ವೃದ್ಧರು, ಹಾಸಿಗೆ ಹಿಡಿದವರ ಆರೈಕೆ ಮಾಡುತ್ತಿರುವ ಉಡುಪಿ ಜಿಲ್ಲೆಯ ವಂಡ್ಸೆ ಗ್ರಾಮ ಪಂಚಾಯಿತಿ

2025ರ ಸೆಪ್ಟೆಂಬರ್‌ನಲ್ಲಿ ಆರಂಭವಾದ ಈ ಯೋಜನೆ, ಈಗ ಏಳು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 300ಕ್ಕೂ ಹೆಚ್ಚು ಜನರಿಗೆ ಉಚಿತ ಮನೆ ಆಧಾರಿತ ವೈದ್ಯಕೀಯ ಮತ್ತು ಮಾನಸಿಕ ಆರೈಕೆಯನ್ನು ಒದಗಿಸುತ್ತಿದೆ. ಈ ಪ್ರದೇಶದ ಅತ್ಯಂತ ಅಸಹಾಯಕರಿಗೆ ಇದು ನೆರವಾಗುತ್ತಿದೆ.
The staff of the Community Palliative Care Center at Vandse in Udupi district.
ಉಡುಪಿ ಜಿಲ್ಲೆಯ ವಂಡ್ಸೆಯ ಸಮುದಾಯ ಪ್ಯಾಲಿಯೇಟಿವ್ ಕೇರ್ ಕೇಂದ್ರದ ಸಿಬ್ಬಂದಿ
Updated on

ಮಂಗಳೂರು: ಕರಾವಳಿ ಕರ್ನಾಟಕ ಭಾಗದ ಹಲವು ಗ್ರಾಮಗಳು ನಿಶ್ಯಬ್ಧವಾಗಿದ್ದು, ವಲಸೆಯಿಂದ ಅನೇಕ ಮನೆಗಳು ಖಾಲಿಯಾಗಿರುವ ಸಂದರ್ಭದಲ್ಲಿ, ಒಂದು ಗ್ರಾಮ ಪಂಚಾಯಿತಿ ಅನಿರೀಕ್ಷಿತ ಜವಾಬ್ದಾರಿಯನ್ನು ಹೊತ್ತಿದೆ. ಕುಟುಂಬದವರು ದೂರವಿರುವ ಕಾರಣ ಏಕಾಂಗಿಯಾಗಿರುವ ವೃದ್ಧರು, ಹಾಸಿಗೆ ಹಿಡಿದಿರುವವರು ಮತ್ತು ರೋಗಿಗಳ ಆರೈಕೆಯ ಹೊಣೆಯನ್ನು ಗ್ರಾಮ ಪಂಚಾಯಿತಿ ಹೊತ್ತುಕೊಂಡಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ವಂಡ್ಸೆ ಗ್ರಾಮ ಪಂಚಾಯಿತಿ, ಗ್ರಾಮೀಣ ಸ್ಥಳೀಯ ಸಂಸ್ಥೆಯ ನೇತೃತ್ವದಲ್ಲಿ ಕರ್ನಾಟಕದ ಮೊದಲ ಸಮುದಾಯ ಆಧಾರಿತ ಪ್ಯಾಲಿಯೇಟಿವ್ ಕೇರ್ ಯೋಜನೆಯನ್ನು ಆರಂಭಿಸಿದೆ.

2025ರ ಸೆಪ್ಟೆಂಬರ್‌ನಲ್ಲಿ ಆರಂಭವಾದ ಈ ಯೋಜನೆ, ಈಗ ಏಳು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 300ಕ್ಕೂ ಹೆಚ್ಚು ಜನರಿಗೆ ಉಚಿತ ಮನೆ ಆಧಾರಿತ ವೈದ್ಯಕೀಯ ಮತ್ತು ಮಾನಸಿಕ ಆರೈಕೆಯನ್ನು ಒದಗಿಸುತ್ತಿದೆ. ಈ ಪ್ರದೇಶದ ಅತ್ಯಂತ ಅಸಹಾಯಕರಿಗೆ ಇದು ನೆರವಾಗುತ್ತಿದೆ.

The staff of the Community Palliative Care Center at Vandse in Udupi district.
ಉಡುಪಿ: 'ಸಮಾಧಾನ ಮಹೋತ್ಸವ' ವಿರೋಧಿಸಿ ಪ್ರತಿಭಟನೆ; ಹಿಂದು ಜಾಗರಣಾ ವೇದಿಕೆಯ ಮುಖಂಡರು, ಕಾರ್ಯಕರ್ತರು ಸೇರಿ 38 ಮಂದಿ ವಶಕ್ಕೆ

ಈ ಉಪಕ್ರಮಕ್ಕೆ ಕೇಂದ್ರ ಸರ್ಕಾರ ಘೋಷಿಸಿದ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿ 2025ರಲ್ಲಿ ‘ಆರೋಗ್ಯಕರ ಪಂಚಾಯಿತಿ’ ವಿಭಾಗದಲ್ಲಿ ವಂಡ್ಸೆ ಗ್ರಾಮ ಪಂಚಾಯಿತಿಗೆ ದ್ವಿತೀಯ ಬಹುಮಾನ ಲಭಿಸಿದೆ.

ಕರಾವಳಿ ಕರ್ನಾಟಕದ ಈ ಭಾಗದಲ್ಲಿ ಗಲ್ಫ್ ರಾಷ್ಟ್ರಗಳು, ಮುಂಬೈ ಮತ್ತು ಬೆಂಗಳೂರಿಗೆ ವಲಸೆ ಹೋಗುವುದು ಸಾಮಾನ್ಯವಾಗಿದೆ. ವೃದ್ಧ ಪೋಷಕರು ಪೂರ್ವಿಕರ ಮನೆಗಳಲ್ಲಿ ಒಂಟಿಯಾಗಿ ಉಳಿಯಬೇಕಾಗುತ್ತದೆ. ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ನೆರೆಹೊರೆಯವರೇ ಮೊದಲ ನೆರವಾಗುವವರಾಗುತ್ತಾರೆ. ಅನೇಕರು ತಮ್ಮ ಜೀವನದ ಕೊನೆಯ ವರ್ಷಗಳನ್ನು ಏಕಾಂಗಿ ಸ್ಥಿತಿಯಲ್ಲೇ ಕಳೆಯುತ್ತಾರೆ.

ಮಕ್ಕಳು ದೂರದಲ್ಲಿದ್ದಾಗ ವೃದ್ಧರು, ಪೋಷಕರ ಉಡುಪು ಬದಲಿಸುವುದು, ಫಿಸಿಯೋಥೆರಪಿ ಅಥವಾ ಸಮಾಲೋಚನೆಗಳಂತಹ ಸರಳ ಸೇವೆಗಳೂ ಕಷ್ಟವಾಗುತ್ತವೆ ಎಂದು ಈ ಯೋಜನೆಯನ್ನು ನಡೆಸುತ್ತಿರುವ ನಿರಾಮಯ ಸೊಸೈಟಿಯ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಹೇಳಿದ್ದಾರೆ. ಅನಾರೋಗ್ಯ ಅಥವಾ ವೃದ್ಧಾಪ್ಯದಲ್ಲಿಯೂ ಜನರು ಗೌರವಯುತವಾಗಿ ಬದುಕಲು ಸಾಧ್ಯವಾಗಬೇಕು ಎಂಬುದೇ ನಮ್ಮ ಉದ್ದೇಶ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕದ 2024-25ರ ಬಜೆಟ್‌ನಲ್ಲಿ ಗ್ರಾಮೀಣ ಪ್ಯಾಲಿಯೇಟಿವ್ ಕೇರ್ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆ ಘೋಷಿಸಿದ ಬಳಿಕ ಈ ಯೋಜನೆ ರೂಪುಗೊಂಡಿತು. ವಂಡ್ಸೆ ಗ್ರಾಮ ಪಂಚಾಯಿತಿ, ಚಿತ್ತೂರು, ಇದೂರು ಕುಂಜ್ನಾಡಿ, ಅಲೂರು, ಹಕ್ಲಾಡಿ, ಹೆಮ್ಮಾಡಿ ಮತ್ತು ಕೆರಾಡಿ ಗ್ರಾಮ ಪಂಚಾಯಿತಿಗಳೊಂದಿಗೆ ಕೈಜೋಡಿಸಿತು. ಈ ಪಂಚಾಯಿತಿಗಳು ಈಗಾಗಲೇ ಹತ್ತು ವರ್ಷಕ್ಕಿಂತ ಹೆಚ್ಚು ಕಾಲ ಘನ ತ್ಯಾಜ್ಯ ನಿರ್ವಹಣೆಯಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿವೆ.

ಒಟ್ಟಾಗಿ ಇವು ಕರ್ನಾಟಕ ಸೊಸೈಟೀಸ್ ರಿಜಿಸ್ಟ್ರೇಷನ್ ಕಾಯ್ದೆಯಡಿ ‘ನಿರಾಮಯ ಸೊಸೈಟಿ’ಯನ್ನು ಸ್ಥಾಪಿಸಿವೆ. ಯೋಜನೆ ಆರಂಭಿಸುವ ಮೊದಲು ಪಂಚಾಯಿತಿ ಪ್ರತಿನಿಧಿಗಳು, ಸಮುದಾಯ ಆಧಾರಿತ ಪ್ಯಾಲಿಯೇಟಿವ್ ಕೇರ್ ಕ್ಷೇತ್ರದಲ್ಲಿ ಭಾರತದ ಮುಂಚೂಣಿ ರಾಜ್ಯವೆಂದು ಪರಿಗಣಿಸಲ್ಪಡುವ ಕೇರಳಕ್ಕೆ ಭೇಟಿ ನೀಡಿದ್ದರು.

ತಿರುವನಂತಪುರಂ ಮೂಲದ ಪ್ಯಾಲಿಯಂ ಇಂಡಿಯಾ ಮತ್ತು ಕೇರಳದ ಯಶಸ್ವಿ ಪಂಚಾಯಿತಿಗಳ ಮಾರ್ಗದರ್ಶನದೊಂದಿಗೆ, ಗ್ರಾಮೀಣ ಕರ್ನಾಟಕಕ್ಕೆ ಹೊಂದುವಂತೆ ವಿಕೇಂದ್ರೀಕೃತ ಆರೈಕೆ ಜಾಲವನ್ನು ರೂಪಿಸಲಾಯಿತು.

ಪ್ರಸ್ತುತ ಈ ಯೋಜನೆ 305 ಫಲಾನುಭವಿಗಳಿಗೆ ಸೇವೆ ನೀಡುತ್ತಿದ್ದು, ಅವರಲ್ಲಿ 217 ಮಂದಿ ಹಿರಿಯ ನಾಗರಿಕರು. ಇವರಲ್ಲಿ 71 ಮಂದಿ ಹಾಸಿಗೆ ಹಿಡಿದಿದ್ದಾರೆ.

ನರ್ಸ್‌ಗಳು, ಫಿಸಿಯೋಥೆರಪಿಸ್ಟ್‌ಗಳು, ಸಮಾಲೋಚಕರು ಮತ್ತು ತರಬೇತಿ ಪಡೆದ ವೈದ್ಯರನ್ನು ಒಳಗೊಂಡ ಆರೈಕೆ ತಂಡವು ಬಾಡಿಗೆ ವಾಹನಗಳು ಹಾಗೂ ದಾನವಾಗಿ ದೊರೆತ ಆಂಬ್ಯುಲೆನ್ಸ್ ಮೂಲಕ ಏಳು ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮನೆಮನೆಗೆ ಭೇಟಿ ನೀಡುತ್ತಿದೆ.

ನೋವು ನಿರ್ವಹಣೆ, ಫಿಸಿಯೋಥೆರಪಿ, ಸಮಾಲೋಚನೆ ಮತ್ತು ಅಂತಿಮ ಹಂತದ ಆರೈಕೆಯವರೆಗೆ ವಿವಿಧ ಸೇವೆಗಳು ಒದಗಿಸಲಾಗುತ್ತಿವೆ. ಮೃತದೇಹ ಸಂಗ್ರಹಣೆಗೆ ಅಗತ್ಯವಾದ ಫ್ರೀಜರ್‌ನ್ನೂ ಉಚಿತವಾಗಿ ನೀಡಲಾಗುತ್ತಿದೆ.

ಯೋಜನೆಯ ವಾರ್ಷಿಕ ಬಜೆಟ್ 53.7 ಲಕ್ಷ ರೂಪಾಯಿಯಾಗಿದೆ. ಇದರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 7 ಲಕ್ಷ ರೂಪಾಯಿ ನೀಡಿದ್ದು, ಉಳಿದ ಹಣ ಪಂಚಾಯಿತಿಗಳ ಆರೋಗ್ಯ ಸೆಸ್ ನಿಧಿ, ಸಿಎಸ್ ಆರ್ ಸಹಾಯ, ದೇವಸ್ಥಾನಗಳು ಮತ್ತು ಸ್ಥಳೀಯ ದಾನಿಗಳಿಂದ ಬರುತ್ತಿದೆ.

ಮುಂದಿನ ಹಂತದಲ್ಲಿ, 1.28 ಏಕರೆ ಪಂಚಾಯಿತಿ ಜಮೀನಿನಲ್ಲಿ 4.5 ಕೋಟಿ ರೂಪಾಯಿ ವೆಚ್ಚದಲ್ಲಿ ವಿಶೇಷ ಪ್ಯಾಲಿಯೇಟಿವ್ ಕೇರ್ ಕೇಂದ್ರವನ್ನು ನಿರ್ಮಿಸುವ ಯೋಜನೆಯನ್ನು ಸೊಸೈಟಿ ಹೊಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com