ಸೌಜನ್ಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದು ಆಕೆಯ ಮಾವ ವಿಠಲ ಗೌಡ: ಸ್ನೇಹಮಯಿ ಕೃಷ್ಣ ಸ್ಫೋಟಕ ಹೇಳಿಕೆ

ಸೌಜನ್ಯಳ ಪ್ರಕರಣದ ನಿಜವಾದ ಆರೋಪಿಯನ್ನು ಬಂಧಿಸಿ ಶಿಕ್ಷಿಸಬೇಕು. ನನ್ನ ಬಳಿ ಲಭ್ಯವಿರುವ ದಾಖಲೆಗಳು ಮತ್ತು ಪುರಾವೆಗಳು ಸೌಜನ್ಯಳನ್ನು ಆಕೆಯ ಸೋದರ ಮಾವ ವಿಠಲ್ ಗೌಡ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ.
Snehamayi Krishna
ಸ್ನೇಹಮಯಿ ಕೃಷ್ಣ
Updated on

ಬೆಂಗಳೂರು: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸೋಮವಾರ ಹೊಸ ರಾಗ ತೆಗೆದಿದ್ದಾರೆ. ಪ್ರಕರಣದಲ್ಲಿ ಆಕೆಯ ಸೋದರಮಾವ ವಿಠಲ ಗೌಡನೇ ಪ್ರಮುಖ ಆರೋಪಿ ಎಂದು ಆರೋಪಿ ಎಂದಿದ್ದಾರೆ.

2012 ರಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆಯ ಹಿಂದೆ ಸೌಜನ್ಯಳ ಸೋದರ ಮಾವ ವಿಠಲ್ ಗೌಡ ಪ್ರಮುಖ ಆರೋಪಿ. ಹೀಗಾಗಿ ಆತನ ವಿರುದ್ಧ ಮರು ತನಿಖೆ ನಡೆಸುವಂತೆ ಆಗ್ರಹಿಸಿರುವ ಅವರು, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಅವರಿಗೆ ದೂರು ನೀಡಿದ್ದಾರೆ

ಸೋಮವಾರ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷ್ಣ, “ಸೌಜನ್ಯಳ ಪ್ರಕರಣದ ನಿಜವಾದ ಆರೋಪಿಯನ್ನು ಬಂಧಿಸಿ ಶಿಕ್ಷಿಸಬೇಕು. ನನ್ನ ಬಳಿ ಲಭ್ಯವಿರುವ ದಾಖಲೆಗಳು ಮತ್ತು ಪುರಾವೆಗಳು ಸೌಜನ್ಯಳನ್ನು ಆಕೆಯ ಸೋದರ ಮಾವ ವಿಠಲ್ ಗೌಡ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ ಎಂದು ಹೇಳುತ್ತೆವೆ. ಅವನು ಅವಳೊಂದಿಗೆ ಕೆಟ್ಟದಾಗಿ ವರ್ತಿಸುತ್ತಿದ್ದನು. ಅವಳು ಕಿರುಚಿದಾಗ, ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

"ಆಕೆಯನ್ನು ಅಪಹರಿಸಿದ್ದರೆ, ಆಕೆಯ ಚೀಲ ಬೀಳುತ್ತಿತ್ತು, ಆದರೆ ಅದು ಇನ್ನೂ ಆಕೆಯ ಶವ ಪತ್ತೆಯಾದ ಸ್ಥಳದಲ್ಲಿಯೇ ಇತ್ತು. ಆ ದಿನ ಆಕೆಯ ಬಳಿ ಆಹಾರ ಇರಲಿಲ್ಲ ಎಂದು ಆಕೆಯ ಕುಟುಂಬದವರು ಹೇಳುತ್ತಾರೆ, ಆದರೆ ಶವಪರೀಕ್ಷೆಯ ಸಮಯದಲ್ಲಿ ಆಕೆಯ ಹೊಟ್ಟೆಯಲ್ಲಿ ಆಹಾರ ಕಂಡುಬಂದಿದೆ. ಅತ್ಯಾಚಾರ ಮತ್ತು ಕೊಲೆ ಮಾಡುವ ಉದ್ದೇಶ ಹೊಂದಿದ್ದವರು ಸಂತ್ರಸ್ತೆಗೆ ಆಹಾರವನ್ನು ನೀಡುವುದಿಲ್ಲ. ಘಟನೆ ನಡೆದ ದಿನ ಆಕೆ ವಿಠಲ ಗೌಡ ಮನೆಗೆ ಹೋಗಿ ಆಹಾರ ಸೇವಿಸಿದ್ದಾಳೆಂದು ತೋರಿಸುತ್ತವೆ. ಆ ದಿನ ವಿಠಲ ಗೌಡ ತಮ್ಮ ಹೋಟೆಲ್‌ಗೆ ಹೋಗದೆ ರಜೆ ಹಾಕಿ ಮನೆಯಲ್ಲಿಯೇ ಇದ್ದರು.

Snehamayi Krishna
Dharmasthala case: ಬಂಗ್ಲೆಗುಡ್ಡ ಸ್ಥಳಕ್ಕೆ ಸೌಜನ್ಯ ಮಾವ ವಿಠಲಗೌಡನ ಕರೆದೊಯ್ದ SIT..!

ಮನೆಗೆ ಹೋದಾಗ ಆಕೆಯ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿದನು ಮತ್ತು ಕೊಲೆ ಮಾಡಿದನು. ಅವನು ಆಕೆಯ ಶವವನ್ನು ಮರೆಮಾಡಿ ತನ್ನ ಹೋಟೆಲ್‌ಗೆ ಹಿಂತಿರುಗಿದನು. ಆಕೆಯಯ ಪೋಷಕರು ಅವಳನ್ನು ಹುಡುಕಲು ಪ್ರಾರಂಭಿಸಿದಾಗ, ಅವಳು ಮನೆಯ ಕಡೆಗೆ ಹೋಗುವುದನ್ನು ನೋಡಿದ್ದೇನೆ ಎಂದು ಸುಳ್ಳು ಹೇಳಿಕೆಗಳನ್ನು ನೀಡಿದನು, ಎಲ್ಲರೂ ಮನೆಗೆ ಹೋದ ನಂತರ, ಅವನು ಆಕೆಯ ಶವ ಎಸೆದಿದ್ದಾನೆ ಎಂದು ಆರೋಪಿಸಿದ್ದಾರೆ.

ಬೇರೆ ಸ್ಥಳದಲ್ಲಿ ಕೊಲೆಗೈದು, ಬಳಿಕ ಮೃತದೇಹವನ್ನು ಈಗಿರುವ ಸ್ಥಳಕ್ಕೆ ತಂದು ಹಾಕಲಾಗಿದೆ ಎಂದು ಸ್ನೇಹಮಯಿ ಶಂಕೆ ವ್ಯಕ್ತಪಡಿಸಿದ್ದು, ಈ ಕೃತ್ಯವನ್ನು ನೋಡಿದ್ದ ಸಂತೋಷ್ ರಾವ್‌ನನ್ನು ಬೆದರಿಸಿ ಪ್ರಕರಣದಲ್ಲಿ ಸಿಲುಕಿಸಿರಬಹುದು ಅಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಆಕೆಯ ಸಮವಸ್ತ್ರ ಹರಿದು ಶಾಲು ಬಳಸಿ ಕೈಗಳನ್ನು ಕಟ್ಟಿ ಪ್ರೇಮ ಮತ್ತು ಬಾಲಕೃಷ್ಣ ಅವರ ಸಂಖ್ಯೆಗಳನ್ನು ಹೊಂದಿರುವ ಟಿಪ್ಪಣಿಯನ್ನು ಬಿಟ್ಟು ಹೋದನು. ಮೊದಲೇ ಸಂಪೂರ್ಣ ತನಿಖೆ ನಡೆಸಿದ್ದರೆ, ಧರ್ಮಸ್ಥಳದ ವಿರುದ್ಧ ನಡೆದ ಅಪಪ್ರಚಾರವನ್ನು ತಡೆಯಬಹುದಿತ್ತು. ಸ್ಪಷ್ಟವಾಗಿ ಪೊಲೀಸರ ವೈಫಲ್ಯವಿದೆ ಎಂದು ಸ್ನೇಹಮಯಿ ಹೇಳಿದರು, ವಿಠಲ ಗೌಡ ಅವರನ್ನು ನಾರ್ಕೋ ವಿಶ್ಲೇಷಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com