ಬೆಂಗಳೂರು: ಹಲಸೂರು ಕೆರೆ ಸಮೀಪ ಕಾರು ಅಡ್ಡಗಟ್ಟಿ ಸುಲಿಗೆ ಮಾಡಿ ಪರಾರಿಯಾಗುತ್ತಿದ್ದ ಇಬ್ಬರು ಸುಲಿಗೆಕೋರರನ್ನು ಗಸ್ತಿನಲ್ಲಿದ್ದ ಭಾರತಿನಗರ ಪೊಲೀಸರು ಬಂಧಿಸಿದ್ದಾರೆ.
ಆರ್.ಟಿ. ನಗರ ಸುಲ್ತಾನ್ಪಾಳ್ಯ ನಿವಾಸಿ ಅನಿಲ್ಕುಮಾರ್ (38) ಹಾಗೂ ಕೋಲಾರ ಜಿಲ್ಲೆ ಮಾಲೂರು ಮೂಲದ ಫೈಜುಲ್ (45) ಬಂಧಿತರು.
ಶನಿವಾರ ರಾತ್ರಿ 8.30ರ ಸುಮಾರಿಗೆ ಸಿದ್ಧಾರ್ಥ ಎಂಬುವರು ತಮ್ಮ ಗೆಳತಿಯೊಂದಿಗೆ ಕಾರಿನಲ್ಲಿ ಹಲಸೂರು ಕೆರೆ ಬಳಿ ಹೋಗುತ್ತಿದ್ದಾಗ ಪಲ್ಸರ್ ಬೈಕ್ನಲ್ಲಿ ವೇಗವಾಗಿ ಬಂದು ಕಾರು ಅಡ್ಡಗಟ್ಟಿದ್ದಾರೆ.
ಏರುಧ್ವನಿಯಲ್ಲಿ ತಾವು ಕ್ರೈ ಬ್ರ್ಯಾಂಚ್ ಪೊಲೀಸರು, ಕೆಳಗಿಳಿಯಿರಿ ಎಂದು ಜೋರು ಮಾಡಿದ್ದಾರೆ. ಅಲ್ಲದೇ ಜೇಬಿಗೆ ಕೈ ಹಾಕಿ ಪರ್ಸ್ನಲ್ಲಿದ್ದ 1700 ನಗದು ಕಿತ್ತುಕೊಂಡು ಪರಾರಿಯಾಗುವ ಯತ್ನದಲ್ಲಿದ್ದರು. ಅದೇ ವೇಳೆ ಗಸ್ತಿನಲ್ಲಿದ್ದ ಪೊಲೀಸರು ಆರೋಪಿಗಳನ್ನು ಹಿಡಿದುಕೊಂಡಿದ್ದಾರೆ.
ಆರೋಪಿಗಳು ಸುಲಿಗೆ ಮಾಡಿದ 1700 ನಗದು, ಕೃತ್ಯಕ್ಕೆ ಬಳಸಿದ್ದ ಬೈಕ್ ಹಾಗೂ 2 ಮೊಬೈಲ್ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.