

ನವದೆಹಲಿ: 2026 ನೇ ಸಾಲಿನ ಪದ್ಮ ಪ್ರಶಸ್ತಿಗಳು ಘೋಷಣೆಯಾಗಿದ್ದು, ಈ ವರ್ಷ ಶತಾವಧಾನಿ ಆರ್ ಗಣೇಶ್ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಭಾರತೀಯ ವಿದ್ವತ್ ಪರಂಪರೆಯ ಪ್ರತಿನಿಧಿಯಾದ ಆರ್ ಗಣೇಶ್ ಅವಧಾನ ಕಲೆಯ ಅಭ್ಯಾಸಿ, ಬಹುಭಾಷಾ, ಸಂಸ್ಕೃತ ಮತ್ತು ಕನ್ನಡದಲ್ಲಿ ಲೇಖಕ ಮತ್ತು ಬಹು ಭಾಷೆಗಳಲ್ಲಿ ಉತ್ಕೃಷ್ಟ ಕವಿ. ಅವರು ಕನ್ನಡ , ಸಂಸ್ಕೃತ , ತೆಲುಗು ಮತ್ತು ಪ್ರಾಕೃತದಲ್ಲಿ 1300 ಕ್ಕೂ ಹೆಚ್ಚು ಅವಧಾನಗಳನ್ನು ಮಾಡಿದ್ದಾರೆ.
ನವೆಂಬರ್ 30, 2012 ರಿಂದ ಡಿಸೆಂಬರ್ 2, 2012 ರವರೆಗೆ, ಅವರು ಕನ್ನಡದಲ್ಲಿ ಮೊದಲ ಶತಾವಧಾನವನ್ನು ಸಂಪೂರ್ಣವಾಗಿ ನಡೆಸಿಕೊಟ್ಟಿದ್ದರು. ಫೆಬ್ರವರಿ 16, 2014 ರಂದು ಬೆಂಗಳೂರಿನಲ್ಲಿ ಅವರು ತಮ್ಮ 1000 ನೇ ಅವಧಾನವನ್ನು ನಡೆಸಿಕೊಟ್ಟಿದ್ದರು.
ಈ ಬಾರಿ ಒಟ್ಟು 5 ಜನರು ಪದ್ಮ ವಿಭೂಷಣ, 13 ಜನ ಪದ್ಮ ಭೂಷಣ ಮತ್ತು 113 ಮಂದಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪೈಕಿ ಕಲಾ ಕ್ಷೇತ್ರದಲ್ಲಿನ ಸೇವೆಗಾಗಿ ಕರ್ನಾಟಕದ ಶತಾವಧಾನಿ ಆರ್. ಗಣೇಶ್ ಪದ್ಮ ಭೂಷಣ ಪ್ರಶಸ್ತಿ ಪಡೆದಿದ್ದಾರೆ. ರಾಜ್ಯದ 7 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಸಂದಿದೆ.
Advertisement