'ನನಗೆ ದುಡ್ಡಿನ ಅವಶ್ಯಕತೆಯಿಲ್ಲ.., ಮೂರು ತಲೆಮಾರಿಗೆ ಆಗುವಷ್ಟು ಇದೆ, ಈ ರಾಜ್ಯಕ್ಕೆ ಕೊಡುಗೆ ನೀಡಬೇಕು, ಇತಿಹಾಸ ನಿರ್ಮಿಸಬೇಕೆಂಬುದೇ ನನ್ನ ಆಸೆ': ಡಿ ಕೆ ಶಿವಕುಮಾರ್

ನಿನ್ನೆ ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಅವರು, ನನಗೆ ದುಡ್ಡಿನ ಅವಶ್ಯಕತೆ ಇಲ್ಲ, ನನ್ನ ತಂದೆ-ತಾಯಿ ಮಾಡಿಟ್ಟಿದ್ದು, ನಾನು ಸಂಪಾದನೆ ಮಾಡಿರುವ ಹಣವೇ ಎರಡು-ಮೂರು ತಲೆಮಾರಿಗೆ ಆಗುವಷ್ಟು ಇದೆ. ಈ ರಾಜ್ಯದ ಜನತೆಗೆ ಏನಾದರೂ ಒಳ್ಳೆಯದನ್ನು ಮಾಡಬೇಕೆಂಬ ಆಸೆಯಿದೆ ಎಂದರು.
D K Shivakumar
ಡಿ ಕೆ ಶಿವಕುಮಾರ್
Updated on

ಬೆಂಗಳೂರು: ನನಗೆ ದುಡ್ಡಿನ ಅವಶ್ಯಕತೆಯಿಲ್ಲ, ಆದರೆ ಈ ರಾಜ್ಯಕ್ಕೆ ಏನಾದರೂ ಒಳ್ಳೆಯದನ್ನು ಮಾಡಬೇಕೆಂಬ ಆಸೆಯಿದೆ, ಅದಕ್ಕೆ ನನಗೆ ನಿಮ್ಮೆಲ್ಲರ ಸಹಕಾರ ಬೇಕು ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ನಿನ್ನೆ ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಅವರು, ನನಗೆ ದುಡ್ಡಿನ ಅವಶ್ಯಕತೆ ಇಲ್ಲ, ನನ್ನ ತಂದೆ-ತಾಯಿ ಮಾಡಿಟ್ಟಿದ್ದು, ನಾನು ಸಂಪಾದನೆ ಮಾಡಿರುವ ಹಣವೇ ಎರಡು-ಮೂರು ತಲೆಮಾರಿಗೆ ಆಗುವಷ್ಟು ಇದೆ. ನನಗೆ ಈ ರಾಜ್ಯದಲ್ಲಿ ಇತಿಹಾಸ ನಿರ್ಮಿಸುವ ಆಸೆಯಿದೆ, ಈ ರಾಜ್ಯದ ಜನತೆಗೆ ಏನಾದರೂ ಒಳ್ಳೆಯದನ್ನು ಮಾಡಬೇಕೆಂಬ ಆಸೆಯಿದೆ ಎಂದರು.

D K Shivakumar
PM Modi's I-Day speech: 'ನಮ್ಮ ಕನಸು, ಸಂಕಲ್ಪಗಳು ದೊಡ್ಡದಾಗಿರಬೇಕು; 2047ರ ವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರ ಮಾಡಿಯೇ ತೀರುತ್ತೇವೆ: ಪ್ರಧಾನಿ ಮೋದಿ-Video

ನನಗೆ ಮುಖ್ಯಮಂತ್ರಿಯಾಗಿ ಆಡಳಿತದಲ್ಲಿ ಮುಂದುವರಿಯಲು ದೇವರು ಎಷ್ಟು ದಿನ ಅನುಗ್ರಹಿಸುತ್ತಾರೋ ಗೊತ್ತಿಲ್ಲ, ಆದರೆ ಅಷ್ಟರೊಳಗೆ ಈ ರಾಜ್ಯಕ್ಕೆ ಏನಾದರೊಂದು ಕೊಡುಗೆಯನ್ನು ನೀಡಬೇಕೆಂದು ಆಸೆಯಿದೆ. ಆದರೆ ಅದು ನನ್ನೊಬ್ಬನಿಂದ ಮಾತ್ರ ಸಾಧ್ಯವಿಲ್ಲ.

ನನಗೆ ಈ ಸೇನೆ ಮುಖ್ಯ. ನಿಮ್ಮೆಲ್ಲರ ಸಹಕಾರ ಬೇಕು, ಮುಂದಿನ 25 ವರ್ಷಕ್ಕೆ ಈ ರಾಜ್ಯದ ನೀರಾವರಿಯನ್ನು ಯಾವ ರೀತಿ ಅಭಿವೃದ್ಧಿಪಡಿಸಬೇಕು, ಅದಕ್ಕೆ ಹಣ ಯಾವ ರೀತಿ ತರಬೇಕು, ಯಾವ ಸೋರಿಕೆ ಮಾಡಬೇಕು, ಪರಿಶುದ್ಧ ಆಡಳಿತ ಹೇಗೆ ತರಬೇಕು, ಭ್ರಷ್ಟಾಚಾರವನ್ನು ಹೇಗೆ ನಿಯಂತ್ರಿಸಬೇಕು ಎಂದು ಸಲಹೆ ನೀಡಿ, ನಾನು ನಿಮಗೆ ಸಹಕಾರ ನೀಡಿ ಕೆಲಸ ಮಾಡಲು ಸಿದ್ಧನಿದ್ದೇನೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com