ಹಾವೇರಿಯಲ್ಲಿ ಫೆ.14ಕ್ಕೆ ಸಾಧನಾ ಸಮಾವೇಶ, ಒಂದು ಲಕ್ಷ ಮಂದಿಗೆ ಹಕ್ಕುಪತ್ರ ವಿತರಣೆ: ಕೃಷ್ಣ ಭೈರೇಗೌಡ

ಹಕ್ಕುಪತ್ರ ಕೇವಲ ಕಾಗದವಲ್ಲ. ಇದು ಇ-ಸ್ವತ್ತು ನೀಡಿದ ಗಣಕೀಕೃತ ದಾಖಲೆ. ನಕಲು ಮಾಡಲಾಗದ ಹಕ್ಕುಪತ್ರಗಳನ್ನು ನಾವು ನೀಡುತ್ತೇವೆ ಎಂದರು.
Minister Krishna Byregowda
ಸಚಿವ ಕೃಷ್ಣ ಭೈರೇಗೌಡ
Updated on

ಬೆಂಗಳೂರು: ಕಾಂಗ್ರೆಸ್ ಸರ್ಕಾರದ 1,000 ದಿನಗಳ ಆಡಳಿತವನ್ನು ಗುರುತಿಸಲು ಫೆಬ್ರವರಿ 14 ರಂದು ಹಾವೇರಿಯಲ್ಲಿ ನಡೆಯುವ ಸಮಾವೇಶದಲ್ಲಿ ಒಂದು ಲಕ್ಷ ಜನರಿಗೆ ಹಕ್ಕುಪತ್ರ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷ್ಣ ಬೈರೇಗೌಡ, ಹಕ್ಕುಪತ್ರ ಕೇವಲ ಕಾಗದವಲ್ಲ. ಇದು ಇ-ಸ್ವತ್ತು ನೀಡಿದ ಗಣಕೀಕೃತ ದಾಖಲೆ. ನಕಲು ಮಾಡಲಾಗದ ಹಕ್ಕುಪತ್ರಗಳನ್ನು ನಾವು ನೀಡುತ್ತೇವೆ ಎಂದರು.

ಇದಕ್ಕೂ ಮೊದಲು ಅವರು ಸಕ್ಕರೆ ಸಚಿವ ಶಿವಾನಂದ್ ಪಾಟೀಲ್ ಮತ್ತು ಶಾಸಕ ಶ್ರೀನಿವಾಸ್ ಮಾನೆ ಅವರು ಫಲಾನುಭವಿಗಳೊಂದಿಗೆ ಮುಂಬರುವ ಸಮಾವೇಶದ ಕುರಿತು ಚರ್ಚಿಸಿದರು. ನಮ್ಮ ಸರ್ಕಾರ ಶೇಕಡಾ 100ರಷ್ಟು ಭೂ ಖಾತರಿಯನ್ನು ನೀಡುತ್ತಿದೆ. ಹಕ್ಕುಪತ್ರಗಳ ಜೊತೆಗೆ, ಅದನ್ನು ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಯಿಸುತ್ತಿದ್ದೇವೆ. ದಾಖಲೆಗಳಿಲ್ಲದೆ ಹಳ್ಳಿಗಳಲ್ಲಿ ವಾಸಿಸುವವರಿಗೆ ನಾವು ಹಕ್ಕುಪತ್ರಗಳನ್ನು ನೀಡುತ್ತಿದ್ದೇವೆ ಎಂದರು.

Minister Krishna Byregowda
ಜನವರಿ 24 ರಂದು ಹಾಸನದಲ್ಲಿ 'ಜೆಡಿಎಸ್' ಬೃಹತ್ ಸಮಾವೇಶ: ಸುಮಾರು 2 ಲಕ್ಷಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆ!

‘ದರ್ಕಾಸ್ಟ್’ ಮತ್ತು ‘ಬಗರ್ ಹುಕುಂ’ ಅಡಿಯಲ್ಲಿ ಮಂಜೂರಾದ ಭೂಮಿಗೆ ಹಕ್ಕುಪತ್ರಗಳಿಲ್ಲ. ಸಂಕಷ್ಟದಲ್ಲಿದ್ದವರಿಗೆ ನಾವು ಭರವಸೆ ನೀಡಿದ್ದೇವೆ. ಇದು ನಮ್ಮ ಸರ್ಕಾರದ ಸಾಧನೆ ಎಂದರು.

ಭೂ ಮಾಲೀಕತ್ವದ ಬಗ್ಗೆ ಸರ್ಕಾರಕ್ಕೆ ಸ್ಪಷ್ಟವಾದ ಕಲ್ಪನೆ ಇತ್ತು. ರಾಜ್ಯದಲ್ಲಿ 49 ಲಕ್ಷ ಆಸ್ತಿಗಳನ್ನು ಮೃತ ವ್ಯಕ್ತಿಗಳ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಆ ಭೂಮಿಯನ್ನು ಸಂಬಂಧಪಟ್ಟ ವ್ಯಕ್ತಿಗಳ ಹೆಸರಿನಲ್ಲಿ ನೋಂದಾಯಿಸಲು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಜನರು ನ್ಯಾಯಾಲಯ, ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಸರ್ಕಾರವೇ ಹಕ್ಕು ಪತ್ರಗಳನ್ನು ವಿತರಿಸುತ್ತದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com