ಯುವಜನರಲ್ಲಿ ಓದಿನ ಹುಚ್ಚು ಹಿಡಿಸಿದ್ದ ಸಾಹಿತಿ ದಿಗ್ಗಜ SL Bhyrappa: ಹಲವು ಕೃತಿಗಳು ದಾಖಲೆ!

ಆರು ದಶಕಗಳಿಗೂ ಹೆಚ್ಚು ಕಾಲದ ಭೈರಪ್ಪ ಅವರ ಸಾಹಿತ್ಯ ಕೃತಿಗಳು ಕನ್ನಡದಲ್ಲಿ ಹೆಚ್ಚು ಮಾರಾಟವಾದ ಕೃತಿಗಳಲ್ಲಿ ಸೇರಿವೆ.
S L Bhyrappa
ಎಸ್ ಎಲ್ ಭೈರಪ್ಪ
Updated on

ಬೆಂಗಳೂರು: ಎಸ್.ಎಲ್. ಭೈರಪ್ಪ ಎಂದೇ ಖ್ಯಾತರಾದ ಸಂತೇಶಿವರ ಲಿಂಗಯ್ಯ ಭೈರಪ್ಪ ಅವರು ನಿನ್ನೆ ಸೆಪ್ಟೆಂಬರ್ 24, ಬುಧವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗುವುದರೊಂದಿಗೆ ಕನ್ನಡ ಸಾಹಿತ್ಯಲೋಕದ ಒಂದು ಮಹತ್ವದ ಅಧ್ಯಾಯ ಕೊನೆಗೊಂಡಿತು.. ಅವರಿಗೆ 94 ವರ್ಷ ವಯಸ್ಸಾಗಿ ವಯೋಸಹಜ ಕಾಯಿಲೆಯಿಂದ ಅಸ್ತಂಗತರಾಗಿದ್ದು, ಅವರ ಪತ್ನಿ ಸರಸ್ವತಿ ಮತ್ತು ಇಬ್ಬರು ಪುತ್ರರಾದ ಎಸ್.ಬಿ. ಉದಯಶಂಕರ್ ಮತ್ತು ಎಸ್.ಬಿ. ರವಿಶಂಕರ್ ಅವರನ್ನು ಅಗಲಿದ್ದಾರೆ.

ಬೆಂಗಳೂರಿನ ರಾಜರಾಜೇಶ್ವರಿ ನಗರದ ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಧಿಕಾರಿಗಳು, ನಿನ್ನೆ ಮಧ್ಯಾಹ್ನ 2.38ರ ಹೊತ್ತಿಗೆ ಭೈರಪ್ಪ ಅವರಿಗೆ ಹೃದಯಾಘಾತವಾಗಿದೆ ಎಂದು ತಿಳಿಸಿದ್ದಾರೆ. ಅವರನ್ನು ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಯಿತು, ಅಲ್ಲಿ ಅವರು ಕೊನೆಯುಸಿರೆಳೆದರು ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ವಯೋಸಹಜ ಅನಾರೋಗ್ಯದಿಂದಾಗಿ ಅವರನ್ನು ಮೂರು ದಿನಗಳ ಹಿಂದಷ್ಟೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇಂದು ರವೀಂದ್ರ ಕಲಾಕ್ಷೇತ್ರದಲ್ಲಿ ಗಣ್ಯರು, ಸಾಹಿತ್ಯಾಭಿಮಾನಿಗಳಿಂದ ಅಂತಿಮ ದರ್ಶನ

ಭೈರಪ್ಪ ಅವರ ಪಾರ್ಥೀವ ಶರೀರವನ್ನು ಇಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನದವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದ್ದು, ಸಾಹಿತ್ಯ, ಸಿನಿಮಾ ಕ್ಷೇತ್ರದ ಗಣ್ಯರು, ರಾಜಕೀಯ ನಾಯಕರು, ಸಾಹಿತ್ಯಾಭಿಮಾನಿಗಳು ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ನಂತರ ಅವರ ಪಾರ್ಥಿವ ಶರೀರವನ್ನು ಮೈಸೂರಿಗೆ ಕೊಂಡೊಯ್ಯಲಾಗುವುದು, ಅಲ್ಲಿ ಸಾರ್ವಜನಿಕ ದರ್ಶನಕ್ಕೆ ಇಟ್ಟು ನಾಳೆ ಶುಕ್ರವಾರ ಪೂರ್ಣ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.

ಹುಟ್ಟು, ಬೆಳವಣಿಗೆ

ಜುಲೈ 26, 1934 ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಸಂತೇಶಿವರ ಗ್ರಾಮದಲ್ಲಿ ಜನಿಸಿದ ಭೈರಪ್ಪ (ಭೈರಪ್ಪನವರು ತಮ್ಮ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿರುವಂತೆ) ಬ್ಯುಬೋನಿಕ್ ಪ್ಲೇಗ್‌ನಿಂದಾಗಿ ತನ್ನ ತಾಯಿ ಮತ್ತು ಒಡಹುಟ್ಟಿದವರನ್ನು ಚಿಕ್ಕ ವಯಸ್ಸಿನಲ್ಲಿಯೇ ಕಳೆದುಕೊಂಡರು. ಮನೆಯಲ್ಲಿ ಕಡು ಬಡತನ, ಜೀವನಕ್ಕೆ ಸ್ವಂತ ಆದಾಯ ಬೇಕು, ಶಿಕ್ಷಣಕ್ಕೆ ಹಣ ಒದಗಿಸಲು ರೈಲ್ವೆ ಪೋರ್ಟರ್ ಸೇರಿದಂತೆ ಹಲವು ಕಡೆ ಉದ್ಯೋಗಗಳನ್ನು ಮಾಡಿದ್ದಾರೆ.

ದೆಹಲಿ ಸೇರಿದಂತೆ ಭಾರತದಾದ್ಯಂತ ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ಕೆಲಸ ಮಾಡಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (NCERT) ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

S L Bhyrappa
SL Bhyrappa: ಕಾದಂಬರಿ ಬರೆಯುವ ಮುನ್ನ ತಯಾರಿ ಹೇಗಿತ್ತು?: ಭೈರಪ್ಪನವರ ಸಂಶೋಧನೆ, ಅಧ್ಯಯನ, ಸ್ಥಳಗಳಿಗೆ ಭೇಟಿ...

ಕನ್ನಡದಲ್ಲಿ ಹೆಚ್ಚು ಮಾರಾಟವಾದ ಕೃತಿಗಳು, 500ಕ್ಕೂ ಹೆಚ್ಚು ಮರುಮುದ್ರಣ

ಆರು ದಶಕಗಳಿಗೂ ಹೆಚ್ಚು ಕಾಲದ ಭೈರಪ್ಪ ಅವರ ಸಾಹಿತ್ಯ ಕೃತಿಗಳು ಕನ್ನಡದಲ್ಲಿ ಹೆಚ್ಚು ಮಾರಾಟವಾದ ಕೃತಿಗಳಲ್ಲಿ ಸೇರಿವೆ. ಭಾರತದ ಎಲ್ಲಾ ನಿಗದಿತ ಭಾಷೆಗಳು ಮತ್ತು ವಿದೇಶಿ ಭಾಷೆಗಳಿಗೆ ಅನುವಾದಿಸಲಾದ ಏಕೈಕ ಬರಹಗಾರ ಅವರು. 1958 ರಲ್ಲಿ ಅವರ ಮೊದಲ ಭೀಮಕಾಯದಿಂದ ಪ್ರಾರಂಭಿಸಿ, 25 ಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿದ್ದಾರೆ, ಇವೆಲ್ಲವೂ 500 ಕ್ಕೂ ಹೆಚ್ಚು ಮರುಮುದ್ರಣಗಳಿಗೆ ಸಾಕ್ಷಿಯಾಗಿವೆ, ದಾಖಲೆ ಕಂಡಿವೆ.

ಯುವಜನತೆಯಲ್ಲಿ ಓದಿನ ಹುಚ್ಚು ಹಿಡಿಸಿದ ಕಾದಂಬರಿಕಾರ

ಭೈರಪ್ಪ ಅವರ ಕೆಲವು ಜನಪ್ರಿಯ ಕೃತಿಗಳೆಂದರೆ ಪರ್ವ, ಆವರಣ, ಗೃಹಭಂಗ, ತಂತು, ನಾಯಿ ನೆರಳು, ವಂಶವೃಕ್ಷ ಮತ್ತು ಇತರವುಗಳು. ಅವರ ಕೃತಿಗಳು ಆಕರ್ಷಕ ನಿರೂಪಣಾ ಶಕ್ತಿಯನ್ನು ಹೊಂದಿದ್ದವು, ಇದು ಯುವಜನತೆಯಲ್ಲಿ ಓದುವ ಹವ್ಯಾಸವನ್ನು ಹುಟ್ಟುಹಾಕಿತು, ಮಾನವ ಪ್ರಚೋದನೆಗಳು, ಭಾರತದಲ್ಲಿನ ಧರ್ಮಗಳು ಮತ್ತು ಸಂಸ್ಕೃತಿಯ ಸಂಕೀರ್ಣತೆಗಳು, ತತ್ವಶಾಸ್ತ್ರ, ಇತಿಹಾಸ, ಸಾಮಾಜಿಕ ರಚನೆ, ಸಂಗೀತ, ಪುರಾಣ, ಮನೋವಿಜ್ಞಾನ ಮತ್ತು ನೈತಿಕತೆಯ ವಿಷಯಗಳ ಸುತ್ತ ಭೈರಪ್ಪನವರ ಕೃತಿಗಳು ಸುತ್ತುತ್ತದೆ. ಅವರ ಕಾದಂಬರಿಗಳಲ್ಲಿ ಕೆಲವನ್ನು ನಿರ್ದೇಶಕರು ಚಲನಚಿತ್ರ ತಯಾರಿಸಿದ್ದಾರೆ.

S L Bhyrappa
ಇಂಗ್ಲೀಷ್ ಸೇರಿ ಭಾರತದ 14 ಭಾಷೆಗಳಿಗೆ ಅನುವಾದಗೊಂಡ SL Bhyrappa ಕಾದಂಬರಿಗಳಿವು!

ಹಲವು ಪ್ರಶಸ್ತಿಗಳ ಸರದಾರ

ಭೈರಪ್ಪ ಅವರು ಅನೇಕ ಪ್ರಶಸ್ತಿಗಳನ್ನು ಗೆದ್ದ ಕೀರ್ತಿಗೂ ಪಾತ್ರರಾಗಿದ್ದಾರೆ. ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಳಿಗಾಗಿ ಭೈರಪ್ಪ 2010 ರಲ್ಲಿ ಸರಸ್ವತಿ ಸಮ್ಮಾನ್, 2015 ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 2016 ರಲ್ಲಿ ಪದ್ಮಶ್ರೀ ಮತ್ತು 2023 ರಲ್ಲಿ ಪದ್ಮಭೂಷಣ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಕೆಲವು ವಿವಾದಗಳು, ಬಲಪಂಥೀಯ ಬರಹಗಾರ ಹಣೆಪಟ್ಟಿ

ಭೈರಪ್ಪ ಅವರು ವಿವಾದಗಳಿಂದ ಹೊರತಾಗಿರಲಿಲ್ಲ. ಟಿಪ್ಪು ಸುಲ್ತಾನನಿಗೆ ಸಂಬಂಧಿಸಿದಂತೆ ಮತ್ತೊಬ್ಬ ಸಾಹಿತ್ಯ ದಿಗ್ಗಜ ಗಿರೀಶ್ ಕಾರ್ನಾಡ್ ಅವರೊಂದಿಗಿನ ಸಾರ್ವಜನಿಕ ವಿವಾದ, ಸಂಸ್ಕೃತವನ್ನು ಎಲ್ಲಾ ಭಾಷೆಗಳ ತಾಯಿ ಎಂದು ಕರೆದಿದ್ದು, ಹಿಂದೂ ದೇವಾಲಯಗಳಿಗೆ ಮಹಿಳೆಯರ ಪ್ರವೇಶವನ್ನು ವಿರೋಧಿಸಿದ್ದು ಅತ್ಯಂತ ಪ್ರಮುಖವಾದವುಗಳು. ಬರಹಗಾರರು ಮತ್ತು ಕಾರ್ಯಕರ್ತರ ಒಂದು ವರ್ಗವು ಅವರನ್ನು ಬಲಪಂಥೀಯ ಬರಹಗಾರ ಎಂದು ಕರೆದಿದೆ.

S L Bhyrappa
Watch | SL Bhyrappa ನಿಧನಕ್ಕೆ ಗಣ್ಯರ ಸಂತಾಪ

ತಮ್ಮ ಲೋಕಕ್ಕೆ ಒದುಗರನ್ನು ಕರೆದೊಯ್ದ ಬರಹಗಾರ

ಲೇಖಕ, ಸಾಹಿತಿ ಎಸ್.ಎಲ್. ಭೈರಪ್ಪ ಅವರು ವ್ಯಾಪಕವಾದ ಸಂಶೋಧಕರಾಗಿದ್ದರು, ಅವರು ತಮ್ಮ ಕಾದಂಬರಿಗಳಿಗಾಗಿ ವೈಯಕ್ತಿಕವಾಗಿ ಸ್ಥಳಗಳಿಗೆ ಭೇಟಿ ನೀಡುತ್ತಿದ್ದರು. ಅವರು ತಮ್ಮ ಕಾದಂಬರಿಗಳ ವಿಷಯಗಳಿಗೆ ಸಂಬಂಧಿಸಿದ ಪ್ರದೇಶಗಳಿಗೆ ಪ್ರವಾಸ ಹೋಗುತ್ತಿದ್ದರು, ಇದು ಅವರ ಕೃತಿಗಳಿಗೆ ನಿಜವಾದ ಹಿನ್ನೆಲೆಯನ್ನು ನೀಡಲು ಸಹಾಯ ಮಾಡಿತು.

ಅವರ ಹೆಚ್ಚಿನ ಮುಖ್ಯ ಕಾದಂಬರಿಗಳು ಸಂಶೋಧನೆ ಆಧಾರಿತವಾಗಿವೆ ಎಂದು ಬರಹಗಾರರೇ ಒಪ್ಪಿಕೊಂಡಿದ್ದರು. ಅವರ ಭೇಟಿಗಳ ಸಮಯದಲ್ಲಿ, ಸ್ಥಳೀಯರೊಂದಿಗೆ ಸಂವಹನ ನಡೆಸುತ್ತಿದ್ದರು. ಸ್ಥಳ, ಅದರ ಇತಿಹಾಸ ಮತ್ತು ಇತರ ವಿವರಗಳನ್ನು ಸ್ಥಳೀಯರ ದೃಷ್ಟಿಕೋನದಿಂದ ತಿಳಿದುಕೊಳ್ಳಲು ಬಯಸಿದ್ದರು. ವ್ಯಾಪಕ ಪ್ರಯಾಣ ಮತ್ತು ಸಂಶೋಧನೆಯೊಂದಿಗೆ, ಅವರ ಉತ್ಸಾಹಿ ಓದುಗರು ಭೈರಪ್ಪ ಅವರು ತಮ್ಮ ಕಾದಂಬರಿಗಳಲ್ಲಿ ಸೃಷ್ಟಿಸಿದ ಜಗತ್ತಿಗೆ ಅವರನ್ನು ಕರೆದೊಯ್ಯಲು ಸಾಧ್ಯವಾಯಿತು ಎನ್ನಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com