ಸರ್ಕಾರದ ಸವಲತ್ತು ಪಡೆಯಲು 'ಹಿಂದುಳಿದ ವರ್ಗ'ವೆಂಬ ಹಣೆಪಟ್ಟಿ: ಸ್ಥಾನ-ಮಾನ ಕಾಪಾಡಿಕೊಳ್ಳಲು ಆತ್ಮವಂಚನೆ!

ಹಳ್ಳಿಯಲ್ಲಿ ಹೆಂಚಿನ ಮನೆಗಳಲ್ಲಿ ವಾಸಿಸುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ, ಆದರೆ ವಾಸ್ತವವಾಗಿ ಬೆಂಗಳೂರು ಅಥವಾ ಮೈಸೂರಿನಂತಹ ನಗರಗಳಲ್ಲಿ RCC ಮನೆಗಳನ್ನು ಹೊಂದಿದ್ದಾರೆ.
Dwaraknath former chairman of Backward Classes Commission
ದ್ವಾರಕನಾಥ್, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ
Updated on

ಬೆಂಗಳೂರು: ಸರ್ಕಾರವು ಹಿಂದುಳಿದ ಸಮುದಾಯಗಳ ಕಲ್ಯಾಣಕ್ಕಾಗಿ ಶಿಕ್ಷಣ, ವಸತಿ, ವಿದ್ಯಾರ್ಥಿವೇತನ ಮತ್ತು ಆರ್ಥಿಕ ನೆರವು ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತದೆ, ಈ ನಡುವೆ ಕರ್ನಾಟಕದ ಹಿಂದುಳಿದ ವರ್ಗಗಳ ಆಯೋಗವು ನಡೆಸಿದ ಸಾಮಾಜಿಕ-ಶೈಕ್ಷಣಿಕ ಜಾತಿ ಗಣತಿಯು ಟೀಕೆಗೆ ಗುರಿಯಾಗಿದೆ.

ಏಕೆಂದರೆ ರಾಜ್ಯಾದ್ಯಂತ ಹಲವು ಸಮುದಾಯಗಳು ತಮ್ಮ 'ಹಿಂದುಳಿದ' ಸ್ಥಾನಮಾನವನ್ನು ಕಾಪಾಡಿಕೊಳ್ಳಲು ಮತ್ತು ಸರ್ಕಾರಿ ಪ್ರಯೋಜನಗಳನ್ನು ಪಡೆಯಲು ಸಮೀಕ್ಷೆಗೆ ಬಂದವರ ಬಳಿ ಉತ್ತರಿಸಲು ಸಮುದಾಯದ ಸದಸ್ಯರಿಗೆ ತರಬೇತಿ ನೀಡುತ್ತಿವೆ ಎಂದು ವರದಿಯಾಗಿದೆ.

ಸಾಮಾಜಿಕ-ಆರ್ಥಿಕ ವಾಸ್ತವಗಳನ್ನು ನಿರ್ಣಯಿಸಲು ಉದ್ದೇಶಿಸಲಾದ ವಿವಾದಾತ್ಮಕ ಸಮೀಕ್ಷೆಯು ಅಣಕವಾಗುವ ಅಪಾಯವಿದೆ ಎಂದು 2008 ರಲ್ಲಿ ಸಮೀಕ್ಷೆಯ ಪ್ರಶ್ನಾವಳಿ ರಚಿಸಿದ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ದ್ವಾರಕನಾಥ್ ಕಳವಳ ವ್ಯಕ್ತಪಡಿಸಿದ್ದಾರೆ.

ಸಮುದಾಯಗಳು ಅತಿಯಾಗಿ ಜಾಗೃತವಾಗಿವೆ. ಅವರು ತಮ್ಮ ಸಮುದಾಯದ ಸದಸ್ಯರಿಗೆ ತಾವು ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದಿದ್ದೇವೆ ಎಂಬುದನ್ನು ಸಾಬೀತುಪಡಿಸಿಕೊಳ್ಳಲು ಉತ್ತರ ನೀಡಲು ತರಬೇತಿ ನೀಡುತ್ತಿದ್ದಾರೆ. ಅನೇಕರು ನನ್ನನ್ನು ಸಂಪರ್ಕಿಸಿ, ಪ್ರಯೋಜನಗಳನ್ನು ಅನಿರ್ದಿಷ್ಟವಾಗಿ ಪಡೆದುಕೊಳ್ಳಲು, ಸಮೀಕ್ಷೆ ವೇಳೆ ಕುಶಲತೆಯಿಂದ ನಿರ್ವಹಿಸುವುದು ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಸಮುದಾಯಗಳು ಅತಿಯಾಗಿ ಜಾಗೃತವಾಗಿವೆ. ಅವರು ತಮ್ಮ ಸಮುದಾಯದ ಸದಸ್ಯರಿಗೆ ತಾವು ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದಿದ್ದೇವೆ ಎಂಬುದನ್ನು ಸಾಬೀತುಪಡಿಸಿಕೊಳ್ಳಲು ಉತ್ತರ ನೀಡಲು ತರಬೇತಿ ನೀಡುತ್ತಿದ್ದಾರೆ. ಅನೇಕರು ನನ್ನನ್ನು ಸಂಪರ್ಕಿಸಿ, ಪ್ರಯೋಜನಗಳನ್ನು ಅನಿರ್ದಿಷ್ಟವಾಗಿ ಪಡೆದುಕೊಳ್ಳಲು, ಸಮೀಕ್ಷೆ ವೇಳೆ ಕುಶಲತೆಯಿಂದ ನಿರ್ವಹಿಸುವುದು ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ.

ದ್ವಾರಕನಾಥ್, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ

ನಿಜವಾದ ಸಾಮಾಜಿಕ-ಆರ್ಥಿಕ ಹಿಂದುಳಿದಿರುವಿಕೆಯನ್ನು ಅಳೆಯುವ ಮೂಲ ಉದ್ದೇಶ ವ್ಯವಸ್ಥೆಯನ್ನು ಮೋಸಗೊಳಿಸಲು ಲೆಕ್ಕಾಚಾರದ ಪ್ರಯತ್ನಗಳಿಂದ ಬುಡಮೇಲು ಮಾಡಲಾಗುತ್ತಿದೆ. ತಮ್ಮ ಸಮುದಾಯದ ಸದಸ್ಯರಿಗೆ ತರಬೇತಿ ನೀಡುವ ಡಜನ್ಗಟ್ಟಲೆ ಕೇಂದ್ರಗಳನ್ನು ಪ್ರವಾಸ ಮಾಡಿದ ನಂತರ ತಮಗೆ ವಂಚನೆಯ ಬಗ್ಗೆ ತಿಳಿಯಿತು ಎಂದು ಹೇಳಿದ್ದಾರೆ.

ಹಿಂದುಳಿದ ಸಮುದಾಯದ ಕೆಲವರು ಹಳ್ಳಿಯಲ್ಲಿ ಹೆಂಚಿನ ಮನೆಗಳಲ್ಲಿ ವಾಸಿಸುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ, ಆದರೆ ವಾಸ್ತವವಾಗಿ ಬೆಂಗಳೂರು ಅಥವಾ ಮೈಸೂರಿನಂತಹ ನಗರಗಳಲ್ಲಿ RCC ಮನೆಗಳನ್ನು ಹೊಂದಿದ್ದಾರೆ ಎಂದು ಬಹಿರಂಗ ಪಡಿಸಿದ್ದಾರೆ.

ಆರು ವರ್ಷದೊಳಗಿನ ಒಂದು ಅಥವಾ ಎರಡು ಮಕ್ಕಳಿದ್ದಾರೆ ಎಂದು ಹೇಳಿಕೊಳ್ಳುವುದು ಮತ್ತೊಂದು ಪ್ರಮುಖ ತಂತ್ರವಾಗಿದೆ. ಆರ್ಥಿಕ ಪ್ರಗತಿಯ ಪ್ರಮುಖ ಸೂಚಕಗಳಾದ ಕಾರು ಹೊಂದಿರುವುದು ಮತ್ತು ಉದ್ಯೋಗಗಳ ಮಾಲೀಕತ್ವವನ್ನು ನಿರಾಕರಿಸುವುದು ಇದರಲ್ಲಿ ಸೇರಿವೆ. ಮೀಸಲಾತಿ ಮತ್ತು ಕಲ್ಯಾಣ ಯೋಜನೆಗಳಿಗೆ ಅರ್ಹತೆ ಪಡೆದುಕೊಳ್ಳಲು ಈ ಸುಳ್ಳುಗಳನ್ನು ಹೆಣೆಯಲಾಗುತ್ತಿದೆ.

ಹೀಗಾಗಿ ನಿಖರವಾದ ಅಂಕಿಅಂಶ ಸಂಗ್ರಹಿಸುವ ಕಾರ್ಯದಲ್ಲಿ ಮಗ್ನರಾಗಿರುವ ಗಣತಿದಾರರು ಇಕ್ಕಟ್ಟಿನಲ್ಲಿ ಸಿಲುಕುತ್ತಾರೆ ಎಂದು ಮೂಲಗಳು ತಿಳಿಸಿವೆ. ನಾಗರಿಕರು ನೀಡುವ ಮಾಹಿತಿಗಳಲ್ಲಿ ವ್ಯತ್ಯಾಸಗಳು ಸ್ಪಷ್ಟವಾಗಿದ್ದರೂ ಸಹ ಪ್ರತಿಕ್ರಿಯೆ ನೀಡುವವರು ಏನು ಹೇಳುತ್ತಾರೆಯೋ ಅದನ್ನೇ ದಾಖಲಿಸಬೇಕಾದ ಅನಿವಾರ್ಯತೆ ಎದುರಾಗಿದೆ.

Dwaraknath former chairman of Backward Classes Commission
ಜಾತಿ ಜನಗಣತಿ: ಧಾರ್ಮಿಕ ಗುರುತಿನ ವಿಚಾರದಲ್ಲಿ ಒಡೆದ ಮನೆಯಾದ ಲಿಂಗಾಯತ ಸಮುದಾಯ!

ಸಮುದಾಯವು ಸತ್ಯವಂತವಾಗಿರಬೇಕು, ತಮ್ಮ ಸ್ಥಾನಮಾನಗಳ ಬಗ್ಗೆ ಸುಳ್ಳು ಹೇಳಬಾರದು ಎಂದು ನಾನು ಆಗ್ರಹಿಸಿದ್ದೇನೆ, ಆದರೆ ಹಿಂದುಳಿದ ಸ್ಥಾನಮಾನಕ್ಕೆ ಸಂಬಂಧಿಸಿದ ಪ್ರಯೋಜನಗಳು ತಮಗೆ ಸಿಗುವುದಿಲ್ಲ ಎಂದು ಹೆದರಿ ಅನೇಕರು ಸತ್ಯ ಹೇಳಲು ಹಿಂಜರಿಯುತ್ತಿದ್ದಾರೆ ಎಂದು ಒಂದು ಪ್ರಮುಖ ಸಮುದಾಯದ ನಾಯಕರೊಬ್ಬರು ತಿಳಿಸಿದ್ದಾರೆ.

ಇದು ಪ್ರಾಮಾಣಿಕ ವರದಿ ಮಾಡುವುದಕ್ಕಿಂತ ಅಲ್ಪಾವಧಿಯ ಲಾಭಗಳಿಗೆ ಆದ್ಯತೆ ನೀಡುವ ಸಾಮೂಹಿಕ ಪ್ರಯತ್ನವಾಗಿದೆ. ಜನಗಣತಿಯು ನೀತಿ ನಿರೂಪಕರನ್ನು ದಾರಿ ತಪ್ಪಿಸುವ ವಿಕೃತ ಡೇಟಾವನ್ನು ಉತ್ಪಾದಿಸುವ ಅಪಾಯವನ್ನುಂಟುಮಾಡುತ್ತದೆ ಎಂದು ಹೇಳಿದ್ದಾರೆ. ಪರಿಶೀಲನಾ ಕಾರ್ಯವಿಧಾನಗಳಿಲ್ಲದೆ, ಈ ವ್ಯಾಯಾಮವು ಉನ್ನತಿಯ ಬದಲು ಅವಲಂಬನೆಯ ಚಕ್ರವನ್ನು ಸ್ಥಾಪಿಸಬಹುದು. ಜಾತಿ ಜನಗಣತಿಯು ಸತ್ಯವನ್ನು ಬಹಿರಂಗಪಡಿಸುವ ಬದಲು, ಸುಳ್ಳಿನ ಜಾಲವಾಗಿ ಬದಲಾಗುವ ಸಾಧ್ಯತೆಯಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com