ಆಯುಧ ಪೂಜೆ: ಸ್ವಚ್ಛತಾ ಕಾರ್ಯಗಳಲ್ಲಿ ಕಾವೇರಿ ನೀರನ್ನು ಮಿತವಾಗಿ ಬಳಸಿ: BWSSB ಮನವಿ

ಕುಡಿಯುವ ನೀರಿನ ಮೂಲಗಳು ಸೀಮಿತವಾಗಿರುವುದರಿಂದ ಹಬ್ಬದ ಸಂಭ್ರಮವನ್ನು ಜವಾಬ್ದಾರಿಯಿಂದ ಆಚರಿಸಬೇಕು, ನೀರಿನ ಸಂರಕ್ಷಣೆಯ ಮನೋಭಾವ ಬೆಳೆಸಿಕೊಳ್ಳಬೇಕು.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ಆಯುಧ ಪೂಜೆ ಹಬ್ಬದ ಸಂದರ್ಭದಲ್ಲಿ ಸ್ವಚ್ಛತಾ ಕಾರ್ಯಗಳಿಗೆ ಕಾವೇರಿ ನೀರನ್ನು ಮಿತವಾಗಿ ಮತ್ತು ಜವಾಬ್ದಾರಿಯಿಂದ ಬಳಸವಂತೆ ಸಾರ್ವಜನಿಕರಿಗೆ ಬೆಂಗಳೂರು ನೀರಾವರಿ ಮತ್ತು ಒಳಚರಂಡಿ ಮಂಡಳಿ ಸೋಮವಾರ ಮನವಿ ಮಾಡಿದೆ.

ಈ ಸಂಬಂಧ ಬಿಡಬ್ಲ್ಯೂಎಸ್ಎಸ್'ಬಿ ಪ್ರಕಟಣೆ ಹೊರಡಿಸಿದ್ದು, ಆಯುಧ ಪೂಜೆ ಹಬ್ಬದ ಸಂದರ್ಭದಲ್ಲಿ ಸ್ವಚ್ಛತಾ ಕಾರ್ಯಗಳಿಗೆ ಕಾವೇರಿ ನೀರನ್ನು ಮಿತವಾಗಿ ಮತ್ತು ಜವಾಬ್ದಾರಿಯಿಂದ ಬಳಸವಂತೆ ಹಾಗೂ ಅಗತ್ಯವಿಲ್ಲದ ವ್ಯರ್ಥವನ್ನು ತಪ್ಪಿಸುವಂತೆ ಮನವಿ ಮಾಡಿದೆ.

ಆಯುಧ ಪೂಜೆಯ ಸಂದರ್ಭದಲ್ಲಿ ಮನೆಮನೆಗಳಲ್ಲಿ ಮತ್ತು ಅಂಗಡಿಗಳಲ್ಲಿ ಹಲವಾರು ಸ್ವಚ್ಛತಾ ಚಟುವಟಿಕೆಗಳು ನಡೆಯುತ್ತವೆ. ನೀರನ್ನು ಬಳಕೆ ಮಾಡುವುದರಲ್ಲಿ ತಪ್ಪಿಲ್ಲ, ಆದರೆ ಅದು ಮಿತವಾಗಿಯೂ ಹೊಣೆಗಾರಿಕೆಯಿಂದಲೂ ಇರಬೇಕು. ಕಾವೇರಿ ನೀರು ಪವಿತ್ರವೂ ಅಮೂಲ್ಯವೂ ಆಗಿದ್ದು, ಅದನ್ನು ಸರಿಯಾದ ಉದ್ದೇಶಕ್ಕೆ ಮಾತ್ರ ಬಳಸಬೇಕು. ಅನಗತ್ಯ ವ್ಯರ್ಥವನ್ನು ತಡೆಯಬೇಕು.

ಕುಡಿಯುವ ನೀರಿನ ಮೂಲಗಳು ಸೀಮಿತವಾಗಿರುವುದರಿಂದ ಹಬ್ಬದ ಸಂಭ್ರಮವನ್ನು ಜವಾಬ್ದಾರಿಯಿಂದ ಆಚರಿಸಬೇಕು, ನೀರಿನ ಸಂರಕ್ಷಣೆಯ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದೆ.

File photo
ನಗರದಲ್ಲಿ 3 ದಿನ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ..!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com