RSS ನೋಂದಣಿ ಬಗ್ಗೆ ಮೋಹನ್ ಭಾಗವತ್‌ಗೆ ಪ್ರಿಯಾಂಕ್ ಖರ್ಗೆ ಪತ್ರ: ಕಾನೂನು ಪಾಲನೆ ಕುರಿತು ಸ್ಪಷ್ಟನೆ ಕೇಳಿದ ಗೃಹ ಸಚಿವ!

ಮೋಹನ್ ಭಾಗವತ್‌ಗೆ ಬರೆದ ಪತ್ರವನ್ನು ಎಕ್ಸ್ ನಲ್ಲಿ ಹಂಚಿಕೊಂಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, ಮೊದಲನೆಯದಾಗಿ, 100 ವರ್ಷಗಳನ್ನು ಪೂರೈಸಿದ RSS ಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.
Priyank Kharge- RSS Chief Mohan bhagwat
ಪ್ರಿಯಾಂಕ್ ಖರ್ಗೆ- ಮೋಹನ್ ಭಾಗ್ವತ್online desk
Updated on

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರುದ್ಧದ ವಾಗ್ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಸೋಮವಾರ ಸಂಘದ ನೋಂದಣಿ ಬಗ್ಗೆ ಸ್ಪಷ್ಟನೆ ಕೋರಿ ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದಾರೆ.

ಮೋಹನ್ ಭಾಗವತ್‌ಗೆ ಬರೆದ ಪತ್ರವನ್ನು ಎಕ್ಸ್ ನಲ್ಲಿ ಹಂಚಿಕೊಂಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, ಮೊದಲನೆಯದಾಗಿ, 100 ವರ್ಷಗಳನ್ನು ಪೂರೈಸಿದ RSS ಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

60,000 ಕ್ಕೂ ಹೆಚ್ಚು ಶಾಖೆಗಳು ಮತ್ತು ಕೋಟಿಗಟ್ಟಲೆ ಸ್ವಯಂಸೇವಕರನ್ನು ಹೊಂದಿರುವುದಾಗಿ ಪ್ರತಿಪಾದಿಸುವ ಸಂಸ್ಥೆಯು ಪಾರದರ್ಶಕತೆ ಮತ್ತು ಸಾಂವಿಧಾನಿಕ ಹೊಣೆಗಾರಿಕೆಯನ್ನು ಎತ್ತಿಹಿಡಿಯಬೇಕು ಎಂದು ಹೇಳಿದ್ದಾರೆ.

ಆರ್‌ಎಸ್‌ಎಸ್‌ನ ಅತ್ಯುನ್ನತ ಮತ್ತು ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆ ಅಖಿಲ ಭಾರತೀಯ ಪ್ರತಿನಿಧಿ ಸಭಾ ಬಿಡುಗಡೆ ಮಾಡಿದ 2025-26 ರ ವಾರ್ಷಿಕ ವರದಿಯ ಪ್ರಕಾರ, ಕರ್ನಾಟಕದಲ್ಲಿ 4,127 ದೈನಂದಿನ ಶಾಖೆಗಳು, 1,389 ಸಾಪ್ತಾಹಿಕ ಮಿಲನ್‌ಗಳು ಮತ್ತು 60 ಮಾಸಿಕ ಮಂಡಳಿಗಳನ್ನು ಹೊಂದುವ ಮೂಲಕ ಸಂಘಟನೆಯು ಭಾರಿ ಹೆಜ್ಜೆಗುರುತನ್ನು ಹೊಂದಿದೆ.

Priyank Kharge- RSS Chief Mohan bhagwat
ಬೀದಿ ವ್ಯಾಪಾರಿಯೂ ನೋಂದಾಯಿಸಿಕೊಳ್ಳಬೇಕಾದ ಈ ದೇಶದಲ್ಲಿ RSSಗೆ ಏಕೆ ವಿನಾಯಿತಿ?: ಪ್ರಿಯಾಂಕ್ ಖರ್ಗೆ

ಇಷ್ಟೊಂದು ಬೃಹತ್ ಗಾತ್ರ, ಪ್ರಭಾವ ಮತ್ತು ವ್ಯಾಪ್ತಿಯನ್ನು ಹೊಂದಿರುವುದರಿಂದಲೇ, ಆರ್‌ಎಸ್‌ಎಸ್ (RSS) ಸಂಘಟನೆಯು ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸಾಂವಿಧಾನಿಕ ಅನುಸರಣೆಯ ಉನ್ನತ ಮಾನದಂಡಗಳನ್ನು ಕಾಯ್ದುಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

ನಾಗರಿಕರು, ಕಾರ್ಮಿಕರು, ಎನ್‌ಜಿಒಗಳು, ಟ್ರಸ್ಟ್‌ಗಳು, ದೇವಾಲಯಗಳು ಮತ್ತು ಕಂಪನಿಗಳು ನೋಂದಾಯಿಸಲು, ಪಾರದರ್ಶಕತೆ ಕಾಯ್ದುಕೊಳ್ಳಲು ಮತ್ತು ಕಾನೂನನ್ನು ಅನುಸರಿಸಲು ಬಯಸುತ್ತಿವೆ. ಆದರೆ, ಆರ್‌ಎಸ್‌ಎಸ್ ಗೆ ಏಕೆ ವಿನಾಯಿತಿ ನೀಡಬೇಕು? ಎಂದು ಪ್ರಶ್ನಿಸಿದ್ದಾರೆ.

ಆರ್‌ಎಸ್‌ಎಸ್‌ನ ಸಾರ್ವಜನಿಕ ಒಗ್ಗೂಡುವಿಕೆ ಕೂಡ ಅಷ್ಟೇ ವಿಸ್ತಾರವಾಗಿದೆ. ನಿಮ್ಮ ವರದಿಯ ಪ್ರಕಾರ, ಸಂಘಟನೆಯು 2,194 ಸಮಾಜೋತ್ಸವಗಳನ್ನು ನಡೆಸಿದ್ದು, ಇದರಲ್ಲಿ 19,61,158 ಮಂದಿ ಭಾಗವಹಿಸಿದ್ದಾರೆ. ರಾಜ್ಯಾದ್ಯಂತ ನೀವು 562 ಪಥಸಂಚಲನಗಳನ್ನು ಆಯೋಜಿಸಿದ್ದೀರಿ, ಇವು ಸಾಮಾನ್ಯವಾಗಿ 2.5 ರಿಂದ 3 ಕಿ.ಮೀ.ವರೆಗೆ ನಡೆದಿದ್ದು, 2,21,963 ಸಮವಸ್ತ್ರಧಾರಿ ಸ್ವಯಂಸೇವಕರು ಪಾಲ್ಗೊಂಡಿದ್ದರು ಎಂದು ಹೇಳಿಕೊಂಡಿದ್ದೀರಿ.

ಇವೆಲ್ಲವನ್ನೂ ಒಟ್ಟಾಗಿ ನೋಡಿದಾಗ, ಕರ್ನಾಟಕದಾದ್ಯಂತ ದೈನಂದಿನ, ಸಾಪ್ತಾಹಿಕ ಮತ್ತು ಮಾಸಿಕ ಸಂಪರ್ಕಗಳು, ಬೃಹತ್ ಸಾರ್ವಜನಿಕ ಕಾರ್ಯಕ್ರಮಗಳು ಹಾಗೂ ಸಮವಸ್ತ್ರಧಾರಿ ಪಥಸಂಚಲನಗಳ ಮೂಲಕ ಕಾರ್ಯನಿರ್ವಹಿಸುತ್ತಿರುವ, ಶಿಸ್ತುಬದ್ಧ ಹಾಗೂ ಆಳವಾಗಿ ಬೇರೂರಿರುವ ಬೃಹತ್ ನೆಟ್‌ವರ್ಕ್ ಇದಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

Priyank Kharge- RSS Chief Mohan bhagwat
Watch | ಆರ್‌ಎಸ್‌ಎಸ್ ನೋಂದಣಿಗಾಗಿ ದಾಖಲೆ ಸಿದ್ಧವಾಗಿಡಲು ಹೇಳಿ: ಪ್ರಿಯಾಂಕ್ ಖರ್ಗೆ

ಇಷ್ಟೊಂದು ವಿಸ್ತಾರವಾದ ಸಾಂಸ್ಥಿಕ ಅಸ್ತಿತ್ವವನ್ನು ಹೊಂದಿರುವಾಗ, ವಿಶೇಷವಾಗಿ ನಿಯಮಿತವಾದ ಸಾರ್ವಜನಿಕ ಒಗ್ಗೂಡುವಿಕೆ, ಸಮವಸ್ತ್ರಧಾರಿ ಪಥಸಂಚಲನಗಳು ಮತ್ತು ದೊಡ್ಡ-ಮಟ್ಟದ ಸಾಮಾಜಿಕ ಕಾರ್ಯಕ್ರಮಗಳನ್ನು ಒಳಗೊಂಡಿರುವಾಗ, ಇದನ್ನು ಕೇವಲ ಒಂದು ಖಾಸಗಿ ಅಥವಾ ಅನೌಪಚಾರಿಕ (Informal) ವ್ಯವಸ್ಥೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಇದು ಸಂಘಟನೆಯ ಕಾನೂನುಬದ್ಧ ಸ್ಥಾನಮಾನ, ಹೊಣೆಗಾರಿಕೆ, ಆರ್ಥಿಕ ಪಾರದರ್ಶಕತೆ, ಸಾರ್ವಜನಿಕ ಸುವ್ಯವಸ್ಥೆ, ಅನುಮತಿಗಳು, ಹಣಕಾಸಿನ ಮೂಲಗಳು ಮತ್ತು ಭಾರತದ ಸಂವಿಧಾನ ಹಾಗೂ ಕಾನೂನುಗಳ ಪಾಲನೆಯ ಕುರಿತು ನ್ಯಾಯಸಮ್ಮತವಾದ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದಿದ್ದಾರೆ.

ಆದ್ದರಿಂದ, ಇಷ್ಟೊಂದು ಬೃಹತ್ ಗಾತ್ರದ ಸಂಘಟನೆಯು ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಅಧಿಕೃತವಾಗಿ ಕಾನೂನುಬದ್ಧ ಘಟಕವಾಗಿ ಅಥವಾ ವ್ಯಕ್ತಿಗಳ ಸಂಸ್ಥೆ ಯಾಗಿ ನೋಂದಾಯಿಸಿಕೊಳ್ಳದೆ, ಅನಾಮಧೇಯವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತಿರುವ ಹಿಂದಿನ 'ಕಾನೂನು ಆಧಾರಗಳನ್ನು' ವಿವರಿಸಲು ನಿಮ್ಮ ಅಧಿಕೃತ ಪದಾಧಿಕಾರಿಗಳನ್ನು ನಿಯೋಜಿಸುವಂತೆ ನಾವು ಆರ್‌ಎಸ್‌ಎಸ್‌ ಅನ್ನು ಕೋರುತ್ತೇವೆ ಎಂದು ಬರೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com