
ಬೆಂಗಳೂರು: ನೈಋತ್ಯ ರೈಲ್ವೆಯ (SWR) ಬೆಂಗಳೂರು ವಿಭಾಗವು ದೀಪಾವಳಿ ಮತ್ತು ಛತ್ ಪೂಜಾ ಸಮಯದಲ್ಲಿ ಜನರ ಸಂಚಾರ ದಟ್ಟಣೆಯನ್ನು ಹಾಗೂ ದೀರ್ಘ ವಾರಾಂತ್ಯದ ಜನಸಂದಣಿಯನ್ನು ನಿಭಾಯಿಸಲು ಬೃಹತ್ ಯೋಜನೆಯನ್ನು ರೂಪಿಸಿದೆ.
SWR ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ ವಿಭಾಗಗಳ ಪ್ರಮುಖ ನಿಲ್ದಾಣಗಳಲ್ಲಿ 136 ವಿಶೇಷ ರೈಲುಗಳು (338 ಟ್ರಿಪ್ಗಳು), 540 ಹೆಚ್ಚುವರಿ ಬೋಗಿಗಳು, ವರ್ಧಿತ ಭದ್ರತೆ, ಸಹಾಯ ಕೇಂದ್ರಗಳು, ವೈದ್ಯಕೀಯ ತಂಡಗಳು ಮತ್ತು ಸುಧಾರಿತ ಪ್ರಯಾಣಿಕರ ಮಾರ್ಗದರ್ಶನ ಸೌಲಭ್ಯ ನೀಡುತ್ತಿದೆ.
ರೈಲು ಅವಶ್ಯಕತೆಗಳನ್ನು ಗುರುತಿಸಲು, ಸಕಾಲಿಕ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಪ್ರಯಾಣಿಕರ ಬೇಡಿಕೆಯನ್ನು ಪರಿಣಾಮಕಾರಿಯಾಗಿ ಪೂರೈಸಲು ಸೇವೆಗಳನ್ನು 95 ಕ್ಕೂ ಹೆಚ್ಚು ವಿಶೇಷ ರೈಲುಗಳು ಸಂಚರಿಸಲಿವೆ. ಕಳೆದ ವರ್ಷ 36 ಬಾರಿ ಓಡಾಟ ನಡೆಸಿದ ರೈಲುಗಳಿಗಿಂತ ಎರಡು ಪಟ್ಟು ಹೆಚ್ಚು ಈ ಬಾರಿ ಸಂಚರಿಸಲಿವೆ.
ಬೆಳಗಾವಿ, ಹುಬ್ಬಳ್ಳಿ, ಬೀದರ್, ಕಾರವಾರ, ಮೈಸೂರು ಮತ್ತು ವಿಜಯಪುರ ಸೇರಿದಂತೆ ಕರ್ನಾಟಕದಾದ್ಯಂತ ಎಲ್ಲಾ ದಿಕ್ಕುಗಳಲ್ಲಿ ರೈಲುಗಳ ಸಂಚಾರ ನಿಯೋಜಿಸಲಾಗಿದೆ. ಚೆನ್ನೈ, ಕೊಲ್ಲಂ ಮತ್ತು ತಿರುಚಿರಾಪಳ್ಳಿ ಸೇರಿದಂತೆ ತಮಿಳುನಾಡು ಮತ್ತು ಕೇರಳ ಕಡೆಗೆ ವಾರಾಂತ್ಯದ ಭಾರೀ ಜನದಟ್ಟಣೆಗೆ ಅನುಗುಣವಾಗಿ ಸೇವೆಗಳನ್ನು ಒದಗಿಸಲಾಗುತ್ತದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ದೂರದ ಪ್ರಯಾಣದ ಅಗತ್ಯಗಳನ್ನು ಗುರುತಿಸಿ, ಪಾಟ್ನಾ ಮತ್ತು ದಾನಾಪುರಕ್ಕೆ 20 ರೈಲುಗಳು ಸಂಚರಿಸುತ್ತವೆ. ಗೋಮ್ಟಿನಗರ, ಋಷಿಕೇಶ್, ಹೌರಾ, ಸಂತ್ರಗಚಿ, ತಿನ್ಸುಕಿಯಾ ಮತ್ತು ನಾರಂಗಿಗೆ ಹೆಚ್ಚುವರಿ ಸೇವೆಗಳನ್ನು ನೀಡಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ. ನರಸಾಪುರ, ವಿಶಾಖಪಟ್ಟಣಂ, ಭುವನೇಶ್ವರ ಮತ್ತು ಬಿಲಾಸ್ಪುರಕ್ಕೆ ವಿಶೇಷ ರೈಲುಗಳನ್ನು ಸಹ ಸೂಚಿಸಲಾಗಿದೆ.
ಸುರಕ್ಷಿತ ಮತ್ತು ಸುಗಮ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು, ನೈಋತ್ಯ ರೈಲ್ವೆ 338 ಟ್ರಿಪ್ಗಳನ್ನು ಒಳಗೊಂಡ 136 ವಿಶೇಷ ರೈಲುಗಳು ಸಂಚರಿಸಲಿವೆ. ನಿಯಮಿತ ಸೇವೆಗಳಲ್ಲಿ 540 ಹೆಚ್ಚುವರಿ ಬೋಗಿಗಳನ್ನು ಸೇರಿಸಿದೆ. ಪ್ರಮುಖ ಟರ್ಮಿನಲ್ಗಳಾದ SMVT ಬೆಂಗಳೂರು, KSR ಬೆಂಗಳೂರು, ಯಶವಂತಪುರ ಮತ್ತು ಕೃಷ್ಣರಾಜಪುರಂಗಳಲ್ಲಿ ವರ್ಧಿತ ಭದ್ರತೆ, ಮಾಹಿತಿ ಕೌಂಟರ್ಗಳು, ಕುಡಿಯುವ ನೀರು, ಆಸನ, ಸ್ಪೀಕರ್ ವ್ಯವಸ್ಥೆಗಳು ಮತ್ತು ಟಿವಿ ಪರದೆಗಳ ಮೂಲಕ ರೈಲುಗಳ ಸಂಚಾರದ ವಿಶೇಷ ಹೋಲ್ಡಿಂಗ್ ಪ್ರದೇಶಗಳನ್ನು ರಚಿಸಲಾಗಿದೆ.
Advertisement