ಸಿಎಂ ಡಿಕೆ ಶಿವಕುಮಾರ್‌ ನೂರು ದಿನಗಳ ಆಡಳಿತಕ್ಕೆ ಬಿಜೆಪಿ ನಾಯಕ ಫಿದಾ! ಏನಂದ್ರು ಗೊತ್ತಾ?

ಸ್ವತಂತ್ರ ಭಾರತದಲ್ಲಿ ನೂರೇ ದಿನದಲ್ಲಿ ಹೊಸ ಭರವಸೆ ಮೂಡಿಸಿದ ಸಿಎಂ ಅಂದ್ರೆ ಅದು ಡಿ.ಕೆ ಶಿವಕುಮಾರ್‌ ಎಂದು ಹೇಳಿ ಮುಖ್ಯ ಮಂತ್ರಿಗಳನ್ನು ಹಾಡಿ ಹೊಗಳಿದ್ದಾರೆ.
BJP Leader HM Vishwanth and CM DK Shivakumar
ಬಿಜೆಪಿ ಮುಖಂಡ ಹೆಚ್.ಎಂ.ವಿಶ್ವನಾಥ್, ಸಿಎಂ ಡಿಕೆ ಶಿವಕುಮಾರ್
Updated on

ಹಾಸನ: ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರ ನೂರು ದಿನಗಳ ಆಡಳಿತಕ್ಕೆ ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಹೆಚ್.ಎಂ.ವಿಶ್ವನಾಥ್ ಫಿದಾ ಆಗಿದ್ದಾರೆ.

ಸ್ವತಂತ್ರ ಭಾರತದಲ್ಲಿ ನೂರೇ ದಿನದಲ್ಲಿ ಹೊಸ ಭರವಸೆ ಮೂಡಿಸಿದ ಸಿಎಂ ಅಂದ್ರೆ ಅದು ಡಿ.ಕೆ ಶಿವಕುಮಾರ್‌ ಎಂದು ಹೇಳಿ ಮುಖ್ಯ ಮಂತ್ರಿಗಳನ್ನು ಹಾಡಿ ಹೊಗಳಿದ್ದಾರೆ.

ಸಕಲೇಶಪುರದ ಎಪಿಎಂಸಿ ಆವರಣದಲ್ಲಿ ನಡೆದ ಕಸ್ತೂರಿ ರಂಗನ್ ವರದಿ ಕುರಿತ ಸಂವಾದ ಸಭೆಯಲ್ಲಿ ಮಾತನಾಡಿದ ಅವರು, ನನ್ನ ಪಕ್ಷ ಬೇರೆ ಇರಬಹುದು, ಆದರೆ ಮುಂದೆಯೂ ಇವರ ನಾಯಕತ್ವ ಇದ್ದರೆ ನಾನು ಸ್ವಾಗತ ಮಾಡ್ತಿನಿ. ಅವರಿಗೆ ಹದಿನೆಂಟು ತಿಂಗಳು ಸಾಲಲ್ಲ, ನೂರು ತಿಂಗಳು ಇರಬೇಕು ಎಂದು ಹೇಳಿದ್ದಾರೆ.

BJP Leader HM Vishwanth and CM DK Shivakumar
Watch | ಒಕ್ಕಲಿಗರೆಲ್ಲ ಶಿವಕುಮಾರ್ ನೋಡಿ ಹಾಕ್ತಾರಾ? ಗೌಡರನ್ನ ನೋಡೇ ವೋಟ್ ಹಾಕೋದು...

ಮಲೆನಾಡಿಗರು ಒಂದು ರೀತಿಯಲ್ಲಿ ಅನಾಥರಾಗಿದ್ದಾರೆ. ಕೇಳುವವರು ಯಾರು ಇಲ್ಲದಂತಾಗಿದೆ. ಎಲ್ಲಾ ನಂಬಿಸಿ ಮೋಸ ಮಾಡಿದ್ದಾರೆ. ನಿಮ್ಮ ಮನೆಗೆ ನಮ್ಮ ಮಲೆನಾಡಿನ ಹೆಣ್ಣು ಮಗಳನ್ನು ಕೊಟ್ಟಿದ್ದೇವೆ. ಸಿದ್ಧಾರ್ಥ ಹೆಗ್ಗಡೆ ಅವರ ಕುಟುಂಬ ಬಿದ್ದಾಗ ನಿಮ್ಮ ಮನೆಯ ಮಗಳನ್ನು ಆ ಮನೆಗೆ ಕೊಟ್ಟು ಆ ಕುಟುಂಬವನ್ನು ಎತ್ತಿ ನಿಲ್ಲಿಸಿದ್ದೀರಿ. ಈ ಭಾಗದಲ್ಲಿ ಸಂಬಂಧ, ಸ್ನೇಹ ನಿಮಗೆ ಇದೆ ಎಂದಿದ್ದಾರೆ.

ಕಸ್ತೂರಿ ರಂಗನ್ ಬೇಡ ಅನ್ನಲ್ಲ ಹೊಸದಾಗಿ ಸರ್ವೆ ಮಾಡಿಸೋಣ ಅದರಲ್ಲಿ ಏನು ಬರುತ್ತೆ ನೋಡೋಣ. ಅಲ್ಲಿಯವರೆಗೆ ವರದಿಯನ್ನು ತಡೆ ಹಿಡಿಯಿರಿ ಎಂದು ಅವರು ಒತ್ತಾಯಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com