ಶಿವರಾತ್ರಿಯಂದು ವೈಷ್ಣವರೂ ಶಿವನಿಗೆ ಪೂಜೆ ಸಲ್ಲಿಸುತ್ತಾರೆ

ಶಿವರಾತ್ರಿ ಎಂದರೆ ಕೇವಲ ಶೈವರು ಮಾತ್ರ ಹೆಚ್ಚು ಆಚರಣೆ ಮಾಡುವ ಹಬ್ಬವಲ್ಲ, ವೈಷ್ಣವ ಸೇರಿದಂತೆ ಹಲವು ಪಂಥದವರು ಶಿವನಿಗೆ ಶಿವರಾತ್ರಿಯಂದು ವಿಶೇಷ ಪೂಜೆ ಸಲ್ಲಿಸುತ್ತಾರೆ.
ಗೋಪೀಶ್ವರ ದೇವಾಲಯ
ಗೋಪೀಶ್ವರ ದೇವಾಲಯ

ಮಹಾಶಿವರಾತ್ರಿ ಎಂದರೆ ಕೇವಲ ಒಂದು ವರ್ಗ ಮಾತ್ರ ಹೆಚ್ಚು ಆಚರಣೆ ಮಾಡುವ ಹಬ್ಬವಲ್ಲ, ಶೈವ, ವೈಷ್ಣವ ಸೇರಿದಂತೆ ಹಲವು ಪಂಥದವರು ಶಿವನಿಗೆ ಶಿವರಾತ್ರಿಯಂದು ವಿಶೇಷ ಪೂಜೆ ಸಲ್ಲಿಸುತ್ತಾರೆ. ಶಿವರಾತ್ರಿಯಂದು ಬೃಂದಾವನದಲ್ಲಿರುವ ಗೋಪಿಶ್ವರ ಮಹಾದೇವನ ದೇವಾಲಯಕ್ಕೆ ತೆರಳುವ ನೀಡುವ ಗೌಡಿಯಾ ವೈಷ್ಣವರು ಅಲ್ಲಿರುವ ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ರಾತ್ರಿ ಇಡಿ ಶಿವನ ಧ್ಯಾನದಲ್ಲಿ ಭಜನೆ ಮಾಡುತ್ತಾ ಜಾಗರಣೆ ಆಚರಿಸುತ್ತಾರೆ.

ಇದು ಉತ್ತರ ಭಾರತದ ನಿದರ್ಶನವಾದರೆ ದಕ್ಷಿಣ ಭಾರತದಲ್ಲೂ ಇಂತಹ ಕೆಲವು ಉದಾಹರಣೆಗಳು ಕಾಣಸಿಗುತ್ತವೆ. ಯತಿರಾಜ ಮಠದ ಪೀಠಾಧಿಪತಿಗಳಾಗಿದ್ದ ಅಸುರಿ ಶ್ರೀನಿವಾಸ ಅಯ್ಯಂಗಾರ್ ಅವರು ಯತಿರಾಜ ಮಠ, ಪೀಠಾಧಿಕಾರ ಸ್ವೀಕಾರ ಮಾಡುವುದಕ್ಕಿಂತ ಮುಂಚೆ ಶಿವಾಲಯದ ಬಗ್ಗೆಯೇ ಒಂದು ಪುಸ್ತಕ ಬರೆದಿದ್ದರು. ದ್ವೈತ ಸಿದ್ಧಾಂತದ ವೈಷ್ಣವ ಪಂಥದ ವ್ಯಾಸರಾಜ ಪೀಠದ ವಿದ್ಯಾಪಯೋನಿಧಿ ತೀರ್ಥರು, ಆ ಮಠದಲ್ಲಿರುವ ಸ್ಪಟಿಕ ಲಿಂಗಕ್ಕೆ ಶಿವರಾತ್ರಿ ದಿನದಂದು ಇಡಿ ರಾತ್ರಿಯಲ್ಲಿ ಏಕವಾರು ರುದ್ರಾಭಿಷೇಕ ಮಾಡುತ್ತಿದ್ದರು ಎಂಬುದಕ್ಕೆ ಉಲ್ಲೇಖವಿದೆ.
ಸನಾತನ ಧರ್ಮದ ಪ್ರಕಾರ ಮೋಕ್ಷ ಪಡೆಯುವುದಕ್ಕೆ ಶಿವನ ಅನುಗ್ರಹ ಅತ್ಯಗತ್ಯ.  ಆದ್ದರಿಂದ ಶಿವರಾತ್ರಿಯಂದು ವೈಷ್ಣವರು ಸೇರಿದಂತೆ ಹಲವು ಪಂಥದವರೂ ಶಿವನನ್ನು ಆರಾಧಿಸುವ ಅನೇಕ ಉದಾಹರಣೆಗಳು ಸಿಗುತ್ತವೆ.   

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com