ಸುಬ್ರಮಣ್ಯಪುರ ಕೆರೆಯ ಕಾಲುವೆ ಅತಿಕ್ರಮಣ ಕುರಿತು ಮರು ತಪಾಸಣೆ ಮಾಡಿ: GBA ಗೆ ಹೈಕೋರ್ಟ್ ಆದೇಶ

ಅರ್ಜಿದಾರರು ಪರ್ಯಾಯ ಮಾರ್ಗ ನೀಡದಿದ್ದರೆ, ತಜ್ಞರ ಸಮಿತಿ ವರದಿಯಂತೆ ಕಾಲುವೆಗಳನ್ನು ಮರುಸ್ಥಾಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಸುಬ್ರಮಣ್ಯಪುರ ಕೆರೆಯ ಕಾಲುವೆ ಅತಿಕ್ರಮಣ ಕುರಿತು ಮರು ತಪಾಸಣೆ ಮಾಡಿ: GBA ಗೆ ಹೈಕೋರ್ಟ್ ಆದೇಶ
Updated on

ಬೆಂಗಳೂರು: ಮಂತ್ರಿ ಟ್ರ್ಯಾಂಕ್ವಿಲ್ ಅಪಾರ್ಟ್‌ಮೆಂಟ್ಸ್ ಓನರ್ಸ್ ಅಸೋಸಿಯೇಷನ್, ರಾಯಲ್ ಪಾಲ್ಮ್ಸ್ ನಿವಾಸಿಗಳ ಕಲ್ಯಾಣ ಸಂಘ ಮತ್ತು ಇನ್ನೂ ಕೆಲವರು ಸಲ್ಲಿಸಿದ್ದ ಅರ್ಜಿಗಳನ್ನು ತಳ್ಳಿಹಾಕಿದ ಹೈಕೋರ್ಟ್, ಗ್ರೇಟರ್ ಬೆಂಗಳೂರು ಅಥಾರಿಟಿ (GBA)ಗೆ ಮಳೆನೀರಿನ ಕಾಲುವೆಗಳ (SWD) ಮರುಪರಿಶೀಲನೆ ನಡೆಸಿ, ಅರ್ಜಿದಾರರು ಪರ್ಯಾಯ ಮಾರ್ಗವನ್ನು ಸೂಚಿಸಿದಲ್ಲಿ ಸುಬ್ರಮಣ್ಯಪುರ ಕೆರೆಗೆ ನೀರು ಮುಕ್ತವಾಗಿ ಹರಿಯುವಂತೆ ಅವುಗಳ ದಿಕ್ಕು ಬದಲಿಸುವ ಕುರಿತು ಮರುಪರಿಶೀಲನೆ ಮಾಡಲು ನಿರ್ದೇಶಿಸಿದೆ.

ಅರ್ಜಿದಾರರು ಪರ್ಯಾಯ ಮಾರ್ಗ ನೀಡದಿದ್ದರೆ, ತಜ್ಞರ ಸಮಿತಿ ವರದಿಯಂತೆ ಕಾಲುವೆಗಳನ್ನು ಮರುಸ್ಥಾಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಸುಬ್ರಮಣ್ಯಪುರ ಕೆರೆ, ಗುಬ್ಬಲಾಲ ಗ್ರಾಮವು ಸುಮಾರು 1 ಚ.ಕಿ.ಮೀ. ವಿಸ್ತೀರ್ಣದ ಕ್ಯಾಚ್ಮೆಂಟ್ ಪ್ರದೇಶ ಹೊಂದಿರುವುದರಿಂದ, ಸ್ಥಳೀಯರ ಹಿತದೃಷ್ಟಿಯಿಂದ ಈ ಕ್ರಮ ಅಗತ್ಯವೆಂದು ಹೇಳಿದೆ.

ಮಂತ್ರಿ ಟ್ರ್ಯಾಂಕ್ವಿಲ್ ಅಪಾರ್ಟ್‌ಮೆಂಟ್ಸ್ ಮತ್ತು ಮಂತ್ರಿ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ 2014ರಲ್ಲಿ ಅರ್ಜಿ ಸಲ್ಲಿಸಿ, 2014ರ ಜುಲೈ 30ರ ನೋಟಿಸ್‌ನ್ನು ಪ್ರಶ್ನಿಸಿ, ಬೆಂಗಳೂರು ದಕ್ಷಿಣ ತಾಲ್ಲೂಕಿನ ಗುಬ್ಬಲಾಲ ಗ್ರಾಮದಲ್ಲಿ ಮಂತ್ರಿ ಟ್ರ್ಯಾಂಕ್ವಿಲ್ ನಿವಾಸ ಸಂಕೀರ್ಣದ ಮೇಲೆ ಜಿಬಿಎ ಹಸ್ತಕ್ಷೇಪ ಮಾಡಬಾರದು, ಯಾವುದೇ ಭಾಗವನ್ನು ಧ್ವಂಸಗೊಳಿಸಬಾರದು ಎಂದು ಮನವಿ ಮಾಡಿದ್ದರು.

ಸುಬ್ರಮಣ್ಯಪುರ ಕೆರೆಯ ಕಾಲುವೆ ಅತಿಕ್ರಮಣ ಕುರಿತು ಮರು ತಪಾಸಣೆ ಮಾಡಿ: GBA ಗೆ ಹೈಕೋರ್ಟ್ ಆದೇಶ
ಸಾಯಿ ಲೇಔಟ್ ಪ್ರವಾಹ ಮರುಕಳಿಸುವುದಿಲ್ಲ, ಏಪ್ರಿಲ್ ಅಂತ್ಯದೊಳಗೆ ರೈಲ್ವೆ ವೆಂಟ್ ಕೆಲಸ ಮುಗಿಸಿ: ಜಿಬಿಎ ಮುಖ್ಯಸ್ಥ ಮಹೇಶ್ವರ ರಾವ್

ರಾಯಲ್ ಪಾಲ್ಮ್ಸ್ ನಿವಾಸಿಗಳ ಕಲ್ಯಾಣ ಸಂಘ ಮತ್ತು ಬಿ.ಆರ್. ಸಂಜಯ್ 2019ರಲ್ಲಿ ಹೈಕೋರ್ಟ್ ಮೊರೆ ಹೋಗಿ, ಬಿಬಿಎಂಪಿ ಮಳೆನೀರಿನ ಕಾಲುವೆ ಮರುಸ್ಥಾಪನೆ ಅಥವಾ ಅತಿಕ್ರಮಣ ತೆರವು ಹೆಸರಿನಲ್ಲಿ ರಾಯಲ್ ಪಾಲ್ಮ್ಸ್ ಲೇಔಟ್‌ನ ನಿವಾಸಿಗಳ ಹಕ್ಕುಸ್ವಾಮ್ಯಕ್ಕೆ ಅಡ್ಡಿಪಡಿಸಬಾರದು ಎಂದು ಕೋರಿದ್ದರು.

ಇತ್ತೀಚೆಗೆ ಎರಡೂ ಅರ್ಜಿಗಳನ್ನು ತಳ್ಳಿಹಾಕಿದ ನ್ಯಾಯಮೂರ್ತಿ ಆರ್. ನಟರಾಜ್, ರಾಜ್ಯ ಸರ್ಕಾರ ರಚಿಸಿದ ತಜ್ಞ ಸಮಿತಿಯ ನಕ್ಷೆ ಮತ್ತು ಅರ್ಜಿದಾರರು ಸಲ್ಲಿಸಿದ ಕಟ್ಟಡ ಯೋಜನೆ ದಾಖಲೆಯಲ್ಲಿದ್ದು, ಸರ್ವೆ ಸಂಖ್ಯೆ 7 ಮತ್ತು 11 ಮೂಲಕ ಹರಿಯುತ್ತಿದ್ದ ಮಳೆ ನೀರಿನ ಕಾಲುವೆಗಳಲ್ಲಿ ಉಳಿಸಿದರೆ ಆ ಜಾಗದ ಅಭಿವೃದ್ಧಿ ಕಷ್ಟಕರವಾಗುತ್ತದೆ; ಇಲ್ಲಿ ಬಫರ್ ಪ್ರದೇಶವನ್ನು ಮೀಸಲಿಡಬೇಕಾಗುತ್ತದೆ ಎಂದರು.

ಅರ್ಜಿದಾರರು, ಸಮಗ್ರ ಅಭಿವೃದ್ಧಿ ಯೋಜನೆ (CDP) 1995 ಪ್ರಕಾರ ಜಾಗವು ವಾಸಸ್ಥಳ ವಲಯದಲ್ಲಿದ್ದು, SWD ಬಗ್ಗೆ ಉಲ್ಲೇಖವಿಲ್ಲ; ಅನುಮೋದಿತ ಯೋಜನೆಯಂತೆ ನಿರ್ಮಾಣ ಮಾಡಲಾಗಿದೆ ಎಂದು ವಾದಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com