಾಶಕಾರಿಯಾಗಿದೆ. ಬಿಎಂಟಿಸಿ ಬೇಡ ಎನ್ನುವ ಮೂಲಕ ಸಾರಿಗೆ ಸಂಸ್ಥೆಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಕುಟುಂಬಸ್ಥರನ್ನು ಬೀದಿಪಾಲು ಮಾಡುವ ಮನಸ್ಥಿತಿ ಇದಾಗಿದೆ ಎಂದು ಕಿಡಿಕಾರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com