ನವೀಕರಿಸಬಹುದಾದ ಶಕ್ತಿ ಸಂಪನ್ಮೂಲಗಳಿಗೆ ಸರ್ಕಾರದ ಉತ್ತೇಜನ: ನಿರ್ಮಲಾ ಸೀತಾರಾಮನ್

ಸರ್ಕಾರ ಹಲವು ಹಸಿರು ಯೋಜನೆಗಳನ್ನು (ಗ್ರೀನ್‌ ಬಾಂಡ್‌...) ಜಾರಿಗೊಳಿಸಿದೆ. ಸುಸ್ಥಿರ ಶಕ್ತಿ ಸಂಪನ್ಮೂಲ ನಿಟ್ಟಿನಲ್ಲಿ ಬಹಳಷ್ಟು ಸವಾಲುಗಳು ಇವೆ. ಸರ್ಕಾರ ಮತ್ತು ಖಾಸಗಿ ಎರಡೂ ಕ್ಷೇತ್ರದವರು ಭಾರತವನ್ನು ಸುಸ್ಥಿರ ಹಸಿರು ಮಾದರಿಯಾಗಿಸುವ ಕಡೆಗೆ ಹೆಜ್ಜೆ ಇಡುತ್ತಿವೆ.
Smt Nirmala Sitharaman
interacted with students after inaugurating the dhaRti BioNEST Incubation Centre at IIT in Dharwad
ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಧಾರವಾಡ ಐಐಟಿಯಲ್ಲಿ ಧರ್ತಿ ಬಯೋನೆಸ್ಟ್ ಇಂಕ್ಯೂಬೇಶನ್ ಕೇಂದ್ರವನ್ನು ಅಧಿಕೃತವಾಗಿ ಉದ್ಘಾಟಿಸಿದರು.
Updated on

ಧಾರವಾಡ: ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಧಾರವಾಡದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯಲ್ಲಿ ಸಂಶೋಧನೆ ಮತ್ತು ತಂತ್ರಜ್ಞಾನ ಇನ್‌ಕ್ಯುಬೇಟರ್ (ಧಾರಿ) ಸಹಯೋಗದೊಂದಿಗೆ ನಿರ್ಮಾಣವಾಗಿರುವ ಬಯೋನೆಸ್ಟ್ ಇನ್‌ಕ್ಯುಬೇಷನ್ ಸೆಂಟರ್ (ಬಿಐಸಿ) ಉದ್ಘಾಟಿಸಿದರು.

ಐಐಟಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ, ಸೀತಾರಾಮನ್ ಸರ್ಕಾರವು ಸುಸ್ಥಿರ ಹಸಿರು ಮಾದರಿಗಳ ಮೇಲೆ ಕೇಂದ್ರೀಕರಿಸಿದೆ ಎಂದು ಹೇಳಿದರು. ನೈಸರ್ಗಿಕ ಅನಿಲಗಳ ಬೆಲೆ ಏರಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ‘ನವೀಕರಿಸಬಹುದಾದ ಶಕ್ತಿ ಸಂಪನ್ಮೂಲಗಳಿಗೆ ಸರ್ಕಾರ ಆದ್ಯತೆ ನೀಡಿದೆ.

ಸರ್ಕಾರ ಹಲವು ಹಸಿರು ಯೋಜನೆಗಳನ್ನು (ಗ್ರೀನ್‌ ಬಾಂಡ್‌...) ಜಾರಿಗೊಳಿಸಿದೆ. ಸುಸ್ಥಿರ ಶಕ್ತಿ ಸಂಪನ್ಮೂಲ ನಿಟ್ಟಿನಲ್ಲಿ ಬಹಳಷ್ಟು ಸವಾಲುಗಳು ಇವೆ. ಸರ್ಕಾರ ಮತ್ತು ಖಾಸಗಿ ಎರಡೂ ಕ್ಷೇತ್ರದವರು ಭಾರತವನ್ನು ಸುಸ್ಥಿರ ಹಸಿರು ಮಾದರಿಯಾಗಿಸುವ ಕಡೆಗೆ ಹೆಜ್ಜೆ ಇಡುತ್ತಿವೆ’ ಎಂದು ಹೇಳಿದರು.

ನೈಸರ್ಗಿಕ ಅನಿಲಗಳ ಬೆಲೆ ಏರಿಕೆಯನ್ನು ಉಲ್ಲೇಖಿಸಿ ಹಲವಾರು ದೇಶಗಳು ಕಲ್ಲಿದ್ದಲಿನ ಮೇಲೆ ಹಿಂದೆ ಸರಿಯುತ್ತಿವೆ. ಆದರೂ ಸರ್ಕಾರವು 2047 ರ ವೇಳೆಗೆ ಶೂನ್ಯ ಹೊರಸೂಸುವಿಕೆಯನ್ನು ಸಾಧಿಸಲು ದೃಢನಿಶ್ಚಯ ಹೊಂದಿದೆ ಎಂದು ಹಣಕಾಸು ಸಚಿವ ಹೇಳಿದರು.

Smt Nirmala Sitharaman
interacted with students after inaugurating the dhaRti BioNEST Incubation Centre at IIT in Dharwad
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಬಜೆಟ್ ನಲ್ಲಿ 5 ಸಾವಿರ ಕೋಟಿ ರೂ ಮೀಸಲಿಡಿ: ನಿರ್ಮಲಾ ಸೀತರಾಮನ್ ಗೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಸರ್ಕಾರವು ಸಬ್ಸಿಡಿಗಳನ್ನು ನೀಡುವ ಮೂಲಕ ನವೀಕರಿಸಬಹುದಾದ ಇಂಧನ ಉದ್ಯಮಗಳನ್ನು ಉತ್ತೇಜಿಸುತ್ತಿದೆ. ಗುರಿಗಳನ್ನು ಸಾಧಿಸಲು ಬಜೆಟ್ ನಿಬಂಧನೆ ಮಾತ್ರ ಸಾಕಾಗುವುದಿಲ್ಲ.ಕೇಂದ್ರ ಸರ್ಕಾರ ಸಂಶೋಧನೆ ಮತ್ತು ಅಭಿವೃದ್ಧಿಗೆ ಒತ್ತು ನೀಡಿದೆ.

ಯುವ ಅನ್ವೇಷಣಾಕಾರರು ಆರಂಭಿಕ ಹಂತದಲ್ಲಿ ಲಾಭದ ಕಡೆಗೆ ಗಮನ ನೀಡಬಾರದು. ಉತ್ಪನ್ನವನ್ನು ಪರಿಚಯಿಸಿ ಅದನ್ನು ವಾಣಿಜ್ಯೀಕರಣಗೊಳಿಸುವುದಕ್ಕೆ ಆದ್ಯತೆ ನೀಡಬೇಕು. ಉತ್ಪನ್ನ ವಾಣಿಜ್ಯ ಹಂತ ತಲುಪಿದ ನಂತರ ಲಾಭ ಬರುತ್ತದೆ. ಅನ್ವೇಷಣೆ ನಿರಂತರವಾಗಿರಬೇಕು’ ಎಂದರು.

ಇದಕ್ಕಾಗಿ ಹಸಿರು ಬಾಂಡ್‌ಗಳು ಮತ್ತು ಸಿಎಸ್‌ಆರ್ ನಿಧಿಗಳನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ಹಣಕಾಸು ಸಚಿವ ಹೇಳಿದರು. ದೇಶವು ಫಿನ್-ಟೆಕ್‌ನೊಂದಿಗೆ ಪ್ರಗತಿ ಸಾಧಿಸುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ತಂತ್ರಜ್ಞಾನ ಸಂಸ್ಥೆಗಳು ಕೈಗಾರಿಕೆಗಳೊಂದಿಗೆ ಕೆಲಸ ಮಾಡಬೇಕು ಮತ್ತು ಪದವೀಧರರು ಶೈಕ್ಷಣಿಕ ಮಾನದಂಡಗಳ ಜೊತೆಗೆ ಪ್ರಾಯೋಗಿಕ ಅನುಭವವನ್ನು ಪಡೆಯಬೇಕು ಎಂದು ಹಣಕಾಸು ಸಚಿವ ಹೇಳಿದರು. ಪಠ್ಯಕ್ರಮದಲ್ಲಿ ಬದಲಾವಣೆಯ ಅವಶ್ಯಕತೆಯಿದೆ. ಸಂಸ್ಥೆಗಳು ವಿದ್ಯಾರ್ಥಿಗಳ ಅಗತ್ಯಗಳನ್ನು ಪೂರೈಸಬೇಕು. ಹಲವು ಕೌಶಲ್ಯಗಳಿದ್ದು, ವಿದ್ಯಾರ್ಥಿಗಳು ಅವುಗಳ ಮೇಲೆ ಕೆಲಸ ಮಾಡಬೇಕು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com