ಹಾದಿಬೀದಿಯಲ್ಲಿ ಚರ್ಚೆ ಏತಕ್ಕೆ, ಹೆಚ್ ಡಿಕೆಯವರು ವಿಧಾನಸೌಧಕ್ಕೆ ಬರಲಿ: ಯತೀಂದ್ರ ಸಿದ್ದರಾಮಯ್ಯ

ನಿನ್ನೆ ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಡದಿಯಲ್ಲಿ ನಡೆದಿರುವ ಹೋ ರಾಟದಿಂದ ಸರ್ಕಾರದ ಮೇಲೆ ಯಾವ ಪರಿಣಾಮವೂ ಬೀರುವುದಿಲ್ಲ. ಬಿಡದಿ ಟೌನ್ ಶಿಪ್ ಜನರ ಪರವಾಗಿದ್ದು, ಸರ್ಕಾರ ಟೌನ್ ಶಿಪ್ ನಿರ್ಮಾಣ ಮಾಡಿಯೇ ಮಾಡುತ್ತದೆ ಎಂದರು.
Dr Yathindra Siddaramaiah
ಡಾ ಯತೀಂದ್ರ ಸಿದ್ದರಾಮಯ್ಯ
Updated on

ಮೈಸೂರು: ಬಿಡದಿ ಟೌನ್ ಶಿಪ್ ಯೋಜನೆ ವಿಚಾರ ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಚರ್ಚೆ ನಡೆಸುವುದಾದರೆ ವಿಧಾನಸೌಧಕ್ಕೆ ಬರಲಿ. ಹಾದಿಬೀದಿಯಲ್ಲಿ ಕುಳಿತು ಚರ್ಚಿಸುವುದು ಏತಕ್ಕೆ ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ನಿನ್ನೆ ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಡದಿಯಲ್ಲಿ ನಡೆದಿರುವ ಹೋ ರಾಟದಿಂದ ಸರ್ಕಾರದ ಮೇಲೆ ಯಾವ ಪರಿಣಾಮವೂ ಬೀರುವುದಿಲ್ಲ. ಬಿಡದಿ ಟೌನ್ ಶಿಪ್ ಜನರ ಪರವಾಗಿದ್ದು, ಸರ್ಕಾರ ಟೌನ್ ಶಿಪ್ ನಿರ್ಮಾಣ ಮಾಡಿಯೇ ಮಾಡುತ್ತದೆ ಎಂದರು.

Dr Yathindra Siddaramaiah
ಡಿಕೆಶಿ V/S ಹೆಚ್ ಡಿಕೆ: ನಾನು ಇಂದು ಭೈರಮಂಗಲಕ್ಕೆ ಹೋಗ್ತೇನೆ, ಪ್ರತಿಭಟನಾ ಸ್ಥಳಕ್ಕೆ ಡಿಕೆಶಿ ಬರಲಿ, ಯೋಗ್ಯತೆ ಇದ್ರೆ ರೈತರ ಮನವೊಲಿಸಲಿ-Video

ಯೋಜನೆ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಇಬ್ಬರೂ ಪತ್ರ ಬರೆದಿದ್ದಾರೆ. ಮಾತುಕತೆ ಆಗಬೇಕು ಎಂದಾದರೆ ವಿಧಾನಸೌಧಕ್ಕೆ ಬರಬೇಕು. ಸರ್ಕಾರ ನಡೆಯುವ ಜಾಗದಲ್ಲಿ ಚರ್ಚೆ ಆಗಬೇಕು ಎಂದರು.

ಮುಖ್ಯಮಂತ್ರಿಯವರು ಸರಿಯಾದ ಸ್ಥಳಕ್ಕೆ ಅವರನ್ನು ಕರೆದಿದ್ದಾರೆ. ನಿಜವಾಗಿಯೂ ಕುಮಾರಸ್ವಾಮಿ ಅವರ ವಾದದಲ್ಲಿ ಶಕ್ತಿ ಇದ್ದರೆ ಅಲ್ಲಿಗೆ ಬರಲಿ ಎಂದು ಸವಾಲು ಹಾಕಿದರು.

ಬಿಡದಿ ಟೌನ್ ಶಿಪ್ ಯೋಜನೆಗೆ ಕೆಲ ರೈ ತರಷ್ಟೇ ವಿರೋಧ ಮಾಡುತ್ತಿದ್ದಾರೆ. ಅಲ್ಲಿನ ಹಲವು ರೈತರು ಟೌನ್ ಶಿಪ್ ಪರವಿದ್ದಾರೆ. ಸರ್ಕಾರದಿಂದ ಪರಿಹಾರ ಸಿಗುತ್ತದೆ ಎಂಬ ಖುಷಿಯಲ್ಲಿದ್ದಾರೆ. ಹಿಂದೆ ಕುಮಾರಸ್ವಾಮಿಯವರೇ ಭೂಸ್ವಾಧೀನ ಮಾಡಿರುವುದು ಎಂದು ಯತೀಂದ್ರ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com