'ಚಿಂತಿಸಬೇಡಿ, ನಿಮ್ಮೊಂದಿಗೆ ಮಾತನಾಡದೆ ನಾವು ಹೋಗುವುದಿಲ್ಲ': ಪ್ರವಾಸದ ವೇಳೆ ಸಿಎಂ ಡಿಕೆ ಶಿವಕುಮಾರ್ ಅಭಯ

ರಾಜ್ಯದಲ್ಲಿನ ಬರ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಶಿವಕುಮಾರ್ ಎಚ್ಚರಿಕೆ ನೀಡಿದರು.
Karnataka govt closely monitoring rainfall, crops in North Karnataka: CM DK Shivakumar
ಮುಖ್ಯಮಂತ್ರಿ ಡಿಕೆ ಶಿವಕುಮಾರ್
Updated on

ಬೆಳಗಾವಿ: ಉತ್ತರ ಕರ್ನಾಟಕದಾದ್ಯಂತ ಮಳೆ ಪರಿಸ್ಥಿತಿ ಮತ್ತು ಬೆಳೆಗಳ ಸ್ಥಿತಿಗತಿಯನ್ನು ರಾಜ್ಯ ಸರ್ಕಾರವು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗುರುವಾರ ತಿಳಿಸಿದರು.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಪರಿಶೀಲನಾ ಪ್ರವಾಸವು ಬಸವಕಲ್ಯಾಣದಿಂದ ಆರಂಭವಾಗಿ, ಬೀದರ್ ಮತ್ತು ಕಲಬುರಗಿ ಮೂಲಕ ಸಾಗಿ ಬೆಳಗಾವಿಯನ್ನು ತಲುಪಿದೆ ಎಂದು ಹೇಳಿದರು.

'ನಾವು ಮಳೆಯ ಪರಿಸ್ಥಿತಿ ಮತ್ತು ಬೆಳೆಗಳನ್ನು ಪರಿಶೀಲಿಸಬೇಕಿದೆ. ಬಸವಕಲ್ಯಾಣದಿಂದ ನಮ್ಮ ಪ್ರವಾಸವನ್ನು ಆರಂಭಿಸಿದೆವು. ಬಸವಕಲ್ಯಾಣದ ನಂತರ ಬೀದರ್‌ಗೆ ಮತ್ತು ಅಲ್ಲಿಂದ ಗುಲ್ಬರ್ಗಕ್ಕೆ ಹೋದೆವು. ಆ ಪ್ರಕ್ರಿಯೆಯನ್ನು ಮುಗಿಸಿಕೊಂಡು ಬಂದಿದ್ದೇವೆ. ಇಂದು ನಾವು ಬೆಳಗಾವಿಯಲ್ಲಿದ್ದೇವೆ' ಎಂದು ಅವರು ಹೇಳಿದರು.

'ನನ್ನ ಸಂಪುಟದ ಎಲ್ಲ ಸಚಿವರು ಈ ಪ್ರವಾಸದಲ್ಲಿ ನನ್ನೊಂದಿಗೆ ಇಲ್ಲಿದ್ದಾರೆ. ನಾವು ಎಲ್ಲವನ್ನೂ ಪರಿಶೀಲಿಸುತ್ತೇವೆ. ಶಾಸಕರು ಹಾಗೂ ನಿಮ್ಮೆಲ್ಲರೊಂದಿಗೂ ನಾವು ಮಾತನಾಡುತ್ತೇವೆ. ಚಿಂತಿಸಬೇಡಿ, ನಿಮ್ಮೊಂದಿಗೆ ಮಾತನಾಡದೆ ನಾವು ಹೋಗುವುದಿಲ್ಲ' ಎಂದು ಶಿವಕುಮಾರ್ ಭರವಸೆ ನೀಡಿದರು.

ಜೊತೆಗೆ, ಮಳೆ ಸಂಬಂಧಿತ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಸಾರ್ವಜನಿಕರ ಸಹಕಾರವನ್ನು ಕೋರಿದ ಅವರು, ಜನರಿಗೆ ಶುಭ ಹಾರೈಸಿದರು.

ರಾಜ್ಯದಲ್ಲಿನ ಬರ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಶಿವಕುಮಾರ್ ಮಂಗಳವಾರ ಎಚ್ಚರಿಕೆ ನೀಡಿದರು.

Karnataka govt closely monitoring rainfall, crops in North Karnataka: CM DK Shivakumar
ಬೆಂಗಳೂರಿನಾಚೆಗೆ ಮತ್ತಷ್ಟು ಹೊಸ ಬೆಂಗಳೂರುಗಳ ನಿರ್ಮಾಣ: ಸಿಎಂ ಡಿ.ಕೆ ಶಿವಕುಮಾರ್ ಘೋಷಣೆ

ಕಲಬುರಗಿಯಲ್ಲಿ ನಡೆದ ಉತ್ತರ ಕರ್ನಾಟಕದ ಪ್ರಥಮ ವಿಭಾಗೀಯ ಮಟ್ಟದ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ, ಅಧಿಕಾರಿಗಳ ಕರ್ತವ್ಯಲೋಪವನ್ನು ಸಹಿಸುವುದಿಲ್ಲ ಎಂದು ಹೇಳಿದರು.

'ಎಲ್ಲರನ್ನು ಒಳಗೊಂಡಂತೆ ಕೊನೆಯ ವ್ಯಕ್ತಿಗೂ ಸ್ವಚ್ಛ ಆಡಳಿತ, ಅಭಿವೃದ್ಧಿ ಮತ್ತು ನಾಗರಿಕ ಹಕ್ಕುಗಳನ್ನು ಒದಗಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ. ಈ ಗುರಿಯನ್ನು ಸಾಧಿಸಲು, ಅಧಿಕಾರಿಗಳು ಬಹಳ ಕ್ರಿಯಾಶೀಲವಾಗಿ, ಜನಪರವಾಗಿ ಮತ್ತು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು' ಎಂದು ಅವರು ಹೇಳಿದರು.

'ತಾಲ್ಲೂಕು ಪಂಚಾಯತ್ ಅಧ್ಯಕ್ಷರಿಂದ ಮುಖ್ಯಮಂತ್ರಿಯವರೆಗೆ ವಿವಿಧ ಹಂತಗಳಲ್ಲಿ ಕೆಲಸ ಮಾಡಿದ್ದೇನೆ. ಆದ್ದರಿಂದ, ಆಡಳಿತದ ಪ್ರತಿಯೊಂದು ಹಂತದಲ್ಲೂ ಏನಾಗುತ್ತದೆ ಎಂದು ನನಗೆ ಚೆನ್ನಾಗಿ ತಿಳಿದಿದೆ. ಅಭಿವೃದ್ಧಿಯ ವಿಷಯಕ್ಕೆ ಬಂದಾಗ ನಾನು ಯಾವುದೇ ನೆಪಗಳನ್ನು ಕೇಳಲು ಸಿದ್ಧನಿಲ್ಲ. ಫಲಿತಾಂಶಗಳು ನನಗೆ ಮುಖ್ಯ. ನೀವು ಜನರ ಪರವಾಗಿ ಕೆಲಸ ಮಾಡದಿದ್ದರೆ, ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗುತ್ತದೆ' ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com