ಉಡುಪಿಯಲ್ಲಿ ಅದ್ದೂರಿಯಾಗಿ ನೆರವೇರಿದ ಪರ್ಯಾಯ : ಪುತ್ತಿಗೆ ಶ್ರೀಗಳಿಂದ ಕೃಷ್ಣ ಪೂಜಾ ಕೈಂಕರ್ಯ ಶಿರೂರು ಮಠಕ್ಕೆ ಹಸ್ತಾಂತರ

ಬೆಳಗಿನ ಜಾವ, ಮೆರವಣಿಗೆ ಕಾರ್ ಸ್ಟ್ರೀಟ್ ತಲುಪಿ ಮಠಾಧೀಶರು 'ಕನಕನ ಕಿಂಡಿ' ಮೂಲಕ ಶ್ರೀಕೃಷ್ಣನ ದರ್ಶನ ಪಡೆದರು, ನಂತರ ಶ್ರೀ ಚಂದ್ರಮೌಳೀಶ್ವರ ಮತ್ತು ಶ್ರೀ ಅನಂತೇಶ್ವರ ದರ್ಶನ ಪಡೆದರು.
Sri Sugunendra Theertha Swamiji hands over the ‘Akshya Patra’ and keys of Sri Krishna Mutt to Sri Vedavardhana Theertha Swamiji.
ಸುಗುಣೇಂದ್ರ ತೀರ್ಥ ಶ್ರೀಪಾದರಿಂದ ವೇದ ವರ್ಧನ ತೀರ್ಥರಿಗೆ ಅಕ್ಷಯ ಪಾತ್ರ ಹಸ್ತಾಂತರ
Updated on

ಉಡುಪಿ: ಕರಾವಳಿ ನಾಡಹಬ್ಬವೆಂದೆ ಖ್ಯಾತಿ ಪಡೆದಿರುವ ಉಡುಪಿ ಪರ್ಯಾಯ ಬಹಳ ಅದ್ದೂರಿಯಾಗಿ ನೆರವೇರಿತು. ಇಪ್ಪತ್ತರ ಆಸುಪಾಸಿನಲ್ಲಿರುವ ಶಿರೂರು ಮಠದ ಶ್ರೀ ವೇದವರ್ಧನ ಶ್ರೀಪಾದರು ಸರ್ವಜ್ಞ ಪೀಠಾರೋಹಣ ಅಲಂಕರಿಸಿದ್ದಾರೆ.

ಶಿರೂರು ವೇದವರ್ಧನ ಶ್ರೀಗಳ ಚೊಚ್ಚಲ ಪರ್ಯಾಯ ಮಹೋತ್ಸವದ ಭವ್ಯ ಶೋಭಾಯಾತ್ರೆ ಭಾನುವಾರ ಬೆಳಗ್ಗೆ ವಿಜೃಂಭಣೆಯಿಂದ ನಡೆಯಿತು. ಸಾವಿರಾರು ಭಕ್ತರು ಭಾಗವಹಿಸಿ ವಿವಿಧ ಟ್ಯಾಬ್ಲೋಗಳನ್ನು ಪ್ರದರ್ಶಿಸಿದರು. ಬೆಳಗಿನ ಜಾವ, ಮೆರವಣಿಗೆ ಕಾರ್ ಸ್ಟ್ರೀಟ್ ತಲುಪಿ ಮಠಾಧೀಶರು 'ಕನಕನ ಕಿಂಡಿ' ಮೂಲಕ ಶ್ರೀಕೃಷ್ಣನ ದರ್ಶನ ಪಡೆದರು, ನಂತರ ಶ್ರೀ ಚಂದ್ರಮೌಳೀಶ್ವರ ಮತ್ತು ಶ್ರೀ ಅನಂತೇಶ್ವರ ದರ್ಶನ ಪಡೆದರು.

ಕಾಪು ದಂಡತೀರ್ಥದಲ್ಲಿ ಮಧ್ಯರಾತ್ರಿ ಪುಣ್ಯಸ್ನಾನ ಮುಗಿಸಿದ ಯತಿಗಳು, ಪಟ್ಟದ ದೇವರಿಗೆ ಪೂಜೆ ಸಲ್ಲಿಸಿ 2:30ಕ್ಕೆ ಸರಿಯಾಗಿ ಜೋಡುಕಟ್ಟೆಗೆ ಆಗಮಿಸಿದರು. ಬಳಿಕ ಜೋಡುಕಟ್ಟೆಯಿಂದ ವೈಭವದ ಮೆರವಣಿಗೆ ಆರಂಭಗೊಂಡು ಸುಮಾರು ಎರಡು ಕಿ.ಮೀ ಸಾಗಿ ರಥಬೀದಿಯಲ್ಲಿ ಸಂಪನ್ನಗೊಂಡಿತು. ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮುಂದಿನ ಎರಡು ವರ್ಷಗಳ ಶ್ರೀ ಕೃಷ್ಣ ಪೂಜಾ ಕೈಂಕರ್ಯವನ್ನು ಹಸ್ತಾಂತರಿಸಿದರು.

ಅಷ್ಟ ಮಠಾಧೀಶರಿಗೆ ಸಾಂಪ್ರದಾಯಿಕ ದರ್ಬಾರ್ ಮತ್ತು ಮಾಲಿಕೆ ಮಂಗಳಾರತಿ ಬಡಗು ಮಾಳಿಗೆಯ ಅರಳು ಗದ್ದುಗೆಯಲ್ಲಿ ನಡೆಯಿತು. ನಂತರ ರಾಜಾಂಗಣದಲ್ಲಿ 'ಪರ್ಯಾಯ ದರ್ಬಾರ್' ನಡೆಯಿತು, ಅಲ್ಲಿ ಅಷ್ಟ ಮಠದ ಮಠಾಧೀಶರು ಮತ್ತು ಪರ್ಯಾಯ ಮಠದ ಯತಿಗಳು ಆಶೀರ್ವದಿಸಿದ ಸಂದೇಶಗಳನ್ನು ನೀಡಿದರು, ನಂತರ ಶ್ರೀ ಕೃಷ್ಣನಿಗೆ ಮಹಾಪೂಜೆ ಮತ್ತು ಪಲ್ಲಪೂಜೆ ಮಾಡಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com