ಒಮನ್ ಕರಾವಳಿಯಲ್ಲಿ ಹಡಗಿನ ಮೇಲೆ ದಾಳಿ; ಮಂಗಳೂರು ನಾವಿಕನ ರಕ್ಷಣೆ, ದಾಳಿಯ ಭೀಕರತೆ ಬಿಚ್ಚಿಟ್ಟ ಬಂಟ್ವಾಳದ ಯುವಕ!

ಸೈಪ್ರಸ್ ಧ್ವಜ ಹೊಂದಿರುವ ಸರಕು ಸಾಗಣೆ ಹಡಗು ಜಿಎಫ್‌ಎಸ್ ಗ್ಯಾಲಕ್ಸಿ ಒಮನ್ ಕರಾವಳಿಯಲ್ಲಿ ಇರಾನ್‌ನಿಂದ ದಾಳಿಗೆ ಒಳಗಾಗಿದೆ.
The Palau-flagged tanker Settebello was attacked by the US Navy
ಒಮನ್ ಕರಾವಳಿಯಲ್ಲಿ ಹಡಗಿನ ಮೇಲೆ ದಾಳಿ
Updated on

ಮಂಗಳೂರು: ಒಮನ್ ಕರಾವಳಿಯಲ್ಲಿ ಭಾನುವಾರ ಸರಕು ಸಾಗಣೆ ಹಡಗಿನ ಮೇಲೆ ದಾಳಿ ಮಾಡಿದ ನಂತರ ಅಲ್ಲಿನ ನೌಕಾಪಡೆಯಿಂದ ರಕ್ಷಿಸಲ್ಪಟ್ಟ 10 ಭಾರತೀಯ ಪ್ರಜೆಗಳಲ್ಲಿ ಒಬ್ಬರಾದ ಮಂಗಳೂರು ಬಳಿಯ ಬಂಟ್ವಾಳದ ನಾವಿಕರೊಬ್ಬರು ಸೇರಿದ್ದಾರೆ. ಸದ್ಯ ಅವರು ಒಮಾನ್‌ನಲ್ಲಿ ತಮ್ಮ ಕಂಪನಿಯ ಅಧಿಕಾರಿಗಳ ನಿಗಾವಣೆಯಲ್ಲಿ ಸುರಕ್ಷಿತರಾಗಿದ್ದಾರೆ ಎನ್ನಲಾಗಿದೆ.

ಹಡಗಿನಲ್ಲಿದ್ದ 11 ಭಾರತೀಯರ ರಕ್ಷಣೆ, ಓರ್ವ ನಾಪತ್ತೆ:

ಸೈಪ್ರಸ್ ಧ್ವಜ ಹೊಂದಿರುವ ಸರಕು ಸಾಗಣೆ ಹಡಗು ಜಿಎಫ್‌ಎಸ್ ಗ್ಯಾಲಕ್ಸಿ ಒಮನ್ ಕರಾವಳಿಯಲ್ಲಿ ಇರಾನ್‌ನಿಂದ ದಾಳಿಗೆ ಒಳಗಾಗಿದೆ. ಕೇಂದ್ರ ವಿದೇಶಾಂಗ ಸಚಿವಾಲಯದ ಪ್ರಕಾರ, ಹಡಗಿನಲ್ಲಿದ್ದ 11 ಭಾರತೀಯ ಪ್ರಜೆಗಳಲ್ಲಿ, ಇಲ್ಲಿಯವರೆಗೆ 10 ಜನರನ್ನು ರಕ್ಷಿಸಲಾಗಿದ್ದು, ಓರ್ವ ಭಾರತೀಯ ಪ್ರಜೆ ನಾಪತ್ತೆಯಾಗಿದ್ದಾನೆ ಎಂದು ವರದಿಯಾಗಿದೆ.

ತೀವ್ರವಾಗಿ ಗಾಯಗೊಂಡಿರುವ ಓರ್ವ ವ್ಯಕ್ತಿ ಚಿಕಿತ್ಸೆ ಪಡೆಯುತ್ತಿದ್ದು, ಸಣ್ಣಪುಟ್ಟ ಗಾಯಗಳಿಗೆ ಒಳಗಾದ ಇನ್ನೊಬ್ಬ ಸಿಬ್ಬಂದಿಯನ್ನು ಬಿಡುಗಡೆ ಮಾಡಲಾಗಿದೆ. ಸೂಕ್ತ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿದ ನಂತರ ನಮ್ಮನ್ನು ಭಾರತಕ್ಕೆ ಹಿಂತಿರುಗಿಸುವುದಾಗಿ ಕಂಪನಿ ಭರವಸೆ ನೀಡಿದೆ" ಎಂದು ನಾವಿಕ ಮಾಹಿತಿ ನೀಡಿದ್ದಾರೆ.

ದಾಳಿಯ ಭೀಕರತೆ ಬಿಚ್ಚಿಟ್ಟ ಬಂಟ್ವಾಳದ ಯುವಕ: ಭಾನುವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಇರಾನಿನ ದಾಳಿಯಿಂದ ಎಂಜಿನ್ ಕೊಠಡಿ ಸುಟ್ಟುಹೋಗಿದೆ. ದಾಳಿ ನಡೆದಾಗ ಹಡಗಿನಲ್ಲಿ 24 ಸಿಬ್ಬಂದಿ ಇದ್ದರು ಎಂದು ಕಳೆದ ಮೂರು ವರ್ಷಗಳಿಂದ ಹಡಗು ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಬಂಟ್ವಾಳ ತಾಲೂಕಿನ 25 ವರ್ಷದ ನಾವಿಕ ಟಿಎನ್‌ಐಇಗೆ ತಿಳಿಸಿದರು.

ದಾಳಿಯ ನಂತರ, ಇಬ್ಬರು ನಾವಿಕರು ನಾಪತ್ತೆಯಾದರು. ಗಾಯದಿಂದ ಸಿಬ್ಬಂದಿಯೊಬ್ಬರನ್ನು ಎಂಜಿನ್ ಕೊಠಡಿಯಿಂದ ಸ್ಥಳಾಂತರಿಸಲಾಯಿತು, ಆದರೆ ನಾಪತ್ತೆಯಾದ ಮತ್ತೊಬ್ಬ ಸಿಬ್ಬಂದಿಯನ್ನು ಹುಡುಕುವ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ದಾಳಿ ನಡೆದಾಗ ಹಡಗು ಯುಎಇಯ ಬಂದರಿಗೆ ಹೋಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

ಈ ಪ್ರದೇಶವನ್ನು ಯುದ್ಧ ವಲಯವೆಂದು ಘೋಷಿಸಿದಾಗಿನಿಂದ, ವೈಮಾನಿಕ ಅಥವಾ ಡ್ರೋನ್ ದಾಳಿ ಸೇರಿದಂತೆ ಯಾವುದೇ ತುರ್ತು ಪರಿಸ್ಥಿತಿಗೆ ಸನ್ನದ್ಧರಾಗಿದ್ದೇವು. ಆದರೆ ನಮ್ಮ ಹಡಗು ದಾಳಿಗೆ ಒಳಗಾಗುತ್ತದೆ ಎಂದು ಎಂದಿಗೂ ಊಹಿಸಿರಲಿಲ್ಲ. ಕ್ಷಿಪಣಿ ದಾಳಿ ನಡೆದಾಗ ನಾವು ಭೂಮಿಯನ್ನು ತಲುಪಲು ಕೇವಲ ಒಂದು ಕಿಲೋಮೀಟರ್ ದೂರದಲ್ಲಿದ್ದೆವು. ತಕ್ಷಣ ಒಮಾನಿ ನೌಕಾಪಡೆಯನ್ನು ಸಂಪರ್ಕಿಸಿದಾಗ ಅವರು ಬಂದು ರಕ್ಷಿಸಿದರು ಎಂದು ಅವರು ಮಾಹಿತಿ ನೀಡಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಭಾರತೀಯ ರಾಯಭಾರ ಕಚೇರಿ ಒಮಾನಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿರುವುದು ತಿಳಿದುಬಂದಿದೆ.

The Palau-flagged tanker Settebello was attacked by the US Navy
ಓಮನ್ ಕರಾವಳಿಯಲ್ಲಿ ಭಾರತೀಯರಿದ್ದ ಹಡಗಿನ ಮೇಲೆ ದಾಳಿ: ಭಾರತ ಖಂಡನೆ; 10 ಜನರ ರಕ್ಷಣೆ, ಓರ್ವ ನಾಪತ್ತೆ

ನಾವಿಕನ ಸಹೋದರ ನಿರಾಳ: ನಾವಿಕ ಪುತ್ತೂರಿನ ವಿವೇಕಾನಂದ ಕಾಲೇಜಿನ ಪದವೀಧರರಾಗಿದ್ದು, ನಂತರ ಮುಂಬೈನಲ್ಲಿ ನಾವಿಕ ಕೋರ್ಸ್ ಪಡೆದಿದ್ದಾರೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನತೆಯಿಂದಾಗಿ ಸಾಕಷ್ಟು ಭಯವಾಗಿತ್ತು. ಆದರೆ ಈಗ ನಾವು ನಿರಾಳರಾಗಿದ್ದೇವೆ. ಅವರು ಭಾರತಕ್ಕೆ ಸುರಕ್ಷಿತವಾಗಿ ಮರಳುತ್ತಾರೆ ಎಂಬ ನಂಬಿಕೆಯಿದೆ ಎಂದು ಅವರು ಸಹೋದರ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com