ಯುವ ರಾಜಕಾರಣಿಗಳಿಗೆ ಶಿಕ್ಷಣ ನೀಡಲು ಸರ್ಕಾರದಿಂದ ರಾಜಕೀಯ ಕಾಲೇಜು ಸ್ಥಾಪನೆಗೆ ಯೋಜನೆ: ಬಸವರಾಜ ಹೊರಟ್ಟಿ

ಇಂದಿನ ಅನೇಕ ಯುವ ರಾಜಕಾರಣಿಗಳಿಗೆ ರಾಮಕೃಷ್ಣ ಹೆಗಡೆ, ಕೆ.ಹೆಚ್. ಪಾಟೀಲ್ ಮತ್ತು ಬಿ. ಬಸವಲಿಂಗಪ್ಪ ಅವರಂತಹ ನಾಯಕರ ಬಗ್ಗೆ ಅರಿವು ಇಲ್ಲ. ಅವರಿಗೆ ಶಿಕ್ಷಣ ನೀಡುವ ಅಗತ್ಯವಿದೆ. ಹೊಸದಾಗಿ ಆಯ್ಕೆಯಾದ ಶಾಸಕರಿಗೆ ತರಬೇತಿ ನೀಡಬೇಕು. ಎಷ್ಟು ಜನ ಪುಸ್ತಕಗಳನ್ನು ಓದುತ್ತಾರೆ ಎಂದು ಕೇಳಿದರು.
Basavaraja Horatti
ಬಸವರಾಜ ಹೊರಟ್ಟಿ
Updated on

ಬೆಂಗಳೂರು: ರಾಜ್ಯದ ರಾಜಕೀಯ ಇತಿಹಾಸ, ಮಹತ್ವದ ಶಾಸನ ಸಭೆಗಳ ಚರ್ಚೆಗಳು ಮತ್ತು ಮಾಜಿ ಮುಖ್ಯಮಂತ್ರಿಗಳು, ಸ್ಪೀಕರ್‌ಗಳು ಹಾಗೂ ಸಚಿವರ ಸಾಧನೆಗಳ ಬಗ್ಗೆ ಇಂದಿನ ಯುವ ರಾಜಕಾರಣಿಗಳಿಗೆ ತಿಳುವಳಿಕೆ ನೀಡಲು ಸರ್ಕಾರವು ರಾಜಕೀಯ ಕಾಲೇಜು ಆರಂಭಿಸುವ ಯೋಜನೆ ರೂಪಿಸಿದೆ.

ವಿಧಾನ ಪರಿಷತ್ ಅಧ್ಯಕ್ಷ ಬಸವರಾಜ ಹೊರಟ್ಟಿ ಅವರು ನಿನ್ನೆ ಮಂಗಳವಾರ ವಿಧಾನಸೌಧದಲ್ಲಿ ನಡೆದ ಮಾಜಿ ಸಚಿವ ಬಿ. ಬಸವಲಿಂಗಪ್ಪ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈ ವಿಷಯ ತಿಳಿಸಿದರು.

ಇಂದಿನ ಅನೇಕ ಯುವ ರಾಜಕಾರಣಿಗಳಿಗೆ ರಾಮಕೃಷ್ಣ ಹೆಗಡೆ, ಕೆ.ಹೆಚ್. ಪಾಟೀಲ್ ಮತ್ತು ಬಿ. ಬಸವಲಿಂಗಪ್ಪ ಅವರಂತಹ ನಾಯಕರ ಬಗ್ಗೆ ಅರಿವು ಇಲ್ಲ. ಅವರಿಗೆ ಶಿಕ್ಷಣ ನೀಡುವ ಅಗತ್ಯವಿದೆ. ಹೊಸದಾಗಿ ಆಯ್ಕೆಯಾದ ಶಾಸಕರಿಗೆ ತರಬೇತಿ ನೀಡಬೇಕು. ಎಷ್ಟು ಜನ ಪುಸ್ತಕಗಳನ್ನು ಓದುತ್ತಾರೆ ಎಂದು ಕೇಳಿದರು.

Basavaraja Horatti
ಪತ್ರಕರ್ತರ ತರಬೇತಿ ಕಾಲೇಜು ತೆರೆಯಲು 1ಎಕರೆ ಭೂಮಿ; ರಾಜಕಾರಣಿಗಳು ತಪ್ಪು ಮಾಡಿದಾಗ ತಿದ್ದಿ, ಭವಿಷ್ಯವನ್ನೇ ಮುಗಿಸಬೇಡಿ: ಡಿ.ಕೆ ಶಿವಕುಮಾರ್

ಹಿಂದಿನ ರಾಜಕಾರಣಿಗಳು ಮತ್ತು ಇಂದಿನ ರಾಜಕಾರಣಿಗಳ ನಡುವೆ ಬಹಳ ವ್ಯತ್ಯಾಸ ಇದೆ. ಪ್ರಸ್ತಾವಿತ ಕಾಲೇಜು ಮಹಾನ್ ನಾಯಕರ ಬಗ್ಗೆ ತಿಳುವಳಿಕೆ ನೀಡಲು ಸಹಾಯ ಮಾಡಬಹುದು ಎಂದು ಅಭಿಪ್ರಾಯಪಟ್ಟರು.

ಬಸವಲಿಂಗಪ್ಪ ಅವರ ಜೀವನ ಮತ್ತು ಕೆಲಸಗಳನ್ನು ಉಲ್ಲೇಖಿಸಿದ ಹೊರಟ್ಟಿ, 1970ರ ದಶಕದಲ್ಲಿ ದೇವರಾಜ್ ಅರಸು ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದಾಗ ನೀಡಿದ್ದ ವಿವಾದಾತ್ಮಕ “ಬೂಸಾ” (ಮೇವು) ಹೇಳಿಕೆ ಸಾಮಾಜಿಕ ಚರ್ಚೆಗೆ ಕಾರಣವಾಗಿ ಅಸಮಾನತೆಯನ್ನು ಪ್ರಶ್ನಿಸಲು ಜನರನ್ನು ಪ್ರೇರೇಪಿಸಿತು ಎಂದು ಹೇಳಿದರು.

ದೇವರಾಜ ಅರಸು ಅವರು ಕೇವಲ ರಾಜಕಾರಣಿಯಷ್ಟೇ ಅಲ್ಲ, ದಲಿತ ಚಿಂತನೆಗೆ ದಾರಿ ತೋರಿದ ಬುದ್ಧಿಜೀವಿ. ಅವರಿಗೆ ಯಾವ ಇಲಾಖೆಯನ್ನೇ ನೀಡಿದರೂ ಅದನ್ನು ಆಳವಾಗಿ ಅಧ್ಯಯನ ಮಾಡಿ ಸದನದಲ್ಲಿ ಮಾತನಾಡುತ್ತಿದ್ದರು. ತಮ್ಮ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರಗಳನ್ನು ನೀಡುತ್ತಿದ್ದರು ಎಂದು ಸ್ಮರಿಸಿದರು.

ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಅವರು ಮುಂದಿನ ಶತಮಾನೋತ್ಸವ ಕಾರ್ಯಕ್ರಮವನ್ನು ಧಾರವಾಡದಲ್ಲಿ ನಡೆಸುವಂತೆ ಆಯೋಜಕರಿಗೆ ಮನವಿ ಮಾಡಿದರು. ಬಿ. ಬಸವಲಿಂಗಪ್ಪ ಜನ್ಮ ಶತಮಾನೋತ್ಸವ ಸಮಿತಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯವು ಈ ಕಾರ್ಯಕ್ರಮವನ್ನು ಸಂಯುಕ್ತವಾಗಿ ಆಯೋಜಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com