ವಿಧಾನಸೌಧದಲ್ಲಿರುವ CM ಕಚೇರಿಗೆ ಜ್ಯೋತಿಷಿಗಳ ಭೇಟಿ; ಕುರ್ಚಿ ದಿಕ್ಕು ಬದಲು, ಅಜ್ಜಯ್ಯನ ಫೋಟೋ ಅಳವಡಿಕೆ!

ಈ ಮಧ್ಯೆ ಪ್ರಮಾಣವಚನಕ್ಕೂ ಮುನ್ನ ಮಂಗಳವಾರ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಮುಖ್ಯಮಂತ್ರಿಗಳ ಕಚೇರಿಗೆ ಜ್ಯೋತಿಷಿಗಳು ಭೇಟಿ ನೀಡಿ ವಾಸ್ತು ಪರಿಶೀಲಿಸಿದ್ದಾರೆ.
ಡಿಕೆ ಶಿವಕುಮಾರ್(ಸಂಗ್ರಹ ಚಿತ್ರ)
ಡಿಕೆ ಶಿವಕುಮಾರ್(ಸಂಗ್ರಹ ಚಿತ್ರ)
Updated on

ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸುತ್ತಿದ್ದು, ಲೋಕ ಭವನದಲ್ಲಿ ಭರ್ಜರಿ ಸಿದ್ಧತೆಗಳು ನಡೆದಿವೆ.

ಈ ಮಧ್ಯೆ ಪ್ರಮಾಣವಚನಕ್ಕೂ ಮುನ್ನ ಮಂಗಳವಾರ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಮುಖ್ಯಮಂತ್ರಿಗಳ ಕಚೇರಿಗೆ ಜ್ಯೋತಿಷಿಗಳು ಭೇಟಿ ನೀಡಿ ವಾಸ್ತು ಪರಿಶೀಲಿಸಿದ್ದಾರೆ.

‌ನೂತನ ಸಿಎಂ ಡಿಕೆ ಶಿವಕುಮಾರ್ ಕುಳಿತುಕೊಳ್ಳಲಿರುವ ಕುರ್ಚಿಯ ವಾಸ್ತು ಪರಿಶೀಲಿಸಿದ ಜ್ಯೋತಿಷಿಗಳು, ಕುರ್ಚಿಯ ದಿಕ್ಕನ್ನು ಬದಲಿಸಿದ್ದಾರೆ. ಅಲ್ಲದೆ ಜ್ಯೋತಿಷಿಗಳ ಸಲಹೆಯಂತೆ ಸಿಎಂ ಕಚೇರಿಯಲ್ಲಿ ಅಜ್ಜಯ್ಯನ ಫೋಟೋ ಅಳವಡಿಸಲಾಗಿದೆ.

ಡಿಕೆ ಶಿವಕುಮಾರ್(ಸಂಗ್ರಹ ಚಿತ್ರ)
ಮುಖ್ಯಮಂತ್ರಿಯಾಗಿ ನಾಳೆ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕಾರ: ಹೀಗಿದೆ ಕಾರ್ಯಕ್ರಮದ ಭದ್ರತೆ

ಡಿ.ಕೆ ಶಿವಕುಮಾರ್ ಅವರು ಅಜ್ಜಯ್ಯನನ್ನು ಬಲವಾಗಿ ನಂಬುತ್ತಾರೆ. ‘ನಾನು ರಾಜನಾಗುವೆ ಎಂದು ನೊಣವಿನಕೆರೆ ಅಜ್ಜಯ್ಯ ಬಾಲ್ಯದಲ್ಲಿಯೇ ಹೇಳಿದ್ದರು. ಅಜ್ಜಯ್ಯನ ಅನುಗ್ರಹದಿಂದ ಮುಖ್ಯಮಂತ್ರಿ ಆಗುತ್ತಿದ್ದೇನೆ’ ಎಂದು ಡಿ.ಕೆ. ಶಿವಕುಮಾರ್ ಈ ಹಿಂದೆ ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com