ನಮ್ಮ ಬೆಂಗಳೂರು ಪುರಸ್ಕಾರ: ಆಯ್ಕೆ ಶುರು

ನಮ್ಮ ಬೆಂಗಳೂರು ಪ್ರತಿಷ್ಠಾನ ನೀಡಲಿರುವ ನಮ್ಮ ಬೆಂಗಳೂರು ಪುರಸ್ಕಾರ...
ನಮ್ಮ ಬೆಂಗಳೂರು
ನಮ್ಮ ಬೆಂಗಳೂರು

ಬೆಂಗಳೂರು: ನಮ್ಮ ಬೆಂಗಳೂರು ಪ್ರತಿಷ್ಠಾನ ನೀಡಲಿರುವ ನಮ್ಮ ಬೆಂಗಳೂರು ಪುರಸ್ಕಾರಕ್ಕೆ ಸಕ್ರಿಯ ನಾಗರಿಕರನ್ನು ಆಯ್ಕೆ ಮಾಡಲು ವಿದ್ಯಾರ್ಥಿಗಳು ತೆರಳಲಿದ್ದಾರೆ.

ಪೀಣ್ಯದ ಡಾ.ರಾಜ್‌ಕುಮಾರ್ ಮೈದಾನದಲ್ಲಿ ಪ್ರಕ್ರಿಯೆ ಆರಂಭವಾಗಲಿದ್ದು ಚಲನಚಿತ್ರ ನಿರ್ಮಾಪಕ ಎಂ.ಜಿ.ಶ್ರೀನಿವಾಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಸಾಮಾನ್ಯ ನಾಗರಿಕರು ಹಾಗೂ ಅವರ ಸೇವೆಯನ್ನು ಗುರುತಿಸಿ ಪುರಸ್ಕಾರ ನೀಡಲಾಗುತ್ತದೆ. ಜನರ ಮಧ್ಯೆಯೇ ಇದ್ದು ಅವರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವವರು, ಸಾಮಾನ್ಯರಾಗಿದ್ದು ಹೊಸದೊಂದ ಬದಲಾವಣೆಯನ್ನು ತಂದಿರುವಂಥವರನ್ನು ಈ ಪುರಸ್ಕಾರಕ್ಕೆ ಗುರುತಿಸಲಾಗುತ್ತದೆ. ವಿದ್ಯಾರ್ಥಿಗಲು ಇಡಿ ಬೆಂಗಳೂರನ್ನು ಸುತ್ತಾಡಿ, ಹುಡುಕಾಟ ನಡೆಸಿ ಅವರ ನೆಚ್ಚನ ಹೀರೋವನ್ನು ಆಯ್ಕೆ ಮಾಡುತ್ತಾರೆ.

ನಾಗರಿಕರೇ ಅವರೊಳಗಿರುವ ಉತ್ತಮರನ್ನು ಗುರುತಿಸುವುದರಿಂದ ಈ ಪುರಸ್ಕಾರ ಇತರೆ ಪುರಸ್ಕಾರಗಳಿಗಿಂದ ವಿಭಿನ್ನ ಎನಿಸುತ್ತದೆ.

ಉಳಿದವರಿಗಿಂತ ತಾವು ಹೇಗೆ ಭಿನ್ನ ಎಂಬುದನ್ನೂ ಸ್ಪಷ್ಟಪಡಿಸುವ ಅವಕಾಶ ನೀಡಲಾಗುತ್ತದೆ. ಪ್ರಶಸ್ತಿ 1 ಲಕ್ಷ ನಗದನ್ನು ಒಳಗೊಂಡಿರುತ್ತದೆ. ಪ್ರಕ್ರಿಯೆ ಡಿ.10 ರಂದು ಆರಂಭವಾಗಲಿದ್ದು ಡಿ.11 ಕ್ಕೆ ಜಯನಗರ, ಜೆಪಿ ನಗರ, ಬಿಟಿಎಂ, ಬನ್ನೇರುಘಟ್ಟ, ಡಿ.12ರಂದು ವೈಟ್ ಫೀಲ್ಡ್, ಮಾರತ್ತಹಳ್ಳಿ, ಸರ್ಜಾಪುರ, ಡಿ.13ಕ್ಕೆ ಸದಾಶಿವ ನಗರ, ಮಲ್ಲೇಶ್ವರ, ಶೇಷಾದ್ರಿಪುರ, ಗಾಂಧಿನಗರ, ಡಿ.14-ಮೈಸೂರು ರಸ್ತೆ, ವಿಜಯನಗರ, ರಾಜಾಜಿನಗರ, ಡಿ. 15 ಗಾಂಧಿ ಬಜಾರ್, ಹನುಮಂತನಗರ, ಗಿರಿನಗರ, ಡಿ.16ಕ್ಕೆ ಕೆಆರ್‌ಪುರ, ರಾಮಮೂರ್ತಿನಗರ, ಕಮ್ಮನಹಳ್ಳಿಗಳಿಗೆ ತೆರಳಿ ಹೀರೋಗಳನ್ನು ಆಯ್ಕೆ ಮಾಡಲಾಗುತ್ತದೆ.

ವಿವರಗಳಿಗೆ:
ಮೊ: 9591985287, 9036288857.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com