

ಮಡಿಕೇರಿ: ನಾಲ್ಕು ದಿನಗಳ ನಂತರ ಕೊಡಗಿನ ತಡಿಯಾಂಡಮೋಲ್ನಲ್ಲಿ ಚಾರಣಕ್ಕೆ ತೆರಳಿದ್ದ ಕೇರಳಂ ಮೂಲದ ಮಹಿಳೆ ಶರಣ್ಯಾಳನ್ನು ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿ ಪತ್ತೆ ಹಚ್ಚಲಾಯಿತು. ಇನ್ನು ಈ ಘಟನೆ ಕುರಿತಂತೆ ಜಿಲ್ಲೆಯಾದ್ಯಂತ ಹಲವು ರೀತಿಯ ಚರ್ಚೆಗಳು ಶುರುವಾಗಿವೆ. ಅನೇಕರು ಈ ಪ್ರಕರಣದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾರೆ. ನಾಲ್ಕು ದಿನಗಳ ಕಾಲ ಕೇವಲ ನೀರಿನಿಂದ ಬದುಕುಳಿಯುವುದು ಹೇಗೆ ಸಾಧ್ಯ. ಇದನ್ನು ‘ಪ್ರದರ್ಶಿತ ನಾಟಕ’ ಎಂದು ಕರೆದಿದ್ದಾರೆ. ಆದಾಗ್ಯೂ, ನಾಲ್ಕು ದಿನಗಳ ದಾರಿ ಕಾಣದೇ ಕಾಡಿನಲ್ಲಿ ಏಕಾಂಗಿಯಾಗಿ ಕಳೆದಿದ್ದ ಶರಣ್ಯಾ ಬರೀ ನೀರನ್ನು ಕುಡಿದುಕೊಂಡು ಬದುಕಿದ್ದಳು. ಅನ್ನ, ಆಹಾರವಿಲ್ಲದಿದ್ದರೂ ನೀರಿನಿಂದ ಬದುಕಬಹುದು ಮತ್ತು ತಾಜಾವಾಗಿ ಕಾಣಲು ಸಾಧ್ಯ ಎಂದು ಕೆಲ ತಜ್ಞರು ಹೇಳಿದ್ದಾರೆ.
ಸರ್ಕಾರಿ ಜಿಲ್ಲಾ ಆಸ್ಪತ್ರೆಯ ನಿವೃತ್ತ ವೈದ್ಯ ಡಾ. ಸೂರ್ಯಕುಮಾರ್ ಈ ವಿಷಯದ ಬಗ್ಗೆ ಸಂಶೋಧನೆ ನಡೆಸಿ TNIE ಜೊತೆ ಹಲವಾರು ಸೂಕ್ಷ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ. 36 ವರ್ಷದ ವಯಸ್ಕ ವ್ಯಕ್ತಿಯೊಬ್ಬರು ಆಹಾರವಿಲ್ಲದೆ ಮೂರರಿಂದ ನಾಲ್ಕು ದಿನಗಳವರೆಗೆ ಸುಲಭವಾಗಿ ಬದುಕಬಹುದು ಎಂದು ವಿವರಿಸಿದರು. ದೇಹವು ಆರಂಭದಲ್ಲಿ ಮೊದಲ 24 ಗಂಟೆಗಳ ಕಾಲ ಗ್ಲೈಕೊಜೆನ್ ಸಂಗ್ರಹವನ್ನು ಬಳಸುತ್ತದೆ. ನಂತರ ಕೊಬ್ಬಿನ ಚಯಾಪಚಯ ಕ್ರಿಯೆಗೆ (ಕೀಟೋಸಿಸ್) ಬದಲಾಗುತ್ತದೆ. ಈ ಚಯಾಪಚಯ ಬದಲಾವಣೆಯು ಸ್ನಾಯುಗಳನ್ನು ಸ್ವಲ್ಪ ಮಟ್ಟಿಗೆ ಸಂರಕ್ಷಿಸುತ್ತದೆ. ಅಲ್ಪಾವಧಿಯಲ್ಲಿ ಶಕ್ತಿಯ ಮಟ್ಟವನ್ನು ಸಮಂಜಸವಾಗಿ ಸ್ಥಿರವಾಗಿರಿಸುತ್ತದೆ. ಆದ್ದರಿಂದ, ನಾಲ್ಕು ದಿನಗಳವರೆಗೆ ಕೇವಲ ಹರಿಯುವ ನೀರಿನಿಂದ ಬದುಕುಳಿಯುವುದು ಸಂಪೂರ್ಣವಾಗಿ ಸಾಧ್ಯ. ವಿಶೇಷವಾಗಿ ದೈಹಿಕವಾಗಿ ಸದೃಢ ವ್ಯಕ್ತಿಗಳು ಎಂದು ಹೇಳಿದರು.
ಇದಲ್ಲದೆ, ರಕ್ಷಿಸಲ್ಪಟ್ಟ ಮಹಿಳಾ ಚಾರಣಿ ಯಾಕೆ ಬಳಲಿದಂತೆ ಕಾಣುತ್ತಿರಲಿಲ್ಲ ಎಂಬ ವಿಷಯದ ಕುರಿತು ಪ್ರತಿಕ್ರಿಯಿಸಿದ ಅವರು, ವಾಸ್ತವದಲ್ಲಿ ಅವಳು ನಿದ್ರಿಸದೇ ಇರಬಹುದು. ಆದರೆ ತೀವ್ರ ನಿದ್ರಾಹೀನತೆಯನ್ನು ತಡೆಗಟ್ಟಲು ದೇಹವು ಇನ್ನೂ ಸೂಕ್ಷ್ಮ ನಿದ್ರಾವಸ್ತೆಗೆ ತಲುಪುತ್ತದೆ ಎಂದು ವಿವರಿಸಿದರು. ದಾರಿ ತಪ್ಪಿದ ನಂತರ ಕಡಿಮೆ ಚಟುವಟಿಕೆಯು ಆರಂಭಿಕ ಪ್ಯಾನಿಕ್ ಪರಿಸ್ಥಿತಿಗೆ ಕಾರಣವಾಗಬಹುದು. ನಂತರ ಅದು ಶಕ್ತಿ ಸಂರಕ್ಷಣಾ ಕ್ರಮಕ್ಕೆ ಬದಲಾಯಿಸಿರಬಹುದು ಎಂದು ವಿವರಿಸಿದರು. ಮಹಿಳೆ ನೀರಿನ ಮೂಲದ ಪಕ್ಕದಲ್ಲೇ ಇದ್ದಾಗ ಅಲ್ಲಿ ಓಡಾಟ ಕಡಿಮೆ ಇರುತ್ತದೆ. ಇದು ಶಕ್ತಿಯ ವೆಚ್ಚದಲ್ಲಿ ಇಳಿಕೆಗೆ ಕಾರಣವಾಗುತ್ತದೆ. ಆದ ಆಯಾಸದ ಲಕ್ಷಣಗಳು ಕಡಿಮೆ ಗೋಚರಿಸುತ್ತವೆ. ನೀರಿನಲ್ಲಿ ಮುಳುಗುವುದು ಬೆವರು ಮತ್ತು ನಿರ್ಜಲೀಕರಣವನ್ನು ಕಡಿಮೆ ಮಾಡುತ್ತದೆ. ವ್ಯಕ್ತಿಯನ್ನು ಎಚ್ಚರವಾಗಿರಿಸುತ್ತದೆ ಮತ್ತು ಆಯಾಸವನ್ನು ತಾತ್ಕಾಲಿಕವಾಗಿ ನಿಗ್ರಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಇಂತಹ ಪರಿಸ್ಥಿತಿಯಲ್ಲಿ ಕೆಲವು ವ್ಯಕ್ತಿಗಳು ಬದುಕುಳಿಯಬೇಕೆಂಬ ಅಚಲ ಮನಸ್ಥಿತಿ ಬರುತ್ತಾರೆ. ಆಗ ಶಾಂತವಾಗಿರಲು ಪ್ರಯತ್ನಿಸುತ್ತಾರೆ. ಅಂತಹ ಸಂದರ್ಭಗಳಲ್ಲಿ ಆತಂಕಗೊಳ್ಳುವುದನ್ನು ತಪ್ಪಿಸುತ್ತಾರೆ ಎಂದು ಡಾ. ಸೂರ್ಯಕುಮಾರ್ ಹೇಳಿದರು. ಒಟ್ಟಾರೆಯಾಗಿ, ಶರಣ್ಯ ಅವರ ಪ್ರಕರಣದಲ್ಲಿ ವೈದ್ಯಕೀಯವಾಗಿ ಏನೂ ಅಸಾಧ್ಯವಲ್ಲ ಎಂದು ಅವರು ಹೇಳಿದರು.
Advertisement