ಬೆಂಗಳೂರು: ವೇಶ್ಯಾವಾಟಿಕೆ ಮಾಡುವಂತೆ ಸೊಸೆಗೆ ಪತಿಯ ಪೋಷಕರ ಕಿರುಕುಳ; ನೊಂದ ಮಹಿಳೆ ಆತ್ಮಹತ್ಯೆ

ಅತ್ತೆ ಅರುಣಾಬಾಯಿ ತನ್ನ ಮಗಳಿಗೆ ವೇಶ್ಯಾವಾಟಿಕೆ ಮಾಡುವಂತೆ ಮಾನಸಿಕ ಕಿರುಕುಳ ನೀಡುತ್ತಿದ್ದಳು ಎಂದು ವಿಜಯ್‌ ಕುಮಾರ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
Anjanabai Shekhar Patil
ಮೃತ ಮಹಿಳೆ ಅಂಜನಾ ಬಾಯಿ ಶೇಖರ್ ಪಾಟೀಲ್
Updated on

ಬೀದರ್‌: ವೇಶ್ಯಾವಾಟಿಕೆ ನಡೆಸುವಂತೆ ಗಂಡನ ಮನೆಯವರ ಮಾನಸಿಕ ಕಿರುಕುಳಕ್ಕೆ ಬೇಸತ್ತ ಮಹಿಳೆ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ್ ಜಿಲ್ಲೆಯ ಬಸವಕವಲ್ಯಾಣ ನಗರದ ಭಾಲ್ಕಿಯಲ್ಲಿ ನಡೆದಿದೆ.

ಅಂಜನಾಬಾಯಿ ಪಾಟೀಲ್ (22) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿಯಾಗಿದ್ದು ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದು ಮೃತಪಟ್ಟಿದ್ದಾರೆ. ಮೃತಳ ಗಂಡ ಶೇಖರ್, ಅತ್ತೆ ಅರುಣಾಬಾಯಿ, ಮಾವ ಚಂದ್ರಕಾಂತ ಅವರ ಕಿರುಕುಳದಿಂದ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಂದೆ ವಿಜಯ್‌ ಕುಮಾರ್‌ ಬಸವಕಲ್ಯಾಣ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಅತ್ತೆ ಅರುಣಾಬಾಯಿ ತನ್ನ ಮಗಳಿಗೆ ವೇಶ್ಯಾವಾಟಿಕೆ ಮಾಡುವಂತೆ ಮಾನಸಿಕ ಕಿರುಕುಳ ನೀಡುತ್ತಿದ್ದಳು ಎಂದು ವಿಜಯ್‌ ಕುಮಾರ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

3 ವರ್ಷಗಳ ಹಿಂದೆ ಅಂಜನಾಬಾಯಿ ಮತ್ತು ಶೇಖರ್ ಮಧ್ಯೆ ವಿವಾಹ ನಡೆದಿತ್ತು. ಸ್ಥಳೀಯ ಪೊಲೀಸರು ಈಗ ಶೇಖರ್ ಪಾಟೀಲ್ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದು ತನಿಖೆ ಮುಂದುವರಿಸಿದ್ದಾರೆ.

Anjanabai Shekhar Patil
ಮಂಡ್ಯ: ಮದುವೆ ಮನೆಯಲ್ಲೀಗ ಶೋಕ; ನೆರೆಮನೆಯವರ ಕಿರುಕುಳಕ್ಕೆ ಬೇಸತ್ತು ತಾಯಿ, ಮಗಳು ಆತ್ಮಹತ್ಯೆ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com